ETV Bharat / state

ಏರ್‌ಪೋರ್ಟ್‌ನಲ್ಲಿ ಸ್ಫೋಟಕ ಪತ್ತೆ ಪ್ರಕರಣ: ಆದಿತ್ಯರಾವ್ ಹೆಸರಲ್ಲಿದ್ದ ಲಾಕರ್ ತೆರೆದಾಗ ಪೊಲೀಸರಿಗೆ ಅಚ್ಚರಿ!

author img

By

Published : Jan 25, 2020, 7:01 PM IST

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದ ಆರೋಪಿ ಆದಿತ್ಯ ರಾವ್​ನನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ.

Maglore Bomb case
ಮಂಗಳೂರು ಬಾಂಬ್​ ಪ್ರಕರಣ

ಉಡುಪಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಆದಿತ್ಯರಾವ್‌ ವಿಚಾರವಾಗಿ ಪೊಲೀಸರು​​ ತನಿಖೆ ತೀವ್ರಗೊಳಿಸಿದ್ದಾರೆ.

ಏರ್ಪೋರ್ಟ್‌ನಲ್ಲಿ ಸ್ಫೋಟಕ ಇಟ್ಟ ಆದಿತ್ಯರಾವ್ ಅಲ್ಲಿಂದ ನೇರವಾಗಿ ವಡಭಾಂಡೇಶ್ವರದ ಬಲರಾಮ ದೇವರ ಸನ್ನಿಧಿಗೆ ಬಂದಿದ್ದಾನೆ ಎನ್ನುವ ವಿಚಾರ ಗೊತ್ತಾಗಿದೆ.

ಆರೋಪಿ ಬ್ಯಾಂಕ್‌ವೊಂದರಲ್ಲಿ ಲಾಕರ್ ಪಡೆದಿರುವ ಬಗ್ಗೆ ತಿಳಿದಿದ್ದು, ಅಧಿಕಾರಿಗಳು ಆತನನ್ನು ಸಂಬಂಧಿಸಿದ ಬ್ಯಾಂಕ್​ಗೆ ಕರೆದೊಯ್ದಿದ್ದಾರೆ. ಈ ವೇಳೆ ಆರೋಪಿಯ ಹೆಸರಿನಲ್ಲಿದ್ದ ಲಾಕರ್ ತೆರೆಸಿದಾಗ, ಅಲ್ಲಿ ಚಿನ್ನಾಭರಣವಿಡುವ ಬಾಕ್ಸ್​ನಲ್ಲಿ ಅನುಮಾನಾಸ್ಪದ ಪೌಡರ್‌ ಪತ್ತೆಯಾಗಿದೆ. ಈ ಪೌಡರ್‌ ಅನ್ನು ವಶಕ್ಕೆ ಪಡೆದ ಪೊಲೀಸರು ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ತಪಾಸಣೆಗೆ ಕಳುಹಿಸಲಿದ್ದಾರೆ.

ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ, ಬ್ಯಾಂಕ್ ಲಾಕರ್‌ನಿಂದ ಅನುಮಾನಾಸ್ಪದ ವಸ್ತುಗಳು, ದಾಖಲೆಗಳು ಹಾಗು ಸರ್ಟಿಫಿಕೇಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಇವೆಲ್ಲವನ್ನು ನೋಡಿದ್ಮೇಲೆ ವಿಮಾನ ನಿಲ್ದಾಣದಲ್ಲಿ ಸ್ಫೋಟಿಸಲು ವರ್ಷದ ಹಿಂದೆಯಿಂದ ಆತ ತಯಾರಿ ಮಾಡಿದ್ನಾ? ಅನ್ನೋ ಶಂಕೆ ಪೊಲೀಸರದ್ದು.

ಇಷ್ಟೆಲ್ಲಾ ವಿಚಾರಣೆಯ ಬಳಿಕ ಆರೋಪಿ ಆದಿತ್ಯನನ್ನು ಉಡುಪಿಯಿಂದ ಮಲ್ಪೆಗೆ ಕರೆದೊಯ್ದ ಪೊಲೀಸರು ಇಲ್ಲಿನ ವಡಭಾಂಡೇಶ್ವರ ದೇವಸ್ಥಾನದ ಬಳಿ ಮಹಜರು ಮಾಡಿದ್ದಾರೆ. ಮಂಗಳೂರು ಏರ್‌ಪೋರ್ಟ್ ಬಳಿ ಸ್ಫೋಟಕವಿಟ್ಟ ಆದಿತ್ಯ ಸೀದಾ ಇಲ್ಲಿಗೆ ಬಂದಿದ್ದನಂತೆ. ಈ ವೇಳೆ ಇಂಡಿಗೋ ವಿಮಾನದ ಬಳಿ ಮತ್ತೊಂದು ಬಾಂಬ್ ಬ್ಯಾಗ್ ಇಟ್ಟಿರೋದಾಗಿ ಏರ್ಪೋರ್ಟ್​ ಟರ್ಮಿನಲ್ ಮ್ಯಾನೇಜರ್​​ಗೆ ಕರೆ ಮಾಡಿದ್ದಾನೆ. ಈ ಎಲ್ಲಾ ಕರೆಗಳು ಮಲ್ಪೆ ಟವರ್​ನಲ್ಲೇ ದಾಖಲಾಗಿವೆ. ಅಲ್ಲದೆ, ಆರೋಪಿಯೂ ಈ ಬಗ್ಗೆ ಒಪ್ಪಿಕೊಂಡಿದ್ದಾನಂತೆ.

ಆದಿತ್ಯ ರಾವ್, ಬಾಂಬ್‌ಗೆ ಫೈನಲ್ ಟಚ್ ಕೊಟ್ಟ ಕಾರ್ಕಳದ ಕಿಂಗ್ಸ್ ಬಾರ್‌ನಲ್ಲಿ ಆದಿತ್ಯನ ಚಟುವಟಿಕೆಗಳ ಮಹಜರು ನಡೆಯಿತು. ಬಾರ್ ಮಾಲೀಕರು-ಸಿಬ್ಬಂದಿಯಿಂದ ಪೊಲೀಸರು ಮಾಹಿತಿ ಪಡೆದು ತನಿಖೆ ಮುಂದುವರೆಸಿದ್ದಾರೆ.

Intro:ಪ್ಯಾಕೇಜ್

ಬಾಂಬರ್ ಆದಿತ್ಯನ ತನಿಖಾ ಪುರಾಣದಲ್ಲಿ ಅಗೆದಷ್ಟು ವಿಷಯಗಳು ಸಿಗ್ತಾಯಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಆದಿತ್ಯನ ವಿಚಾರಣೆ ಇವತ್ತು ಬಾಂಬರ್ ನ ತವರು ಜಿಲ್ಲೆಗೆ ಶಿಫ್ಟ್ ಆಗಿದೆ. ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಇಟ್ಟು ಸೀದಾ ಬಂದದ್ದು ವಡಭಾಂಡೇಶ್ವರದ ಬಲರಾಮ ದೇವರ ಸನ್ನಿಧಿಗೆ ಅಂತ ಆದಿತ್ಯ ಬಾಯಿ ಬಿಟ್ಟಿದ್ದಾನೆ. ಖತರ್ನಾಕ್ ಆದಿತ್ಯ ಪುರಾಣಕ್ಕೆ ಸೈನೈಡ್ ಈಗ ತಗ್ಲಾಕೊಂಡಿದೆ.


ಮಂಗಳೂರು ಏರ್ಪೋರ್ಟ್ ಗೆ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಸೈಕೊ ಬಾಂಬರ್ ತನಿಖೆ ಶುರುವಾಗಿದೆ.
ತನಿಖೆ ವೇಳೆ ಹಲವು ವಿಚಾರ ಬಹಿರಂಗ ಮಾಡಿರುವ ಆದಿತ್ಯ,
ಹಲವು ಬ್ಯಾಂಕ್ ನಲ್ಲಿ ಲಾಕರ್ ಗಳನ್ನು ಪಡೆದಿರುವ ಮಾಹಿತಿ ನೀಡಿದ್ದಾನೆ. ತನಿಖಾಧಿಕಾರಿ ಬೆಳ್ಳಿಯಪ್ಪ ಆರೋಪಿಯನ್ನು ಕಡಿಯಾಳಿಯ ಕರ್ಣಾಟಕ ಬ್ಯಾಂಕ್ ಗೆ ಕರೆತಂದಿದ್ದಾರೆ. ಲಾಕರ್ ನಲ್ಲಿ ಕೆಲ ವಸ್ತುಗಳನ್ನು ಇಟ್ಟ ಬಗ್ಗೆ ಆದಿತ್ಯ ಹೇಳಿದ್ದ. ಫೋರ್ತ್ ಸ್ಯಾಟರ್ಡೇ ಬ್ಯಾಂಕ್ ರಜೆ ಇದ್ದರೂ ಬಾಗಿಲು ತೆರೆಸಿ ತನಿಖೆ ಮಾಡಲಾಯ್ತು.

ಫ್ಲೋ../

*ಲಾಕರ್ ತೆರೆದಾಗ ಬೆಚ್ಚಿಬಿದ್ದ ಪೊಲೀಸರು*

*ಚಿನ್ನದ ಬಾಕ್ಸಲ್ಲಿ ಆದಿತ್ಯ ಇಟ್ಟಿದ್ದೇನು ಗೊತ್ತಾ..?*

*ಬ್ಯಾಂಕ್ ಲಾಕರ್ ನಲ್ಲಿ ಅನುಮಾನಾಸ್ಪದ ವಸ್ತುಗಳು*

ಸೈಕೋ ಬಾಂಬರ್ ಆದಿತ್ಯ ತನಿಖೆ ಮಾಡುತ್ತಾ ಲಾಕರ್ ನಲ್ಲಿ ಆದಿತ್ಯ ಇಟ್ಟದ್ದ ಬಾಕ್ಸ್ ಗಳನ್ನು ತೆರೆದು ನೋಡಿದಾಗ ಚಿನ್ನದ ಆಭರಣ ಇಡುವ ಬಾಕ್ಸ್ ಪತ್ತೆಯಾಗಿದೆ. ಬಾಕ್ಸ್ ಒಳಗೆ ಅನುಮಾನಾಸ್ಪದ ಪುಡಿ ಪತ್ತೆಯಾಗಿದೆ. ಎಫ್ ಎಸ್ ಎಲ್ ತಜ್ಞರಿಗೆ ಪೊಲೀಸರು ಅದನ್ನು ಒಪ್ಪಿಸಲಿದ್ದಾರೆ.

*ಆತ್ಮಹತ್ಯೆಗೆ ಯತ್ನಿಸಿದ್ನಾ ಆದಿತ್ಯ*

*ಮಂಗಳೂರಿನ ಚಿನ್ನದಂಗಡಿಯಿಂದ ಖರೀದಿಸಿದ್ನಂತೆ ಸೈನೈಡ್*

ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಬ್ಯಾಂಕ್ ಲಾಕರ್ ನಿಂದ ಅನುಮಾನಾಸ್ಪದ ವಸ್ತುಗಳು , ದಾಖಲೆಗಳು, ಸರ್ಟಿಫಿಕೇಟ್ ಗಳನ್ನು ವಶಕ್ಕೆ ಪಡೆಯಲಾಗಿದೆ. ವಿಮಾನ ನಿಲ್ದಾಣದಲ್ಲಿ ಸ್ಪೋಟಿಸಲು ವರ್ಷದ ಹಿಂದೆಯಿಂದ ತಯಾರಿ? ಮಾಡಿದ್ನಾ ಎಂಬ ಬಗ್ಗೆ ಸಂಶಯ ಶುರುವಾಗಿದೆ. ಯಾಕಂದ್ರೆ ಆದಿತ್ಯ ಲಾಕರ್ ಓಪನ್ ಮಾಡಿ ವರ್ಷ ಒಂದುವರೆ ಕಳೆದಿದೆ.

*ಬಾಂಬರ್ ಆದಿತ್ಯ ಮಲ್ಪೆಗೆ ರವಾನೆ*

*ಹುಸಿ ಬಾಂಬ್ ಕರೆ ಮಾಡಿದ್ದೇ ಮಲ್ಪೆಯಿಂದ*

ಆರೋಪಿ ಆದಿತ್ಯನನ್ನು ಉಡಪಿಯಿಂದ ಮಲ್ಪೆಗೆ ಶಿಫ್ಟ ಮಾಡಲಾಯ್ತು. ಇಲ್ಲಿನ
ವಡಭಾಂಡೇಶ್ವರ ದೇವಸ್ಥಾನದ ಬಳಿ ಮಹಜರಿಗೆ ಕರೆತರಲಾಯ್ತು. ಮಂಗಳೂರು ಏರ್ ಪೋರ್ಟ್ ಬಳಿ ಬಾಂಬ್ ಇಟ್ಟ ಆದಿತ್ಯ ಸೀದಾ ಮಲ್ಪೆಗೆ ಬಂದಿದ್ದಾನೆ. ಇಲ್ಲಿನ ಪೆಟ್ಟಿಗೆ ಅಂಗಡಿ ಬಳಿ ಕುಳಿತು ಇಂಡಿಗೋ ವಿಮಾನದಲ್ಲಿ ಮತ್ತೊಂದು ಬ್ಯಾಗ್ ಬಾಂಬ್ ಇಟ್ಟಿದ್ದೇನೆಂದು ಹೇಳಿ ಸಿಂ ಕಾರ್ಡ್ ಬಿಸಾಕಿ ಕಾಲ್ಕಿತ್ತಿದ್ದಾನೆ. ಇದನ್ನು ಮಹಜರು ವೇಳೆ ಆದಿತ್ಯನೇ ಒಪ್ಪಿಕೊಂಡಿದ್ದಾನೆ.

ಫ್ಲೋ..//

ಏರ್ ಪೋರ್ಟ್ ಟರ್ಮಿನಲ್ ಮ್ಯಾನೇಜರ್ ಗೆ ಆದಿತ್ಯ ಕರೆ ಮಾಡಿ ಕಾರ್ಕಳ ಮೂಲದ ಜಿಂ ಮಾಸ್ಟರ್ ಗೆ ಫೋನ್ ಮಾಡಿ ಕಾರ್ಕಳಕ್ಕೆ ಹೊರಟಿದ್ದಾನೆ. ಈ ಎಲ್ಲಾ ಫೋನ್ ಕರೆಗಳು ಮಲ್ಪೆ ಫೋನ್ ಟವರಲ್ಲಿ ದಾಖಲಾಗಿದೆ.

*ಕಾರ್ಕಳಕ್ಕೆ ಸೈನೈಡ್ ಆದಿತ್ಯ ಶಿಫ್ಟ್*

*ಕಿಂಗ್ಸ್ ಬಾರ್ ನಲ್ಲಿ ಡಂಬಲ್ಸ್ ಆದಿತ್ಯ*

ಆದಿತ್ಯ ರಾವ್ ಏರ್ ಪೋರ್ಟ್ ಬಾಂಬ್ ಗೆ ಫೈನಲ್ ಟಚ್ ಕೊಟ್ಟ ಕಾರ್ಕಳದ ಕಿಂಗ್ಸ್ ಬಾರ್ ನಲ್ಲಿ ಆದಿತ್ಯನ ಚಟುವಟಿಕೆಗಳ ಮಹಜರು ನಡೆಯಿತು. ಬಾರ್ ಮಾಲೀಕರು- ಸಿಬ್ಬಂದಿಗಳ ಜೊತೆ ಪೊಲೀಸರು ಮಾಹಿತಿ ಪಡೆದರು.

ಏರ್ ಪೋರ್ಟ್ ಅಧಿಕಾರಿಗಳ ಕೋಪದಲ್ಲಿ ಬಾಂಬ್ ಫಿಕ್ಸ್ ಮಾಡಿದ ಆದಿತ್ಯ, ಮಾನಸಿಕವಾಗಿ ಕುಗ್ಗಿದ್ದಾಗ ಸೈನೈಡ್ ಜಗಿದು ಸಾಯಲು ರೆಡಿ ಮಾಡಿಕೊಂಡಿದ್ದ ಎಂಬೂದು ಗೊತ್ತಾಗುತ್ತಿದೆ.Body:AdithyaConclusion:Adithya
ETV Bharat Logo

Copyright © 2024 Ushodaya Enterprises Pvt. Ltd., All Rights Reserved.