ETV Bharat / state

ಚಿತ್ರಕಲೆಯಲ್ಲಿ ಮಿಂಚಿದ ಶಿರಸಿ ಯುವಕ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​​​ನಲ್ಲಿ ಸ್ಥಾನ ಪಡೆದ ಸಾಧಕ

author img

By

Published : Dec 3, 2020, 11:03 AM IST

ಸಿನಿಮಾ ರಂಗದ ಖ್ಯಾತ 100 ಕಲಾವಿದರ ಭಾವಚಿತ್ರಗಳನ್ನು ರಚಿಸಿ ಅವುಗಳನ್ನು ಸಂಯೋಜಿಸಿ (ಕೊಲಾಜಿಂಗ್) ನಟಸಾರ್ವಭೌಮ ರಾಜ್​​​ಕುಮಾರ್ ಭಾವಚಿತ್ರವನ್ನು ಮೂಡಿಸಿರುವ ಕೌಶಿಕ್ ಹೆಗಡೆಯ ಪ್ರತಿಭೆ ಈಗ ದಾಖಲೆಯ ಪುಟ ಸೇರಿದೆ. ಮೂರು ನಿಮಿಷದಲ್ಲಿ ಒಂದು ಭಾವಚಿತ್ರ ಬರೆದು ಅಂಥಹ 100 ಚಿತ್ರಗಳನ್ನು ಸಂಯೋಜಿಸಿ ಡಾ. ರಾಜಕುಮಾರ್ ಭಾವಚಿತ್ರವನ್ನು ತಯಾರಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.

Artist Kaushik Krishna Hegde
ಯುವ ಕಲಾವಿದ ಕೌಶಿಕ್ ಕೃಷ್ಣ ಹೆಗಡೆ

ಶಿರಸಿ: ಚಿತ್ರಕಲಾ ನೈಪುಣ್ಯತೆಯಿಂದ ಹೆಸರು ಮಾಡಿರುವ ಶಿರಸಿಯ ಯುವ ಕಲಾವಿದ ಕೌಶಿಕ್ ಕೃಷ್ಣ ಹೆಗಡೆಯವರ ಸಂಯೋಜಿತ ಕಲಾಕೃತಿಯೊಂದು ' ಇಂಡಿಯಾ ಬುಕ್ ಆಫ್​​​ ರೆಕಾರ್ಡ್ಸ್‌ಗೆ ' ಆಯ್ಕೆಯಾಗಿದೆ. ಈ ಮೂಲಕ ಚಿತ್ರ ಕಲಾವಿದರಲ್ಲಿ ಈ ದಾಖಲೆ ಬರೆದ ಜಿಲ್ಲೆಯ ಮೊದಲ ವ್ಯಕ್ತಿ ಇವರು ಎಂಬ ಹೆಮ್ಮೆಗೆ ಪಾತ್ರರಾಗಿದ್ದಾರೆ.

ಸಿನಿಮಾ ರಂಗದ ಪ್ರಖ್ಯಾತ 100 ಕಲಾವಿದರ ಭಾವಚಿತ್ರಗಳನ್ನು ರಚಿಸಿ ಅವುಗಳನ್ನು ಸಂಯೋಜಿಸಿ (ಕೊಲಾಜಿಂಗ್) ಕನ್ನಡದ ನಟಸಾರ್ವಭೌಮ ರಾಜ್​​​ಕುಮಾರ್ ಭಾವಚಿತ್ರವನ್ನು ಮೂಡಿಸಿರುವ ಕೌಶಿಕ್ ಹೆಗಡೆ ಪ್ರತಿಭೆ ಇದೀಗ ದಾಖಲೆಯ ಪುಟ ಸೇರಿದೆ. 3 ನಿಮಿಷದಲ್ಲಿ ಒಂದು ಭಾವಚಿತ್ರ ಬರೆದು ಅಂಥಹ 100 ಚಿತ್ರಗಳನ್ನು ಸಂಯೋಜಿಸಿ ಡಾ. ರಾಜಕುಮಾರ್ ಭಾವಚಿತ್ರವನ್ನು ತಯಾರಿಸಿದ್ದಾರೆ. 8 ತಾಸುಗಳ ಪರಿಶ್ರಮದ ಇವರ ಚಾಕಚಕ್ಯತೆಗೆ ಇಂಡಿಯಾ ಬುಕ್ ಆಫ್​​​ ರೆಕಾರ್ಡ್ಸ್‌ನಲ್ಲಿ ಸ್ಥಾನ ಸಿಕ್ಕಿದೆ.

ಶಿರಸಿ ಯುವಕನ ಚಿತ್ರಕಲೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​​​ಗೆ ಆಯ್ಕೆ

ಕಳೆದ ಅಗಸ್ಟ್‌ನಲ್ಲಿ ಇವರು ಚಿತ್ರ ರಚಿಸಿ ಕಳಿಸಿಕೊಟ್ಟಿದ್ದರು. ಅದು ಇಂಡಿಯಾ ಬುಕ್ ಆಫ್​​​ ರೆಕಾರ್ಡ್ಸ್‌ನಲ್ಲಿ ದಾಖಲಾಗಲು ಆಯ್ಕೆಗೊಂಡು ಸೆ. 19 ರಂದು ಈ ಕುರಿತಾದ ಪ್ರಮಾಣಪತ್ರ ಸಿದ್ಧವಾಗಿ ಇದೀಗ ಕೌಶಿಕ್ ಅವರ ಕೈಸೇರಿದೆ. ಈ ಚಿತ್ರ ಸಾಧನೆಯು 2021ರ ಜನವರಿಯಲ್ಲಿ ಇಂಡಿಯಾ ಬುಕ್ ಆಫ್​​​ ರೆಕಾರ್ಡ್ಸ್‌ನಲ್ಲಿ ಮುದ್ರಿತವಾಗಲಿದೆ.

ಕೌಶಿಕ್ ಕೃಷ್ಣ ಹೆಗಡೆ, ಕಳೆದ 8 ವರ್ಷಗಳಿಂದ ಚಿತ್ರಕಲೆಯ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಲ್ಯಾಂಡ್ ಸ್ಕೇಪ್, ಅಬ್ಸ್ಟ್ಯಾಕ್ಟ್ ಪೇಂಟಿಂಗ್ ಮಾಡುತ್ತಾರೆ. ವಾಟರ್ ಕಲರ್ ಮತ್ತು ತೈಲವರ್ಣ ಬಳಕೆ, ಕಲರ್ ಪೆನ್ಸಿಲ್, ಪೆನ್ಸಿಲ್ ಶೇಡಿಂಗ್‌ನಿಂದ ಚಿತ್ರಗಳನ್ನು ರಚಿಸುತ್ತಾ ಬಂದಿದ್ದು, ಪೋರ‍್ಟ್ರೇಟ್ ಬರೆಯುವಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರ ಅನೇಕ ಕಲಾಕೃತಿಗಳು ಎಲ್ಲರ ಗಮನ ಸೆಳೆದಿವೆ. ಇದರ ಜೊತೆಗೆ ಗ್ರಾಮೀಣ ಭಾಗದಲ್ಲಿನ ಜನರಿಗೆ ಚಿತ್ರಕಲೆಯನ್ನು ಹೇಳಿಕೊಡುವ ಮಹತ್ವಾಕಾಂಕ್ಷೆಯನ್ನು ಕೌಶಿಕ್ ಹೆಗಡೆ ಹೊಂದಿದ್ದು, ಅವರಿಗೆ ಪಾಲಕರು ಬೆಂಬಲ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.‌

ಈ ಸುದ್ದಿನ್ನೂ ಓದಿ: 6 ಗಂಟೆಯಲ್ಲಿ 50 ಕುರ್ಚಿ ತಯಾರಿಸಿ ವಿಶ್ವ ದಾಖಲೆ ನಿರ್ಮಿಸಿದ ವಿಶೇಷ ಚೇತನರು

ಒಟ್ಟಾರೆ ಶಿರಸಿಯ ಯುವಕನೊಬ್ಬ ರಾಷ್ಟ್ರಮಟ್ಟದಲ್ಲಿ ತನ್ನ ಖ್ಯಾತಿಯನ್ನು ಗಳಿಸಿದ್ದು ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ. ತನ್ನಲ್ಲಿರುವ ಕಲೆಯನ್ನು ಇತರರಿಗೆ ಹೇಳಿಕೊಡುವ ಕೆಲಸವೂ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಿಂಚುವ ಅಭಿಲಾಷೆಯನ್ನು‌ ಕೌಶಿಕ್ ಹೆಗಡೆ ಹೊಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.