ETV Bharat / state

ಪತ್ನಿ ಮೇಲೆ ಅನುಮಾನ: ಹೊಲದಲ್ಲಿಯೇ ಸಲಾಕೆಯಿಂದ ಹೊಡೆದು ಕೊಂದ ಪತಿ

author img

By

Published : Dec 15, 2020, 11:39 AM IST

ಯಾದಗಿರಿ ತಾಲೂಕಿನ ಮಾಧ್ವಾರ ಗ್ರಾಮದಲ್ಲಿ ಪತ್ನಿಯ ಶೀಲ ಶಂಕಿಸಿ ಪತಿ ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿರುವ ಪ್ರಕರಣ ನಡೆದಿದೆ.

husband killed his wife in yadgir
ಪತ್ನಿ ಕೊಂದ ಪತಿ

ಯಾದಗಿರಿ: ಶೀಲ ಶಂಕಿಸಿದ ಪತಿ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಯಾದಗಿರಿ ತಾಲೂಕಿನ ಮಾಧ್ವಾರ ಗ್ರಾಮದಲ್ಲಿ ಜರುಗಿದೆ.

husband killed his wife in yadgir
ಪತ್ನಿ ಕೊಂದ ಪತಿ
ಮಾಧ್ವಾರ ಗ್ರಾಮದ ಜಮೀನಿನಲ್ಲಿ ಪತ್ನಿಯನ್ನು ಕಬ್ಬಿಣದ ಸಲಾಕೆಯಿಂದ ಜಜ್ಜಿ ಕೊಲೆಗೈದು ಆರೋಪಿ ಚೌಡಪ್ಪ ಪರಾರಿಯಾಗಿದ್ದಾನೆ. ಕೊಲೆಯಾದ ಮಹಿಳೆ ಹಾಗೂ ಪತಿ ಚೌಡಪ್ಪ ಮತ್ತು ಅವರ ಮಗ ಜಮೀನಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.
ಪುತ್ರ ಕುರಿ‌ ಮೇಯಿಸಲು ದೂರ ತೆರಳಿದ ವೇಳೆ ಸುತ್ತಲೂ ಯಾರೂ ಇಲ್ಲದ್ದನ್ನು ಗಮನಿಸಿ ಚೌಡಪ್ಪ ಹತ್ಯೆ ಮಾಡಿದ್ದಾನೆ.

ತಂದೆ ಓಡಿ ಹೋಗುವುದನ್ನು ಕಂಡ ಮಗ, ಸ್ಥಳಕ್ಕೆ ಬಂದು ನೋಡಿದಾಗ ತಾಯಿ ಕೊಲೆಯಾಗಿದ್ದು ಕಂಡುಬಂದಿದೆ. ನಂತರ ಸಂಬಂಧಿಕರಿಗೆ ಮಾಹಿತಿ ತಿಳಿಸಿದ್ದಾನೆ. ಆರೋಪಿ ಕಳೆದ 9 ವರ್ಷಗಳ ಹಿಂದೆ ಮದುವೆಯಾಗಿದ್ದನು. ಆದ್ರೆ, ಪತ್ನಿಯ ಮೇಲೆ ಸಂಶಯ ಹೊಂದಿದ್ದ ಎನ್ನಲಾಗುತ್ತಿದೆ. ಈ ವಿಷಯಕ್ಕೆ ಇಬ್ಬರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಸೈದಾಪುರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಕೇಸು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:RSS ಮಂಗಳೂರು ವಿಭಾಗ ಗ್ರಾಮವಿಕಾಸ ಪ್ರಮುಖ್ ವೆಂಕಟ್ರಮಣ ಹೊಳ್ಳ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.