ETV Bharat / state

ಮಾನ ಇದ್ದವರಿಗೆ ಮಾನನಷ್ಟ ಮೊಕದ್ದಮೆ ಹಾಕುತ್ತಾರೆ, ಇಲ್ಲದವರಿಗೆ ಏನು ಹಾಕಬೇಕು?: ಯತ್ನಾಳ್​

author img

By

Published : May 8, 2022, 2:28 PM IST

'ಮಾನ ಇದ್ದವರಿಗೆ ಮಾನನಷ್ಟ ಮೊಕದ್ದಮೆ ಹಾಕುತ್ತಾರೆ. ಮಾನ ಇಲ್ಲದವರಿಗೆ ಏನು ಹಾಕುತ್ತಾರೆ'?- ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಪ್ರಶ್ನೆ..

Basanagouda Patil Yatnal
ಶಾಸಕ ಬಸನಗೌಡ ಪಾಟೀಲ ಯತ್ನಾಳ್​

ವಿಜಯಪುರ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​​ ತಮ್ಮ ಮೇಲೆ ಈಗಾಗಲೇ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಅವರ ಬಳಿ ದುಡ್ಡು ಇದೆ. ಮತ್ತೊಮ್ಮೆ ಮಾನನಷ್ಟ ಮೊಕದ್ದಮೆ​ ಹಾಕುವುದಾದರೆ ಹಾಕಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.

ವಿಜಯಪುರ ತಾಲೂಕಿನ ಹಿಟ್ನಳ್ಳಿ ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಕಂಚಿನ ಪ್ರತಿಮೆ ಉದ್ಘಾಟಿಸಿ ಮಾತನಾಡಿದ ಅವರು, 'ಮಾನ ಇದ್ದವರಿಗೆ ಮಾನನಷ್ಟ ಮೊಕದ್ದಮೆ ಹಾಕುತ್ತಾರೆ. ಮಾನ ಇಲ್ಲದವರಿಗೆ ಏನು ಹಾಕುತ್ತಾರೆ'? ಎಂದು ಪ್ರಶ್ನಿಸಿದರು

ಕಿತ್ತೂರು ರಾಣಿ ಚೆನ್ನಮ್ಮ ಕಂಚಿನ ಪ್ರತಿಮೆ ಉದ್ಘಾಟಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್​..

ಮುತಾಲಿಕ್​​ ಹೇಳಿಕೆಗೆ ಬೆಂಬಲ ಇದೆ : ನಾಳೆಯಿಂದ ಧಾರ್ಮಿಕ‌ ಕೇಂದ್ರವಾಗಿರುವ ದೇವಸ್ಥಾನದಲ್ಲಿ ಧ್ವನಿರ್ವಧಕ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಯಾವ ಮಸೀದಿ, ದೇವಸ್ಥಾನಗಳಿಗೆ ಪೊಲೀಸ್ ಅನುಮತಿ ದೊರೆತಿದೆ ಅಷ್ಟೇ ಧಾರ್ಮಿಕ‌ ಕೇಂದ್ರದಲ್ಲಿ ಧ್ವನಿವರ್ಧಕ ಬಳಕೆಯಾಗಬೇಕು.

ದೇವಸ್ಥಾನದಲ್ಲಿ ಹನುಮಾನ್​ ಚಾಲೀಸಾ ಪಠಣ ಮಾಡಬೇಕು ಎಂಬ ಪ್ರಮೋದ್​​ ಮುತಾಲಿಕ್​​ ಹೇಳಿಕೆಗೆ ತಮ್ಮ ಬೆಂಬಲ ಇದೆ. ಇದನ್ನು ಯಾವ ರೀತಿ ನಿಯಂತ್ರಣ ಮಾಡಬೇಕು ಎನ್ನುವುದು ಪೊಲೀಸರಿಗೆ ಎಲ್ಲಾ ಗೊತ್ತಿದೆ ಎಂದರು. ಸರ್ಕಾರ ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ ನೀಡಬೇಕು.

ಇಲ್ಲವಾದರೆ ಸಂಘರ್ಷಕ್ಕೆ ಕಾರಣವಾಗಬಹುದು. ಈಗಾಗಲೇ ಉತ್ತರ ಪ್ರದೇಶದಲ್ಲಿ ದೇವಸ್ಥಾನಗಳಲ್ಲಿ ನಡೆಯುತ್ತಿರುವ ಹನುಮಾನ್​ ಚಾಲೀಸಾ ಪಠಣ ಮಾದರಿ ನಮ್ಮ ರಾಜ್ಯದಲ್ಲಿಯೂ ಜಾರಿಗೊಳಿಸಲು ಮುಖ್ಯಮಂತ್ರಿಗಳು ಕ್ರಮಕೈಗೊಳ್ಳಬೇಕು ಎಂದು ಯತ್ನಾಳ್​​ ಆಗ್ರಹಿಸಿದರು.

ಇದನ್ನೂ ಓದಿ: ಸಿಎಂ ಆಗಬೇಕಾದರೆ ಲಂಚ ಕೊಡಬೇಕೆಂಬ ಯತ್ನಾಳ್ ಆರೋಪದ ಬಗ್ಗೆ ತನಿಖೆಯಾಗಬೇಕು: ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.