ETV Bharat / state

ಕೆಆರ್​​​​ಪಿಪಿ ಪಕ್ಷವು ಯಾವುದೇ ರಾಷ್ಟ್ರೀಯ ಪಕ್ಷದ ಬಿ ಟೀಮ್​ ಅಲ್ಲ: ಜನಾರ್ದನ ರೆಡ್ಡಿ

author img

By

Published : Mar 17, 2023, 9:57 PM IST

Updated : Mar 17, 2023, 10:40 PM IST

ಇನ್ನೆರಡು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಬರಲಿದ್ದು, ರಾಜ್ಯ ಸುತ್ತುವ ಸಮಯವಿಲ್ಲ, ಗೆಲ್ಲುವ 31 ಕ್ಷೇತ್ರಗಳ ಮೇಲೆ ಹೆಚ್ಚು ಗಮನ ಹರಿಸಲಾಗಿದೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. 12 ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಣೆಯನ್ನೂ ಮಾಡಿದ್ದಾರೆ.

janardhana Reddy spoke to reporters.
ಜನಾರ್ದನ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೆಆರ್ ಪಿಪಿ ಸಂಸ್ಥಾಪಕ ಅಧ್ಯಕ್ಷ ಜನಾರ್ದನ ರೆಡ್ಡಿ

ವಿಜಯಪುರ: ರಾಜ್ಯದಲ್ಲಿ ಕಲ್ಯಾಣಿ ರಾಜ್ಯ ಪ್ರಗತಿ ಪಕ್ಷ (ಕೆಆರ್​ಪಿಪಿ) ವಿಧಾನಸೌಧದಲ್ಲಿ ಮೊದಲು ಹೆಜ್ಜೆ ಇಡಲು ಪೂರ್ಣ ತಯಾರಿ ನಡೆಸುತ್ತಿದೆ. ಸದ್ಯ 31 ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡಿದ್ದು, ಅದರಲ್ಲಿ 12 ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಉಳಿದ 19 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಮಾರ್ಚ್ ಅಂತ್ಯದೊಳಗೆ ಘೋಷಣೆ ಮಾಡಲಾಗುವುದು ಎಂದು ಕೆಆರ್ ಪಿಪಿ ಸಂಸ್ಥಾಪಕ ಅಧ್ಯಕ್ಷ ಜನಾರ್ದನ ರೆಡ್ಡಿ ಹೇಳಿದರು.

ವಿಜಯಪುರ ತಾಲೂಕಿನ ಶಿವಣಗಿ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ 40-50 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಟಿಕೆಟ್ ಬಯಸಿದ್ದಾರೆ. ಆದರೆ, ನಾವು ಗೆಲ್ಲುವ ಕ್ಷೇತ್ರವನ್ನು ಮಾತ್ರ ಆಯ್ಕೆ ಮಾಡಿಕೊಂಡಿದ್ದು, ಇನ್ನೆರಡು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಬರುವ ಕಾರಣ ರಾಜ್ಯ ಸುತ್ತುವ ಸಮಯವಿಲ್ಲ, ಗೆಲ್ಲುವ ಕ್ಷೇತ್ರಗಳ ಮೇಲೆ ಹೆಚ್ಚು ಗಮನ ಹರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಯಾವ ಪಕ್ಷದ ಬಿ ಟೀಮ್ ಕೂಡಾ ಅಲ್ಲ: ಕಲ್ಯಾಣಿ ರಾಜ್ಯ ಪ್ರಗತಿ ಪಕ್ಷವೂ ಬಿಜೆಪಿಯ ಬಿ ಟೀಮ್ ಎಂದು ಹೇಳಲಾಗುತ್ತಿದೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಇದೇ ಮೊದಲು ಬಾರಿ ಈ ವಿಷಯ ಕೇಳುತ್ತಿದ್ದೇನೆ, ನಾಳೆ ಕಾಂಗ್ರೆಸ್ ಬಿ ಟೀಮ್ ಎಂದು ಸಹ ಕರೆಯಬಹುದು. ಆದರೆ, ನಮ್ಮ ಪಕ್ಷ ಸದ್ಯ ವಿಧಾನಸಭೆ ಮೆಟ್ಟಿಲೇರುವ ಪ್ರಯತ್ನದಲ್ಲಿ ಇದೆ ಅಷ್ಟೇ. ನಾವು ಯಾರ ಟೀಮ್ ಅಲ್ಲ ಎಂದು ರೆಡ್ಡಿ ಸ್ಪಷ್ಟಪಡಿಸಿದರು.

ಸದ್ಯ ನಮ್ಮ ಗುರಿ ನಾನು ಗೆಲ್ಲುವ ಕ್ಷೇತ್ರದಲ್ಲಿ ಮಾತ್ರ ಹೆಜ್ಜೆ ಇಡುತ್ತಿದ್ದೇನೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ನಾಯಕತ್ವ ಹೊಂದಿರುವ ಹಾಗೂ ಪ್ರಾಮಾಣಿಕವಾಗಿ ಜನಸೇವೆ ಮಾಡಲಿಚ್ಚಿಸುವ ಅಭ್ಯರ್ಥಿಗಳನ್ನು ಗುರುತಿಸಿ, ಅಭ್ಯರ್ಥಿಗಳ ಘೋಷಣೆ ಮಾಡುತ್ತಿದ್ದೇವೆ. ನಾನೂ ಇಲ್ಲಿಯವರೆಗೆ ಸುತ್ತಾಡಿದ ಕ್ಷೇತ್ರಗಳಲ್ಲಿ ಜನರಿಂದು ಒಳ್ಳೆ ರೆಸ್ಪಾನ್ಸ್ ಪಕ್ಷಕ್ಕೆ ಸಿಗುತ್ತಿದೆ. ವಿಧಾನಸೌಧದಲ್ಲಿ ಎಂಟ್ರಿಗೆ ಎಷ್ಟು ಸೀಟ್ ಬೇಕು ಅಷ್ಟು ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ್ರೇ ಮದರಸಾ ಬಂದ್ ಮಾಡುವುದಾಗಿ ಅಸ್ಸೋಂ ಸಿಎಂ ಹೇಳಿಕೆ ವಿಚಾರವಾಗಿ‌ ಮಾತನಾಡಿದ ರೆಡ್ಡಿ, ಜಗಜ್ಯೋತಿ ಬಸವಣ್ಣ ಅವರ ಆದರ್ಶ ತತ್ವದಂತೆ ಕೆಲಸ ಮಾಡಬೇಕು. ಕೋಮು ಗಲಭೆಗೆ ನಮ್ಮ ಪಕ್ಷದಿಂದ ಅವುಕಾಶ ಇಲ್ಲ.‌ ಹಿಂದೂ ಮುಸ್ಲಿಮರು ಅಣ್ಣ ತಮ್ಮಿಂದರಂತೆ ಬದುಕುಬೇಕು ಎನ್ಜುವ ಮೂಲಕ ಮುಸ್ಲಿಮರ ಮತ ಬೇಡ ಎಂದಿದ್ದ ಯತ್ನಾಳ್​ ಹೇಳಿಕೆಗೆ ರೆಡ್ಡಿ ಟಾಂಗ್ ನೀಡಿದರು.

ಇಂಡಿಯಲ್ಲಿ ಮುಸ್ಲಿಂ ಅಭ್ಯರ್ಥಿ: ಇಂಡಿಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಬಸವಣ್ಣನವರ ತತ್ವದಂತೆ ಕೆಆರ್‌ಪಿಪಿ ಪಕ್ಷ ಮುಂದುವರಿಯಲಿದೆ. ಬರುವ ದಿನಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳು ಹೆಸರನ್ನು ಘೋಷಣೆ ಮಾಡಲಾಗುತ್ತದೆ.‌ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಕೆಲಸ ಮಾಡುವ ಉದ್ದೇಶದಿಂದ ಪಕ್ಷ ಸ್ಥಾಪನೆ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂಓದಿ:ಸೋಮಣ್ಣ ಇಲ್ಲದೆಯೂ ಚುನಾವಣೆ ಗೆದ್ದಿದ್ದೇವೆ, ಸೋಮಣ್ಣ ಪುತ್ರನಿಗೆ ಕೆಆರ್‌ಐಡಿಎಲ್‌ ಅಧ್ಯಕ್ಷ ರುದ್ರೇಶ್ ತಿರುಗೇಟು..

Last Updated : Mar 17, 2023, 10:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.