ETV Bharat / state

ಉಡುಪಿ: ಪ್ರೇಯಸಿಗೆ ಚಾಕು ಇರಿದು ತಾನೂ ಕತ್ತು ಕುಯ್ದುಕೊಂಡಿದ್ದ ಯುವಕ - ಇಬ್ಬರೂ ಸಾವು

author img

By

Published : Aug 31, 2021, 2:38 PM IST

ಯುವಕ ಪ್ರೇಯಸಿಯ ಕತ್ತು ಸೀಳಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ಉಡುಪಿಯಲ್ಲಿ ನಡೆದಿತ್ತು. ಇದೀಗ ಅವರಿಬ್ಬರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Lover and young woman both died in Udupi who stabbed with knife
ಪ್ರೇಯಸಿಗೆ ಚಾಕು ಇರಿದು ತಾನೂ ಕತ್ತು ಕುಯ್ದುಕೊಂಡಿದ್ದ ಯುವಕ

ಉಡುಪಿ: ನಿನ್ನೆ ಚೂರಿ ಇರಿತಕ್ಕೆ ಒಳಗಾಗಿದ್ದ ಪ್ರಿಯತಮ‌ ಮತ್ತು ಪ್ರೇಯಸಿ ಇಬ್ಬರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಿನ್ನೆ ಸಂಜೆ ಯುವತಿ ಸೌಮ್ಯ ಭಂಡಾರಿ (28) ಕೊನೆಯುಸಿರೆಳೆದಿದ್ದು, ಇಂದು ಬೆಳಗ್ಗೆ ಯುವಕ ಸಂದೇಶ್ ಕುಲಾಲ್ ಸಾವನ್ನಪ್ಪಿದ್ದಾನೆ.

ಮೆಡಿಕಲ್​​ನಲ್ಲಿ ಕೆಲಸ ಮಾಡುತ್ತಿರುವ ಸಂದೇಶ್​ ನಿನ್ನೆ ಸೌಮ್ಯಾಳ ಸ್ಕೂಟಿ ತಡೆದು ನಿಲ್ಲಿಸಿ, ಆಕೆಯ ಕತ್ತು ಸೀಳಿದ್ದ ಘಟನೆ ಉಡುಪಿಯ ಸಂತೆಕಟ್ಟೆ ಬಳಿ ನಡೆದಿತ್ತು. ಆಕೆ ಕುಸಿದು ಬೀಳುತ್ತಿದ್ದಂತೆಯೇ ತಾನೂ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನು. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಚಿಕಿತ್ಸೆ ಫಲಿಸದೇ ಇಬ್ಬರೂ ಮೃತಪಟ್ಟಿದ್ದಾರೆ.

Lover and young woman both died in Udupi who stabbed with knife
ಮೃತ ಸೌಮ್ಯ ಭಂಡಾರಿ

ಇದನ್ನೂ ಓದಿ: ಹಾಡಹಗಲೇ ಯುವತಿಗೆ ಚಾಕು ಇರಿದ ಯುವಕ : ಬೆಚ್ಚಿಬಿದ್ದ ಕೃಷ್ಣನಗರಿ ಜನ

ಸೌಮ್ಯ ಉಡುಪಿಯ ಅಂಬಾಗಿಲು ನಿವಾಸಿಯಾಗಿದ್ದು, ಸಂದೇಶ್ ಅಲೆವೂರು‌ ನಿವಾಸಿಯಾಗಿದ್ದನು. ಮೂರು ದಿನಗಳ‌ ಹಿಂದೆಷ್ಟೇ ಸೌಮ್ಯಾಳ ನಿಶ್ಚಿತಾರ್ಥ ಬೇರೊಬ್ಬ ಯುವಕನೊಂದಿಗೆ ಆಗಿತ್ತು. ಇದೇ ವಿಚಾರಕ್ಕೆ ಸಂತೆಕಟ್ಟೆ ಪ್ರದೇಶದ ಹೆದ್ದಾರಿಯಲ್ಲಿ ಸಂದೇಶ್​ ಆಕೆಯ ಸ್ಕೂಟಿ ತಡೆದು ನಿಲ್ಲಿಸಿದ್ದು, ಇಬ್ಬರ ನಡುವೆ ಜಗಳ ಉಂಟಾಗಿ ಈ ಘಟನೆ ನಡೆದಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.