ETV Bharat / state

ವಿಜಯಪುರ ಪಾಲಿಕೆ ಚುನಾವಣೆ : ಎಸ್​ಸಿಗೆ ಮೀಸಲಾದ ವಾರ್ಡ್​​ನಲ್ಲಿ ಮಾಟ ಮಂತ್ರ

author img

By

Published : Oct 16, 2022, 4:02 PM IST

ವಿಜಯಪುರ ಮಹಾನಗರ ಪಾಲಿಕೆಯ ಎಸ್​ಸಿಗೆ ಮೀಸಲಾಗಿದ್ದ ವಾರ್ಡ್​ ನಂ 14ರಲ್ಲಿ ಮಾಟ ಮಂತ್ರ ಮಾಡಿರುವುದು ಕಂಡುಬಂದಿದೆ.

black-magic-did-in-ward-reserved-for-sc-in-vijaypur
ವಿಜಯಪುರ ಪಾಲಿಕೆ ಚುನಾವಣೆ : ಎಸ್​ಸಿಗೆ ಮೀಸಲಾದ ವಾರ್ಡ್​​ನಲ್ಲಿ ಮಾಟ ಮಂತ್ರ

ವಿಜಯಪುರ : ಸ್ಥಳೀಯ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ವಾರ್ಡ್ ನಂಬರ 14ರಲ್ಲಿ ಕಿಡಿಗೇಡಿಗಳು ಮಾಟ ಮಂತ್ರದ ಮೊರೆ ಹೋಗಿದ್ದಾರೆ. ನಗರದ ಶಿಖಾರಖಾನೆಯ ಅನಂತ ಲಕ್ಷ್ಮಿ ಹಾಲ್ ಬಳಿ ಕಿಡಿಗೇಡಿಗಳು ಮಾಟ ಮಂತ್ರ ಮಾಡಿ ನಿಂಬೆಹಣ್ಣು, ಎಲೆ, ಮೊಟ್ಟೆ, ಹಣ ಸೇರಿದಂತೆ ಹೂವುಗಳೊಂದಿಗೆ ಮಾಟ ಮಂತ್ರ ಮಾಡಿ ಎಸೆದು ಹೋಗಿದ್ದಾರೆ.

ಅಲ್ಲದೇ ಮಹಾನಗರ ಪಾಲಿಕೆ ಚುನಾವಣೆಗೆ ವಾರ್ಡ್ ನಂ 14ರಲ್ಲಿ ಪರಿಶಿಷ್ಟ ಜಾತಿ(ಎಸ್ ಸಿ)ಗೆ ಮೀಸಲಾಗಿರುವ ಕಾರಣ ಕೆಲವರು ಇದನ್ನು ಸಹಿಸದೇ ಈ ರೀತಿ ಮಾಟ ಮಂತ್ರ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಹಿಂದೆ ಎಂದೂ ನಡೆಯದ ಈ ವಿಚಿತ್ರ ಬೆಳವಣಿಗೆ ಚುನಾವಣೆ ಘೋಷಣೆ ಆದ ಮೇಲೆ ನಡೆಯುತ್ತಿದೆ. ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಇದನ್ನು ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯಪುರ ಪಾಲಿಕೆ ಚುನಾವಣೆ : ಎಸ್​ಸಿಗೆ ಮೀಸಲಾದ ವಾರ್ಡ್​​ನಲ್ಲಿ ಮಾಟ ಮಂತ್ರ

ಮಾಟ ಮಂತ್ರ ಮಾಡಿರುವ ಕಿಡಿಗೇಡಿಗಳ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಹಾಸನ‌ದಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.