ಕಾರವಾರ: ಕೆಲ ತಿಂಗಳ ಹಿಂದೆ ಗ್ಯಾಸ್ ಏಜೆನ್ಸಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಸಿಸಿಟಿವಿ ವಿಡಿಯೋ ಬಿಡುಗಡೆ ಮಾಡಿದ್ದು, ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ನೆಹರೂ ನಗರದ ಚೈತ್ರದೀಪಾ ಎಂಟರ್ಪ್ರೈಸಸ್ ಗ್ಯಾಸ್ ಏಜನ್ಸಿಯಲ್ಲಿ ಕಳೆದ ಕೆಲ ತಿಂಗಳ ಹಿಂದೆ ಕಳ್ಳತನವಾಗಿತ್ತು. ರಾತ್ರಿ ವೇಳೆ ಕಿಟಕಿ ಒಡೆದು ಒಳ ನುಗ್ಗಿದ ಖದೀಮರು ಕಪಾಟುಗಳನ್ನು ಮುರಿದು ಅದರಲ್ಲಿದ್ದ 2.47 ಲಕ್ಷ ನಗದು ದೊಚಿ ಪರಾರಿಯಾಗಿದ್ದರು.
ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೇರೆಯಾಗಿದ್ದು, ಈ ಸಂಬಂಧ ಕುಮಟಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಆರೋಪಿಗಳ ಹುಡುಕಾಟಕ್ಕೆ ಪೋಲಿಸರು ವಿಡಿಯೋ ಬಿಡುಗಡೆಗೊಳಿಸಿದ್ದು, ಸುಳಿವು ಸಿಕ್ಕರೇ ಕೂಡಲೇ ಠಾಣೆಗೆ ಮಾಹಿತಿ ನೀಡುವಂತೆ ಕೋರಿದ್ದಾರೆ. ಕಳ್ಳತನ ನಡೆಸಿರುವ ವ್ಯಕ್ತಿಗಳು ಸ್ಥಳಿಯರೋ ಅಥವಾ ಹೋರಗಿನವರೋ ಎಂಬುದು ಪೋಲಿಸರ ಕಾರ್ಯಾಚರಣೆಯಿಂದ ತಿಳಿಯಬೇಕಾಗಿದೆ.