ಶಿರಸಿ: ಅಧಿಕ ಮಳೆಯಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಭೂ ಕುಸಿತ ಮುಂದುವರೆದಿದ್ದು, ಯಲ್ಲಾಪುರ ತಾಲೂಕಿನ ಬಾಗಿನಕಟ್ಟಾ ಬಳಿ ಭೂಕುಸಿತ ಉಂಟಾಗಿ ರಸ್ತೆ ಹಾನಿಯಾಗಿದೆ.
ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯ ಬಾಗಿನಕಟ್ಟಾದಲ್ಲಿ ಇಂದು ಮುಂಜಾನೆಯ ಭೂ ಕುಸಿತವಾಗಿದೆ. ಇದರಿಂದಾಗಿ ಅರ್ಧದಷ್ಟು ರಸ್ತೆ ನಾಶವಾಗಿದೆ. ಯಲ್ಲಾಪುರದ ಬೀಗರದಿಂದ ಬಾಗಿನಕಟ್ಟಾಗೆ ಹೋಗುವ ರಸ್ತೆ ಹಾನಿಯಾಗಿದ್ದು, ಸಂಚಾರವನ್ನು ಬಂದ್ ಮಾಡಲಾಗಿದೆ. ಅತಿವೃಷ್ಟಿಯಿಂದ ಯಲ್ಲಾಪುರ ಭಾಗದಲ್ಲಿ ಕಳೆದ ಒಂದು ವಾರದಲ್ಲಿ ಎರಡು ಬಾರಿ ಭೂ ಕುಸಿತ ಉಂಟಾಗಿದೆ.