ETV Bharat / state

ದೇಶ ವಿರೋಧಿ ಚಟುವಟಿಕೆ ನಡೆಸುವ ಸಂಘಟನೆಗಳ ಮೇಲೆ ಸರ್ಕಾರ ಕಣ್ಣಿಡಬೇಕು: ಯತ್ನಾಳ್​

author img

By

Published : Jan 27, 2020, 7:17 PM IST

ಪಿಎಫ್‌ಐ ಸೇರಿದಂತೆ ದೇಶ ವಿರೋಧಿ ಚಟುವಟಿಕೆ ನಡೆಸುವ ಸಂಘಟನೆಗಳ ಮೇಲೆ ಕೇಂದ್ರ ಸರ್ಕಾರ ಕಣ್ಗಾವಲು ಇಡಬೇಕು ಎಂದು ಸರ್ಕಾರಕ್ಕೆ ವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ್​ ಒತ್ತಾಯಿಸಿದ್ದಾರೆ.

vijaypura
ವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ

ವಿಜಯಪುರ: ಪಿಎಫ್‌ಐ ಸೇರಿದಂತೆ ದೇಶ ವಿರೋಧಿ ಚಟುವಟಿಕೆ ನಡೆಸುವ ಸಂಘಟನೆಗಳ ಮೇಲೆ ಕೇಂದ್ರ ಸರ್ಕಾರ ಕಣ್ಣಿಡಬೇಕು ಎಂದು ನಗರ ಶಾಸಕ ಬಸನಗೌಡ ಯತ್ನಾಳ್​ ಒತ್ತಾಯಿಸಿದ್ದಾರೆ.

ಪಿಎಫ್‌ಐ ಕರಾಳ ಮುಖದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಗಳೊಂದಿಗೆ ಮಾತನಾಡಿದ ಶಾಸಕ ಯತ್ನಾಳ ಕೇಂದ್ರ ಸರ್ಕಾರ ಈಗಾಗಲೇ ವಿದೇಶದಿಂದ ಹಣ ಬರುವ ಎನ್‌ಜಿಒಗಳನ್ನು ರದ್ದು ಮಾಡಿದೆ. ದೇಶ ವಿರೋಧಿ ಚಟುವಟಿಕೆ ನೋಡಿದ್ರೆ ಗೊತ್ತಾಗುತ್ತೆ ಇವರಿಗೆಲ್ಲಾ ವ್ಯವಸ್ಥಿತವಾಗಿ ಹಣ ಬರುತ್ತದೆ‌. ಇಂತಹ ಸಂಘಟನೆಗಳ ಮೇಲೆ ಕೇಂದ್ರ ಸರ್ಕಾರ ಕಣ್ಗಾವಲು ಇಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.

ವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ

ಈಗಾಗಲೇ ಕೇಂದ್ರದ ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯಾದ ಎನ್‌ಐಜಿಯು ದೇಶಾದ್ಯಂತ ಇಂತಹ ಅಕ್ರಮ ಖಾತೆಗಳನ್ನು ನಿಷೇಧ ಮಾಡಿದೆ. ಇನ್ನು ಪಿಎಫ್‌ಐ, ಎಸ್‌ಡಿಪಿ ಸೇರಿದಂತೆ ಇತರ ದೇಶ ವಿರೋಧಿ ಸಂಘಟನೆಗಳನ್ನು ಕೂಡ ನಿಷೇಧಿಸಬೇಕು ಎಂದರು.

Intro:ವಿಜಯಪುರ:ಪಿಎಫ್‌ಐ ಸೇರಿದಂತೆ ದೇಶವಿರೋಧಿ ಚಟುವಟಿಕೆ ಮಡುವ ಉದ್ದೇಶದಕ್ಕೆ ಪಾಕಿಸ್ತಾನದಿಂದ ಹಣ ಬರುತ್ತಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ ಪಿ ಎಫ್ ಐ ವಿಚಾರವಾಗಿ ಕಿಡಿಕಾರಿದ್ದರು.



Body:ಪಿಎಫ್‌ಐ ಕರಾಳ ಮುಖ ವಿಚಾರಕ್ಕೆ ಮಾಧ್ಯಗಳೊಂದಿಗೆ ಮಾತನಾಡಿದ ಶಾಸಕ ಯತ್ನಾಳ ಕೇಂದ್ರ ಸರ್ಕಾರ ಈಗಾಗಲೇ ವಿದೇಶಿದಿಂದ ಹಣ ಬರುವ ಎನ್‌ಜಿಗಳನ್ನು ರದ್ದು ಮಾಡಿದೆ. ದೇಶ ವಿರೋಧಿ ಚಟುವಟಿಕೆ ನೋಡಿದ್ರೆ ಗೊತ್ತಾಗುತ್ತೆ ಇವ್ರಗೆಲ್ಲ ವ್ಯವಸ್ಥಿತವಾಗಿ ಹಣ ಬರುತ್ತದೆ‌. ಇಂತಹ ಸಂಘಟನೆಗಳ ಮೇಲೆ ಕೇಂದ್ರ ಸರ್ಕಾರ ಕಣ್ಗಾವಲು ಇಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ.

ಈಗಾಗಲೇ ಕೇಂದ್ರದ ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯಾದ ಎನ್‌ಐಜಿಯಿಂದ ದೇಶದ್ಯಾಂತ ಇಂತಹ ಆಕ್ರಮ ಖಾತೆಗಳನ್ನು ಸೀಜ್ ಮಾಡಿ್ದೆದೆ. ದೇಶ ವಿರೋಧಿ ಚಟುವಟಿಕೆ ಮಾಡಲು ಈ ಹಣ ಬರುತ್ತಿದೆ. ಪಿಎಫ್‌ಐ ಎಸ್‌ಡಿಪಿ ಸೇರಿದಂತೆ ಇತರ ದೇಶ ವಿರೋಧಿ ಸಂಘಟನೆಗಳನ್ನು ಕಾನೂನಿನ ಅಎಇಯಲ್ಲಿ ನಿಷೇಧಿಸಬೇಕು. ದೇಶದಲ್ಲಿ ಅಶಾಂತಿ‌ ಮೂಡಿಸುವುದು ಹಲಭೆ ಉಂಟು ಮಾಡಬೇಕು,ಪೌರತ್ವ ಕಾಯ್ದೆ ಜಾರಿಯನ್ನು ದುರ್ಬಲ ಮಾಡಲು ವ್ಯವಸ್ಥಿತವಾಗಿ ಹೀಗೆ ಮಾಡಲಾಗುತ್ತಿದೆ.ದೇಶದ ಜಾತ್ಯಾತೀತ ಪಕ್ಷಗಳಲ್ಲ ಸೇರಿ ಷಡ್ಯಂತರ ನಡೆಸುತ್ತಿವೆ ಎಂದು ಯತ್ನಾಳ ಕಿಡಿಕಾರಿದರು.

ಇನ್ನೂ ‌ಕುಮಾರಸ್ವಾಮಿ ಜಾತಿ‌ ಪ್ರೇಮ ವಿಚಾರವಾಗಿ ಪ್ರತಿಕ್ರಿಯಿಸಿ್ದದ ಶಾಸಕ ಯತ್ನಾಳ,ಅವರು ಹಾಗೇ,ಅಧಿಕಾರದಲ್ಲಿ ಇರೋವಾಗ ಯಾವುದು ನೆನಪಾಗೋದಿಲ್ಲ.ಸೋತ ಮೇಲೆ ಅದ್ನಾದ್ರೂ ಉಳಿಸಿಕೊಳ್ಳಲು ಹೀಗೆ ಮಾತಾಡ್ತಾರೆ. ಜಾತ್ಯಾತೀತ ಪಕ್ಷವೆಂದು ಜಾತಿ ಮೇಲೆ ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು‌.


Conclusion:ಬಿಜೆಪಿ ಜೀನ್ಸ್ ಪಾಕಿಸ್ತಾನದಲ್ಲಿ ಇರಬಹುದು ಎಂಬ ವಿಚಾರವಾಗಿ ಮಾತನಾಡಿ ಭಾರತದ ಒಂದು ಭಾಗವೇ ಪಾಕಿಸ್ತಾನ,ಅಪಘಾನಿಸ್ತಾನವಾಗಿವೆ ಎಂದು ಶಾಸಕ ಯತ್ನಾಳ ಮಾಧ್ಯಮಗಳಿಗೆ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.