ETV Bharat / state

ನಾನೂ ಸಹ ದೇವೇಗೌಡರ ಗರಡಿಯಲ್ಲಿಯೇ ಬೆಳೆದವನು: ಸಚಿವ ವಿ.ಸೋಮಣ್ಣ

author img

By

Published : Oct 27, 2021, 12:22 PM IST

ಸಿಂದಗಿ ಹಾಗೂ ಹಾನಗಲ್​ನಲ್ಲಿ ನೂರಕ್ಕೆ ನೂರರಷ್ಟು ನಾವು ಗೆಲುವು ಸಾಧಿಸುತ್ತೇವೆ ಎಂದು ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Minister V Somanna
ವಿ.ಸೋಮಣ್ಣ

ವಿಜಯಪುರ: ದೇವೇಗೌಡರ ಗರಡಿಯಲ್ಲಿಯೇ ನಾನೂ ಸಹ ಬೆಳೆದವನು. ಕುಮಾರಸ್ವಾಮಿ ಅವರ ತಂದೆಯ ಬಗ್ಗೆ ನನಗೂ ಚೆನ್ನಾಗಿ ಗೊತ್ತಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಬಿಜೆಪಿ ನಾಯಕರ ವಿರುದ್ಧ ಹೆಚ್​​.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸುತ್ತಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಇಂದು ಸಂಜೆಯವರೆಗೂ ಅವರಿಗೆ ಸಮಯವಿದೆ, ಅವರು ಏನು ಬೇಕಾದರೂ ಹೇಳಲಿ, ನಾವು ಕೇಳುತ್ತೇವೆ ಎಂದರು.

ನಾನೂ ಸಹ ದೇವೇಗೌಡರ ಗರಡಿಯಲ್ಲಿಯೇ ಬೆಳೆದವನು: ಸಚಿವ ವಿ.ಸೋಮಣ್ಣ

ವಿಜಯಪುರದಲ್ಲಿ ಮಾತನಾಡಿದ ಅವರು, ಸಿಂದಗಿಯಲ್ಲಿ ನೂರಕ್ಕೆ ನೂರರಷ್ಟು ನಾವೇ ಗೆಲ್ತೇವೆ. ಸಿಂದಗಿಗಿಂತಲೂ ಅಧಿಕ ಮತದಲ್ಲಿ ಹಾನಗಲ್​ನಲ್ಲಿ ಜಯ ದಾಖಲಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಲಮೇಲದಲ್ಲಿ 16 ಬೂತ್​ಗಳಿವೆ ಇಲ್ಲಿ 14 ಸಾವಿರ ಮತದಾರರಿದ್ದಾರೆ. ಅವರೆಲ್ಲರೂ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ. ಸಿಂದಗಿಯ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಿದ್ದೇವೆ ಎಂದು ಭರವಸೆ ಕೊಟ್ಟರು.

ಸಿಎಂ ಬೊಮ್ಮಾಯಿ ರೈತರ ಮಕ್ಕಳಿಗೆ ಸ್ಕಾಲರ್​​​ಶಿಪ್ ಕೊಟ್ಟಿದಾರೆ. ವೃದ್ಧರಿಗೆ ಮಾಸಾಶನ ಹೆಚ್ಚು ಮಾಡಿದ್ದಾರೆ. ಬಿಜೆಪಿ ಗೆಲ್ಲಲು ಇವಿಷ್ಟು ಸಾಕು. ಚುನಾವಣೆ ಬಳಿಕ ಸಚಿವರು ಇಲ್ಲಿಗೆ ಬಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.

ಇದನ್ನೂ ಓದಿ: 341ನೇ ವಿಧಿಯಲ್ಲಿರುವ ಗೊಂದಲಗಳನ್ನು ಬಗೆಹರಿಸುವ ಶಕ್ತಿ ಬಿಜೆಪಿ ಸರ್ಕಾರಕ್ಕಿದೆ: ಎ.ನಾರಾಯಣಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.