ETV Bharat / state

ದಲಿತ ಕೇರಿಯಲ್ಲಿ ಶ್ರೀರಾಮ ಮಂದಿರಕ್ಕೆ ನಿಧಿ ಸಂಗ್ರಹಿಸಿದ ಉಡುಪಿ ಕೃಷ್ಣ ಮಠದ ಸ್ವಾಮೀಜಿ

author img

By

Published : Jan 25, 2021, 10:44 AM IST

Updated : Jan 25, 2021, 10:52 AM IST

ಸುಮಾರು ಹತ್ತಕ್ಕೂ ಹೆಚ್ಚು ಮನೆಗಳಲ್ಲಿ ಶ್ರೀಗಳಿಗೆ ಪಾದ ಪೂಜೆ ನಡೆಸಿ ನಿಧಿ ಸಮರ್ಪಿಸಿದರು. ದಲಿತ ಕೇರಿಗೆ ಸ್ವಾಮೀಜಿ ಆಗಮಿಸುತ್ತಿದ್ದಂತೆ ಜೈ ಶ್ರೀರಾಮ್ ಎಂಬ ಜಯಘೋಷಗಳು ಮೊಳಗಿದವು.

Udupi Krishna Math Swamiji collecting funds for Sri Ram Mandir in Dalit Keri
ದಲಿತ ಕೇರಿಯಲ್ಲಿ ಶ್ರೀರಾಮ ಮಂದಿರಕ್ಕೆ ನಿಧಿ ಸಂಗ್ರಹಿಸಿದ ಉಡುಪಿ ಕೃಷ್ಣ ಮಠ ಸ್ವಾಮೀಜಿ

ತುಮಕೂರು : ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕಾಗಿ ದೇಶಾದ್ಯಂತ ನಿಧಿ ಸಂಗ್ರಹಣೆ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಕೋತಿತೋಪಿನ ದಲಿತ ಕಾಲೋನಿಯಲ್ಲಿ ಉಡುಪಿಯ ಕೃಷ್ಣ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ನಿಧಿ ಸಂಗ್ರಹಣೆ ಕಾರ್ಯಕ್ಕೆ ಚಾಲನೆ ನೀಡಿದರು.

ದಲಿತ ಕೇರಿಯಲ್ಲಿ ಶ್ರೀರಾಮ ಮಂದಿರಕ್ಕೆ ನಿಧಿ ಸಂಗ್ರಹಿಸಿದ ಉಡುಪಿ ಕೃಷ್ಣ ಮಠದ ಸ್ವಾಮೀಜಿ

ಸುಮಾರು ಹತ್ತಕ್ಕೂ ಹೆಚ್ಚು ಮನೆಗಳಲ್ಲಿ ಶ್ರೀಗಳಿಗೆ ಪಾದ ಪೂಜೆ ನಡೆಸಿ ನಿಧಿ ಸಮರ್ಪಿಸಿದರು. ದಲಿತ ಕೇರಿಗೆ ಸ್ವಾಮೀಜಿ ಆಗಮಿಸುತ್ತಿದ್ದಂತೆ ಜೈ ಶ್ರೀರಾಮ್ ಎಂಬ ಜಯಘೋಷಗಳು ಮೊಳಗಿದವು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಶ್ರೀಗಳಿಗೆ ಪುಷ್ಪವೃಷ್ಟಿ ಮಾಡಿ ಅದ್ಧೂರಿಯಾಗಿ ಸ್ವಾಗತಿಸಿದರು.

ಉಡುಪಿಯ ಕೃಷ್ಣಮಠದ ವಿಶ್ವಪ್ರಸನ್ನ ತೀರ್ಥರಿಗೆ ನಗರ ಶಾಸಕ ಜ್ಯೋತಿ ಗಣೇಶ್ ಹಾಗೂ ಸಚಿವ ಸೊಗಡು ಶಿವಣ್ಣ ಸಾಥ್ ನೀಡಿದರು.

ಓದಿ : ದೇವನಹಳ್ಳಿಯಲ್ಲಿ ಸಾಲ ತೀರಿಸಲು ವೃದ್ಧನ ಹತ್ಯೆ: ಕುಟುಂಬಕ್ಕೆ ಸಾಂತ್ವನ ಹೇಳಿದ್ದ ಯುವಕನೇ ಕೊಲೆ ಆರೋಪಿ!

Last Updated : Jan 25, 2021, 10:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.