ETV Bharat / state

ನಿಮ್ಮ ಚಡ್ಡಿ ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ಮಾಡಿ, ನಂತರ ಆರ್​ಎಸ್​ಎಸ್ ಚಡ್ಡಿ ಸುಡುವಂತ್ರಿ : ಪ್ರಲ್ಹಾದ್ ಜೋಶಿ

author img

By

Published : Jun 6, 2022, 5:35 PM IST

ಸಿದ್ದರಾಮಯ್ಯ ಮತ್ತು ಕಾಂಗ್ರೆಸ್​ನವರ ಚಡ್ಡಿ ಲೂಸ್ ಆಗಿದೆ. ಹಾಗಾಗಿ, ಅವರು ನಮ್ಮ ಚಡ್ಡಿ ಸುಡಲು ಹೊರಟಿದ್ದಾರೆ. ಉತ್ತರಪ್ರದೇಶದಲ್ಲಿ ಜನ ಅವರ ಚಡ್ಡಿ ಪೂರ್ತಿ ಕಳೆದು ಕಳಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸಿದ್ದರಾಮಯ್ಯನವರ ಹೇಳಿಕೆಗೆ ಟಾಂಗ್ ನೀಡಿದ್ದಾರೆ..

Pralhad Joshi
ಪ್ರಲ್ಹಾದ್ ಜೋಶಿ

ವಿಜಯಪುರ : ಸಿದ್ದರಾಮಯ್ಯ ಚಡ್ಡಿ ಸುಡುವ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟಾಂಗ್ ನೀಡಿದ್ದಾರೆ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್​ನವರ ಚಡ್ಡಿ ಲೂಸ್ ಆಗಿದೆ. ಹಾಗಾಗಿ, ಅವರು ನಮ್ಮ ಚಡ್ಡಿ ಸುಡಲು ಹೊರಟಿದ್ದಾರೆ.

ಉತ್ತರಪ್ರದೇಶದಲ್ಲಿ ಜನ ಅವರ ಚಡ್ಡಿ ಪೂರ್ತಿ ಕಳೆದು ಕಳಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಚಡ್ಡಿ, ಪಂಚೆ ಪೂರ್ತಿ ಕಳೆದು ಕಳಿಸಿದ್ದಾರೆ. ಆ ಸಿಟ್ಟಿನಿಂದ ನಮ್ಮ ಆರ್​ಎಸ್​ಎಸ್ ಚಡ್ಡಿ ಸುಡುತ್ತೀವಿ ಅಂತಿದ್ದಾರೆ ಎಂದು ವ್ಯಂಗವಾಡಿದರು.

ಕಾಂಗ್ರೆಸ್‌ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿರುವುದು..

ನೀವು ವಿಧಾನಸಭೆಯಲ್ಲಿದ್ದೀರಿ. ಐದು ವರ್ಷ ಆಡಳಿತ ಮಾಡಿದ್ದೀರಿ. ನಿಮ್ಮ ಚಡ್ಡಿ ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ಮಾಡಿ. ಆ ನಂತರ ಆರ್​ಎಸ್​ಎಸ್ ಚಡ್ಡಿ ಸುಡುವ ಕಾರ್ಯ ಮಾಡುವಂತ್ರಿ.

ಕಾಂಗ್ರೆಸ್ ಯುವರಾಜ ರಾಹುಲ್ ಅಜ್ಜ- ಅಜ್ಜಿ ಸೇರಿ ರಾಷ್ಟ್ರೀಯ ನಾಯಕರು ಒಳಗೊಳಗೇ ಚಡ್ಡಿ ಸುಡಲು ಹೋಗಿ. ಅವರ ಪರಿಸ್ಥಿತಿ ಈಗ ಏನಾಗಿದೆ ನೋಡಿ. ದೇಶದಲ್ಲಿ ಜನ ಕಾಂಗ್ರೆಸ್​ನ ಪೂರ್ತಿ ಚಡ್ಡಿ ಕಳೆದು ಬೆತ್ತಲೆ ಮಾಡುವವರಿದ್ದಾರೆ. ಕ್ರಿಮಿನಲ್​ನಿಂದ ನೀವು ಚಡ್ಡಿ ಸುಡುಸ್ತಿದ್ದೀರಿ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ: ಒಂದು ಚಡ್ಡಿ ಸುಟ್ಟಿದ್ದಕ್ಕೆ ಅರೆಸ್ಟ್ ಮಾಡ್ತೀರಾ? ಎಲ್ಲಾ ಜಿಲ್ಲೆಗಳಲ್ಲೂ ಚಡ್ಡಿಗಳನ್ನು ಸುಡ್ತೇವೆ: ನಲಪಾಡ್ ಸವಾಲು

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.