ETV Bharat / state

ಮುರುಡೇಶ್ವರದ ತೆರ್ನಮಕ್ಕಿಯಲ್ಲಿ 4.7 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ; ತನಿಖೆ ಚುರುಕು

author img

By

Published : Nov 11, 2020, 3:43 PM IST

ಸಬಾತಿಯ ವಾಸುದೇವ ಗಣಪಯ್ಯ ಕಾಮತ್ ಎಂಬಾತರ ಮನೆಯಲ್ಲಿ 278 ಗ್ರಾಂ. ಚಿನ್ನ ಹಾಗೂ ಬೆಳ್ಳಿಯ ಆಭರಣ ಮತ್ತು 13 ಸಾವಿರ ರೂ. ನಗದು ಕಳ್ಳತನ ಮಾಡಿಕೊಂಡು ಕಳ್ಳರು ಪರಾರಿಯಾಗಿದ್ದಾರೆ.

4.7 lakh worth of jewelery robbery in bhatkal
ಮುರುಡೇಶ್ವರದ ತೆರ್ನಮಕ್ಕಿಯಲ್ಲಿ 4.7 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ

ಭಟ್ಕಳ: ತಾಲೂಕಿನ ತೆರ್ನಮಕ್ಕಿಯ ಸಬಾತಿಯಲ್ಲಿರುವ ಮನೆಯೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಸಾವಿರ ನಗದು ಕಳ್ಳತನ ಮಾಡಿಕೊಂಡು ಖದೀಮರು ಪರಾರಿಯಾಗಿದ್ದಾರೆ.

ಸಬಾತಿಯ ವಾಸುದೇವ ಗಣಪಯ್ಯ ಕಾಮತ್ ಎಂಬಾತರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ವಾಸುದೇವರವರು ಗೋವಾದಿಂದ ಬಂದಿದ್ದ ತನ್ನ ಮಗನೊಂದಿಗೆ ನವೆಂಬರ್​ 1 ರಂದು ಹೊನ್ನಾವರದ ಮಗಳ ಮನೆಗೆ ಹೋಗಿ ಕೆಲ ದಿನಗಳ ಬಳಿಕ ಮರಳಿ ಬಂದಾಗ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ.

ಕಳ್ಳರು ಮನೆಯ ಎದುರಿನ ಬಾಗಿಲನ್ನು ಮುರಿದು ಒಳಹೊಕ್ಕಿ ರೂಮಿನಲ್ಲಿದ್ದ ಕಪಾಟನ್ನು ಮುರಿದು ಅದರಲ್ಲಿದ್ದ 278 ಗ್ರಾಂ. ಚಿನ್ನ ಹಾಗೂ ಬೆಳ್ಳಿಯ ಆಭರಣ ಮತ್ತು 13 ಸಾವಿರ ರೂ. ನಗದು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ವಾಸುದೇವ ಕಾಮತ್​​ರ ಸಹೋದರ ದೇವರ ಪೊಜೆಗೆಂದು ಮುಂಜಾನೆ ಹೂ ಕೊಯ್ಯಲು ಅಣ್ಣನ ಮನೆಯ ಹತ್ತಿರ ಬಂದಾಗ ಮನೆಯ ಬಾಗಿಲು ಒಡೆದಿರುವುದನ್ನು ಗಮನಿಸಿ ಅಣ್ಣ ವಾಸುದೇವ ಕಾಮತ್​ರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಸದ್ಯ ಮುರುಡೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.