ETV Bharat / state

ಪ್ರಮುಖ ಐಸಿಸ್ ಕಾರ್ಯಕರ್ತನ ಬಂಧನ : ಭಟ್ಕಳದಲ್ಲಿ NIA 'ಉಗ್ರ' ಬೇಟೆಯ ಕಥೆ

author img

By

Published : Aug 6, 2021, 9:05 PM IST

Updated : Aug 7, 2021, 1:48 PM IST

ಐಸಿಸ್‌ನ ಹಿಂಸಾತ್ಮಕ ಸಿದ್ಧಾಂತವನ್ನು ಪ್ರಚಾರ ಮಾಡುವ ಗ್ರೂಪ್ ಗಳ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಹಾಗೂ ಕರ್ನಾಟಕದಲ್ಲಿ ಏಕಕಾಲದಲ್ಲಿ ಶೋಧ ನಡೆಸಿದ್ದರಿಂದ ರಾಷ್ಟ್ರೀಯ ತನಿಖಾ ಸಂಸ್ಥೆಯು ಬುಧವಾರ ನಾಲ್ಕುವರನ್ನು ಬಂಧಿಸಿತ್ತು. ಇದನ್ನೇ ಗುರುವಾರ ಮಂಗಳೂರಿನಲ್ಲಿ, ಶುಕ್ರವಾರ ಭಟ್ಕಳದಲ್ಲಿ ಮುಂದುವರಿಸಿದೆ..

bhatkal-nia-operation-arrest-of-prominent-isis-activist
ಐಸಿಸ್ ಕಾರ್ಯಕರ್ತನ ಬಂಧನ

ಭಟ್ಕಳ : ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾಂತ್ಯದ (ಐಎಸ್‌ಕೆಪಿ) ಶ್ರೇಣಿಯಲ್ಲಿ ಉನ್ನತ ಸ್ಥಾನದಲ್ಲಿದ್ದ ಪ್ರಮುಖ ಐಸಿಸ್ ಕಾರ್ಯಕರ್ತ ಉಫ್ರಿ ಜವಾಹರ್ ದಾಮುದಿ ಅಲಿಯಾಸ್ ಅಬು ಹಾಜಿರ್ ಅಲ್ ಬದರಿಯನ್ನು ಶುಕ್ರವಾರ ಭಟ್ಕಳದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ರಾಜ್ಯ ಪೊಲೀಸರ ನೇತೃತ್ವದ ತಂಡ, ಸಂಘಟಿತ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ಅಲ್ಲದೆ, ಉಫ್ರಿಯ ಪ್ರಮುಖ ಸಹಚರ ಅಮೀನ್ ಜುಹೈಬ್‌ನನ್ನು ಕೂಡ ಬಂಧಿಸಲಾಗಿದೆ.

ಐಸಿಸ್ ಪ್ರಚಾರ ಮಾಸಿಕ ಆನ್‌ಲೈನ್ ನಿಯತಕಾಲಿಕೆ 'ವಾಯ್ಸ್ ಆಫ್ ಹಿಂದ್'ನ ಉತ್ಪಾದನೆ ಮತ್ತು ಪ್ರಸರಣದಲ್ಲಿ ಸಕ್ರಿಯ ಪಾತ್ರದಿಂದಾಗಿ ಏಪ್ರಿಲ್ 2020ರಿಂದ ಬದರಿ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ನಿಗಾ ಇರಿಸಿದ್ದವು. ಐಸಿಸ್ ಪ್ರಚಾರ ಮತ್ತು ಮಾಧ್ಯಮ ಚಟುವಟಿಕೆಗಳ ಹೊರತಾಗಿ, ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಖರೀದಿ, ಮುಜಾಹಿದ್ದೀನ್‌ಗಳಿಗೆ ನಿಧಿಸಂಸ್ಥೆ ಮತ್ತು ನೇಮಕಾತಿ ಸೇರಿ ಲಾಜಿಸ್ಟಿಕಲ್ ಬೆಂಬಲವನ್ನು ಇವರು ನೋಡಿಕೊಂಡಿದ್ದರು.

ಇಸ್ಲಾಮಿಕ್ ಸ್ಟೇಟ್ ನಾಯಕರೊಂದಿಗೆ ನೇರ ಸಂಪರ್ಕ

ಇವರು ಖೋರಾಸನ್ (ಅಫ್ಘಾನಿಸ್ತಾನ) ಮತ್ತು ಸಿರಿಯಾದ ಇಸ್ಲಾಮಿಕ್ ಸ್ಟೇಟ್ ನಾಯಕರೊಂದಿಗೆ ನೇರ ಸಂಪರ್ಕದಲ್ಲಿದ್ದರು. ತಮ್ಮ ಸೈಬರ್ ಸಂಪರ್ಕಗಳ ಮೂಲಕ ಕುಫಾರ್‌ಗಳನ್ನು (ಅಪನಂಬಿಕೆದಾರರು), ಪೊಲೀಸ್ ಸಿಬ್ಬಂದಿ, ಪತ್ರಕರ್ತರನ್ನು ಕೊಲ್ಲಲು ಮತ್ತು ದೇವಸ್ಥಾನಗಳು ಮತ್ತು ಸರ್ಕಾರಿ ಆಸ್ತಿಗಳಿಗೆ ಹಾನಿಯನ್ನುಂಟು ಮಾಡಲು ಪ್ರೇರೇಪಿಸುತ್ತಿದ್ದರು ಎಂದು ಹೇಳಲಾಗಿದೆ.

ಗುಪ್ತಚರ ಸಂಸ್ಥೆಗಳ ಕಣ್ಣಿಗೆ ಮಣ್ಣು

ಸೈಬರ್‌ ಸ್ಪೇಸ್‌ನಲ್ಲಿ ತಾವು ಖೋರಾಸನ್, ಆಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ನೆಲೆಸಿದ್ದಾಗಿ ಹೇಳಿಕೊಂಡಿದ್ದು, ಗುಪ್ತಚರ ಸಂಸ್ಥೆಗಳ ಕಣ್ಣಿನಿಂದ ತಪ್ಪಿಸಿಕೊಳ್ಳಲು ಎಲ್ಲಾ ಭದ್ರತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೂ ಭದ್ರತಾ ಸಂಸ್ಥೆಗಳು ಬದರಿ ಭಾರತದಲ್ಲೇ ವಾಸಿಸುತ್ತಿರಬಹುದು ಎಂದು ನಿರ್ಣಯಿಸಿದ್ದರು.

ದಾಮುದಿ ಹಾಜಿರ್​ ಒಬ್ಬನೇ ಎಂದು ಖಾತ್ರಿ

ಈ ಮೌಲ್ಯಮಾಪನದ ಆಧಾರದ ಮೇಲೆ ಮತ್ತು ಜುಲೈ 11ರಂದು ಬಂಧಿತನಾಗಿದ್ದ ಖಾಸಿಂ ಖುರಸಾನಿ ಮೈತ್ರಿ ಉಮರ್ ನಿಸಾರ್‌ನ ಬಹಿರಂಗಪಡಿಸುವಿಕೆಯ ಮೂಲಕ ಉಂಟಾದ ಕೆಲವು ಬೆಳವಣಿಗೆಗಳಿಂದ ಹಾಗೂ ವಿದೇಶಿ ಏಜೆನ್ಸಿಗಳ ಸಹಕಾರದಲ್ಲಿ ಮತ್ತಷ್ಟು ಗುಪ್ತಚರವನ್ನು ನೇಮಿಸಲಾಗಿತ್ತು. ಭಟ್ಕಳ ಮೂಲದ ಜುಫ್ರಿ ಜವಾಹರ್ ದಾಮುದಿ ಎಂದು ಗುರುತಿಸಿಕೊಂಡಿರುವವನೇ ಅಬು ಹಾಜಿರ್ ಅಲ್ ಬದ್ರಿ ಎನ್ನುವುದನ್ನು ಎನ್‌ಐಎ ಖಚಿತಪಡಿಸಿದೆ.

ದಾಮೂದಿ ಸಹಚರರ ಪತ್ತೆ

ಚುರುಕಿನ ಕಾರ್ಯಾಚರಣೆಯ ಮೂಲಕ ಭದ್ರತಾ ಸಂಸ್ಥೆಗಳು ಭಟ್ಕಳದಲ್ಲಿ ದಾಮೂದಿ (30) ಮತ್ತು ಆತನ ಸಹಚರರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಜುಫ್ರಿ ಜವಾಹರ್ ದಾಮುದಿಯು ಅದ್ನಾನ್ ಹಸನ್ ದಾಮುದಿಯ ಕಿರಿಯ ಸಹೋದರನೆಂದು ದೃಢಪಡಿಸಲಾಗಿದೆ. ಅದ್ನಾನ್ ಐಸಿಸ್ ಸಂಬಂಧಿತ ಪ್ರಕರಣಗಳಲ್ಲಿ 2017ರಲ್ಲಿ ಎನ್‌ಐಎ ಬಂಧಿಸಲ್ಪಟ್ಟಿದ್ದ.

ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಮೂಲದ ಐಎಸ್ ಜೊತೆ ಲಿಂಕ್​​

ಜುಫ್ರಿ ಜವಾಹರ್ ದಾಮುದಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಮೂಲದ ಐಎಸ್ ಕಾರ್ಯಕರ್ತರೊಂದಿಗಿನ ತನ್ನ ಒಡನಾಟ ಹಾಗೂ ಐಸಿಎಸ್ ಪ್ರಚಾರ ಪತ್ರಿಕೆಯ ಉತ್ಪಾದನೆ ಮತ್ತು ಪ್ರಸರಣದಲ್ಲಿ ತೊಡಗಿಸಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೇಂದ್ರ ಭದ್ರತಾ ಸಂಸ್ಥೆಗಳು ನಡೆಸಿದ ಶೋಧದ ಸಮಯದಲ್ಲಿ ಡಿಜಿಟಲ್ ಮಾಧ್ಯಮ ಸಾಧನಗಳು ಮತ್ತು ದೋಷಪೂರಿತ ಜಿಹಾದಿ ಸಾಹಿತ್ಯಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ.

ಭಾರತದಲ್ಲಿ ಐಸಿಸ್‌ನ ಮೂರು ಪ್ರತ್ಯೇಕ ಘಟಕ

ಕಳೆದ ಒಂದು ತಿಂಗಳಲ್ಲಿ ಕಾಶ್ಮೀರದ ಅನಂತನಾಗ್, ಶ್ರೀನಗರ, ಬಂಡಿಪೋರ್, ಬಾರಾಮುಲ್ಲಾ, ಕರ್ನಾಟಕದ ಮಂಗಳೂರು, ಬೆಂಗಳೂರು ಮತ್ತು ಭಟ್ಕಳದ 21 ಸ್ಥಳಗಳಲ್ಲಿ ದಾಳಿಗಳು ನಡೆದಿದ್ದು, ಭಾರತದಲ್ಲಿ ಐಸಿಸ್‌ನ ಮೂರು ಪ್ರತ್ಯೇಕ ಘಟಕಗಳಿಂದ 10 ಜನರನ್ನು ಬಂಧಿಸಲಾಗಿದೆ.

ಐಸಿಸ್​ ದೊಡ್ಡ ಹೊಡೆತ

ಈಗ ಭಾರತದಾದ್ಯಂತ ನಡೆದ ದಾಳಿಯು ಮತ್ತು ಇಬ್ಬರು ಪ್ರಮುಖ ಐಸಿಸ್ ಕಾರ್ಯಕರ್ತರಾದ ಕಾಸಿಮ್ ಖುರಸಾನಿ ಮತ್ತು ಅಬು ಹಾಜಿರ್ ಅಲ್ ಬದರಿ ಬಂಧನಗಳು ಐಸಿಸ್‌ಗೆ ದೊಡ್ಡ ಹೊಡೆತವಾಗಿದೆ. ಇದು ಭಾರತದಲ್ಲಿ ಐಸಿಸ್ ಜಾಲವನ್ನು ಗಣನೀಯವಾಗಿ ಕುಗ್ಗಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಹಾಗೂ ಕರ್ನಾಟಕದಲ್ಲಿ ಏಕಕಾಲಕ್ಕೆ ಶೋಧ

ಐಸಿಸ್‌ನ ಹಿಂಸಾತ್ಮಕ ಸಿದ್ಧಾಂತವನ್ನು ಪ್ರಚಾರ ಮಾಡುವ ಗ್ರೂಪ್ ಗಳ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಹಾಗೂ ಕರ್ನಾಟಕದಲ್ಲಿ ಏಕಕಾಲದಲ್ಲಿ ಶೋಧ ನಡೆಸಿದ್ದರಿಂದ ರಾಷ್ಟ್ರೀಯ ತನಿಖಾ ಸಂಸ್ಥೆಯು ಬುಧವಾರ ನಾಲ್ಕುವರನ್ನು ಬಂಧಿಸಿತ್ತು. ಇದನ್ನೇ ಗುರುವಾರ ಮಂಗಳೂರಿನಲ್ಲಿ, ಶುಕ್ರವಾರ ಭಟ್ಕಳದಲ್ಲಿ ಮುಂದುವರಿಸಿದೆ.

ಜಿಹಾದಿ ಸಿದ್ದಾಂತ ಪ್ರಚಾರಕ್ಕೆ ಸಾಮಾಜಿಕ ಜಾಲತಾಣ ಬಳಕೆ

ಈ ಗ್ರೂಪ್ ಗಳು ಜಿಹಾದಿ ಸಿದ್ಧಾಂತವನ್ನು ಪ್ರಚಾರ ಮಾಡಲು ಟೆಲಿಗ್ರಾಂ, ಹೂಪ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿವಿಧ ಐಸಿಸ್ ಪ್ರಚಾರ ಚಾನೆಲ್‌ಗಳನ್ನು ನಡೆಸುತ್ತಿದ್ದು, ಭಯೋತ್ಪಾದಕ ಶಾಖೆಗಳಿಗೆ ಹೊಸ ಸದಸ್ಯರನ್ನು ಆಮೂಲಾಗ್ರವಾಗಿ ನೇಮಕ ಮಾಡಿಕೊಳ್ಳುತ್ತಿದೆ ಎಂದು ಎನ್ಐಎ ಅಧಿಕಾರಿ ಹೇಳಿದ್ದರು.

ಉದ್ದೇಶಿತ ಹತ್ಯೆಗೆ ಸ್ಕೇಚ್​​

ಎನ್ಐಎ ಮಾರ್ಚ್ 5ರಂದು ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿತ್ತು. ಅಮೀನ್ ನೇತೃತ್ವದಲ್ಲಿ ಆಮೂಲಾಗ್ರ ವ್ಯಕ್ತಿಗಳ ಗ್ರೂಪ್‌ ಮತ್ತು ನಿಷೇಧಿತ ಭಯೋತ್ಪಾದಕ ಸಂಘಟನೆಗೆ ನಿಷ್ಠೆಯನ್ನು ಪ್ರತಿಜ್ಞೆ ಮಾಡಿದ ಐಸಿಸ್ ಕೇರಳ ಮತ್ತು ಕರ್ನಾಟಕದಲ್ಲಿ ಕೆಲವು ಜನರನ್ನು ಉದ್ದೇಶಿತ ಹತ್ಯೆಗೆ ಗುರುತಿಸಿದೆ ಎಂದು ಎನ್ಐಎ ಅಧಿಕಾರಿಗಳು ಹೇಳಿದ್ದಾರೆ.

Last Updated :Aug 7, 2021, 1:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.