ಯಾದಗಿರಿ: ರಾಯಚೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬಿ ವಿ ನಾಯಕ್ ಅವರು ಹಾಲಿ ಶಾಸಕ ರಾಜುಗೌಡಗೆ ಪರೋಕ್ಷವಾಗಿ ತೀರುಗೇಟು ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಜುಗೌಡರು ನನ್ನ ಹೇಳಿಕೆಯನ್ನು ತಿರುಚಿ ಹೇಳಿದ್ದಾರೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರಬಿಡುವ ವ್ಯಕ್ತಿ ನಾನಲ್ಲ. ಪಕ್ಷದ ಹೆಸರಿನಲ್ಲಿ ನೀವು ಬ್ರಹ್ಮಾಸ್ತ್ರ ಹೂಡುತ್ತಿದ್ದೀರಾ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪಾಕಿಸ್ತಾನಿ ಸೈನಿಕರ ಮೇಲೆ ದಾಳಿ ಮಾಡಿ ಯುದ್ದದಲ್ಲಿ ಜಯಭೇರಿ ಬಾರಿಸಿ ದೇಶ ರಕ್ಷಣೆ ಮಾಡಿದೆ. ಆದರೆ ನಿಮ್ಮ ಹಾಗೆ, ನಾವು ಚುನಾವಣೆಯಲ್ಲಿ ಬಳಕೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.