ETV Bharat / state

ಸಿದ್ದರಾಮಯ್ಯರ ಹಿಂದಿನ ಗತ್ತು, ಆರ್ಭಟ ಈ ಬಾರಿ ಕಾಣುತ್ತಿಲ್ಲ..CM ಬಗ್ಗೆ ಮೃದು ಧೋರಣೆ ತೋರಿದ ಶಾಸಕ ಯತ್ನಾಳ್​

author img

By ETV Bharat Karnataka Team

Published : Aug 29, 2023, 10:45 AM IST

MLA Basanagouda Patil Yatnal: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಮೃದು ಧೋರಣೆ ವ್ಯಕ್ತಪಡಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಹಿಂದಿನ ಗತ್ತು, ಆರ್ಭಟ ಈ ಬಾರಿ ಕಾಣುತ್ತಿಲ್ಲ ಎಂದರು.

MLA Basanagouda Patil Yatnal
ಶಾಸಕ ಬಸನಗೌಡ ಪಾಟೀಲ ಯತ್ನಾಳ್

ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಯತ್ನಾಳ್​

ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಮೃದು ಧೋರಣೆ ವ್ಯಕ್ತಪಡಿಸಿದ ಪ್ರಸಂಗ ಸೋಮವಾರ ಸಂಜೆ ಜಿಲ್ಲೆಯ ದೇವರ ಹಿಪ್ಪರಗಿ ಪಟ್ಟಣದಲ್ಲಿ ನಡೆದಿದೆ.

ದೇವರ ಹಿಪ್ಪರಗಿ ಪಟ್ಟಣದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಯತ್ನಾಳ್​, ಸಿದ್ದರಾಮಯ್ಯ ಅವರ ಹಿಂದಿನ ಗತ್ತು, ಆರ್ಭಟ ಈ ಬಾರಿ ಕಾಣುತ್ತಿಲ್ಲ. ಈ ಬಗ್ಗೆ ಅವರನ್ನು ನಾನು ಖುದ್ದು ವಿಚಾರಿಸಿದಾಗ "ಇದು ನನ್ನ ಕೊನೆಯ ಅವಧಿಯಾಗಿದೆ ಎಂದು ಭಾವುಕರಾಗಿದ್ದರು. ಐದು ವರ್ಷ ಉತ್ತಮ ಆಡಳಿತ ನೀಡಬೇಕಾಗಿದೆ ಎಂದು ಹೇಳಿದರು. ಆ ವೇಳೆ ಐದು ವರ್ಷ ನೀವೇ ಸಿಎಂ ಇರುತ್ತೀರಿ ತಾನೆ? ಎಂದು ನಾನು ನಗೆ ಚಟಾಕಿ ಹಾರಿಸಿದೆ. ಆಗ ನೀನು ಮತ್ತೆ ಬೆಂಕಿ ಹಚ್ಚುವ ಕೆಲಸ ಮಾಡಬೇಡ" ಎಂದು ಹೇಳಿದರು. ಅದಕ್ಕೆ ನಾನು ಸುಮ್ಮನಾದೆ. ರಾಜಕಾರಣ ಬೇರೆ, ಆತ್ಮೀಯತೆ ಬೇರೆ. ಅಧಿವೇಶನದ ವೇಳೆ ನಾನು ಅಸ್ವಸ್ಥನಾಗಿ ಆಸ್ಪತ್ರೆಗೆ ದಾಖಲಾದಾಗ ಖುದ್ದು ಸಿಎಂ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಲು ಬಂದಿದ್ದರು. ಆ ವೇಳೆ ನಡೆದ ಪ್ರಸಂಗ ನೆನೆಪಿಸಿಕೊಂಡಿದ್ದೇನೆ ಎಂದರು.

ಒಮ್ಮೆ ಜನಪ್ರತಿನಿಧಿಯಾದ ಮೇಲೆ ಅವರಿಗೆ ಸಿಗುವ ಗೌರವ ಎಲ್ಲರೂ ನೀಡಲೇ ಬೇಕು. ಈಗ ಕೆಲವರು ಇದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರು ಆಗಿರುವುದಿಲ್ಲ. ಆದರೂ ಅವರ ನಡುವಳಿಕೆ ನೋಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಶಾಸಕರು ಸಿಎಂ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಾಸಕರಾದವರು ಯಾವುದೇ ಪಕ್ಷದವರಾಗಿದ್ದರೂ ಸಹ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಲು ಸಿಎಂ ಭೇಟಿಯಾಗಲೇ ಬೇಕು.‌ ಅದನ್ನೇ ಹೈಡ್​ಲೈನ್ ಮಾಡಲಾಗುತ್ತದೆ. ಸಿಎಂ ಏನು ಪಾಕಿಸ್ತಾನ ಮುಖ್ಯಮಂತ್ರಿನಾ?. ಮುಖ್ಯಮಂತ್ರಿ ಅಂದ್ರೆ ಶಾಸಕರು ಅವರು ಬಳಿ ಹೋಗೋದು ಸಹಜ ಎಂದು ಯತ್ನಾಳ್​ ಸಮರ್ಥಿಸಿಕೊಂಡರು.

ಕಾಂಗ್ರೆಸ್‌ನಿಂದ 'ಆಪರೇಷನ್ ಹಸ್ತ': ಲೋಕಸಭೆ ಚುನಾವಣೆಯಲ್ಲಿ ಸೋಲುವ ಭಯದಿಂದ ಆಪರೇಷನ್ ಹಸ್ತ ಎನ್ನುವುದನ್ನು ಕಾಂಗ್ರೆಸ್ ನಾಯಕರು ಸೃಷ್ಟಿಸಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಟೀಕಿಸಿದರು. ನಿನ್ನೆ (ಸೋಮವಾರ) ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿಯಲ್ಲಿದ್ದಾಗ ಮಂತ್ರಿ ಸೇರಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಅಧಿಕಾರ ಅನುಭವಿಸಿದ್ದಾರೆ. ಪ್ರಧಾನಿ ಮೋದಿ ಕಾಲದಲ್ಲಿ ಯಾರೂ ಬಿಜೆಪಿ ಬಿಟ್ಟು ಹೋಗುವುದಿಲ್ಲ. ಮೋದಿ ವಿಶ್ವನಾಯಕ, ದೇಶವನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಆಪರೇಷನ್ ಹಸ್ತ ಕೇವಲ ಕಾಂಗ್ರೆಸ್ ಸೃಷ್ಟಿ ಅಷ್ಟೇ ಎಂದರು.

ರಾಜ್ಯದಲ್ಲಿ 135 ಸ್ಥಾನಗಳಿಸಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿದೆ. ಆದರೂ ಆ ನಾಯಕರಲ್ಲಿ ಭಯವೇಕೆ ಎಂದು ಅರ್ಥವಾಗುತ್ತಿಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಗುತ್ತದೆ ಎನ್ನುವ ಭಯದಲ್ಲಿ ಬಿಜೆಪಿ ಮಾಜಿ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಆದರೆ, ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದರು.

ಇದನ್ನೂ ಓದಿ: ಲೋಕಸಭೆ ಚುನಾವಣೆ ಸೋಲುವ ಭಯಕ್ಕೆ ಕಾಂಗ್ರೆಸ್‌ನಿಂದ 'ಆಪರೇಷನ್ ಹಸ್ತ' ಸೃಷ್ಟಿ: ಯತ್ನಾಳ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.