ಯಾದಗಿರಿ: ವಿದ್ಯುತ್ ಸ್ಪರ್ಶಿಸಿದ ಮಗುವೊಂದು ಮೃತಪಟ್ಟ ಘಟನೆ ತಾಲೂಕಿನ ಸಮೀಪದ ತಳ್ಳಳ್ಳಿ ಬಿ. ಗ್ರಾಮದಲ್ಲಿ ಇಂದು ಸಂಭವಿಸಿದೆ. ತಳ್ಳಳ್ಳಿ ಗ್ರಾಮದ ನಿವಾಸಿ ಅಜಿತ್ ಕುಮಾರ್ ಅವರ ಪುತ್ರ ಹಣಮಂತರಾಯ (4) ಮೃತಪಟ್ಟಿದ್ದಾನೆ. ಸುಮಾರು 45 ವರ್ಷಗಳ ಹಿಂದೆ ಹಾಕಿರುವ ವೈರು ಬದಲಾಯಿಸಿ ಕೂಡಲೇ ಹೊಸ ತಂತಿಗಳನ್ನು ಅಳವಡಿಸಬೇಕೆಂದು ತಳ್ಳಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಜಿಗಣಿ: ಪೊಲೀಸ್ ಠಾಣೆಯೆದುರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ವ್ಯಕ್ತಿ ಸಾವು