ETV Bharat / state

DK Shivakumar: ಪಾವಗಡ ಸೋಲಾರ್ ಪಾರ್ಕ್​ಗೆ ಭೇಟಿ, ರೈತರೊಂದಿಗೆ ಸಂವಾದ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್​

author img

By

Published : Jun 14, 2023, 4:08 PM IST

2016ರಲ್ಲಿ ಇಂಧನ ಸಚಿವರಾಗಿದ್ದಾಗ ಡಿಕೆ ಶಿವಕುಮಾರ್​ ಅವರು ಮಾಡಿಸಿದ್ದ ತುಮಕೂರು ಸೋಲಾರ್​ ಪಾರ್ಕ್​ಗೆ ಡಿಸಿಎಂ ಆದ ನಂತರ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ.

DKshivakumar
ಡಿಕೆ ಶಿವಕುಮಾರ್​

ಪಾವಗಡ ಸೋಲಾರ್ ಪಾರ್ಕ್​ಗೆ ಭೇಟಿಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್​

ತುಮಕೂರು: ಪಾವಗಡ ಸೋಲಾರ್ ಪಾರ್ಕ್ ವೀಕ್ಷಣೆಗೆ ಸಚಿವ ಡಿಕೆ‌ ಶಿವಕುಮಾರ್ ಹಾಗೂ ಇಂಧನ ಸಚಿವ ಕೆಜೆ ಜಾರ್ಜ್ ಆಗಮಿಸಿದ್ದಾರೆ. ಸೋಲಾರ್ ಪಾರ್ಕ್​ಗೆ ಭೂಮಿ ನೀಡಿದ ಸ್ಥಳೀಯ ರೈತರೊಂದಿಗೆ ಮಾತುಕತೆ ನಡೆಸಿದ ಡಿ.ಕೆ ಶಿವಕುಮಾರ್ ಮಾಹಿತಿ ಪಡೆದರು. ತುಮಕೂರಿನ ಪಾವಗಡ ತಾಲ್ಲೂಕಿನ ತಿರುಮಣಿಯ ಸೋಲಾರ್ ಪಾರ್ಕ್ ಕಚೇರಿ ಆವರಣದಲ್ಲಿ ಸಭೆ ನಡೆಸಲಾಯಿತು. ಸಭೆಗೆ ಡಿಸಿಎಂ ಡಿಕೆ ಶಿವಕುಮಾರ್​ ಹೆಲಿಕಾಪ್ಟರ್​ನಲ್ಲಿ ಆಗಮಿಸಿದರು. ನಾಗಲಮಡಿಕೆ‌ಯ ಹೆಲಿಪ್ಯಾಡ್​ಗೆ ಬಂದಿಳಿದು, ರಸ್ತೆ ಮೂಲಕ ತಿರುಮಣಿಗೆ ತಲುಪಿದರು.

2016 ರಲ್ಲಿ ಡಿಕೆ ಶಿವಕುಮಾರ್​ ಅವರು ಇಂಧನ ಸಚಿವರಾಗಿದ್ದಾಗ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ 13,000 ಎಕರೆ (53 ಕಿಮಿ 2) ಪ್ರದೇಶದದಲ್ಲಿ ಸೌರ ಪಾರ್ಕ್​ ನಿರ್ಮಿಸಿದ್ದರು. ಇದು ಏಷ್ಯಾದಲ್ಲೇ ಅತಿ ದೊಡ್ಡ ಸೋಲಾರ್​ ಪಾರ್ಕ್​ ಎಂಬ ಖ್ಯಾತಿಗೆ ಒಳಗಾಗಿತ್ತು. ಸದ್ಯ ತುಮಕೂರಿನ ಸೋಲಾರ್​ ಪಾರ್ಕ್​ 2400 ಮೆಗಾವ್ಯಾಟ್​ ವಿದ್ಯುತ್​ನ್ನು ಉತ್ಪಾದಿಸುತ್ತಿದೆ.

ಸಭೆಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ "ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ನಾನು ಇಂಧನ ಸಚಿವನಾಗಿದ್ದಾಗ ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ ಅನ್ನು ನಿಮ್ಮೆಲ್ಲರ ಸಹಾಯದಿಂದ ಇಲ್ಲಿ ಮಾಡಿಸಿದ್ದೇನೆ. ನಂತರ ಇಲ್ಲಿಗೆ ನನಗೆ ಬರಲು ಆಗಿಲ್ಲ. ನಾವು ಜಮೀನನ್ನು ರೈತರಿಂದ ಖರೀದಿಸದೇ ಅವರ ಬಳಿಯಲ್ಲೇ ಬಿಟ್ಟು, ತಿಂಗಳಿಗೆ ಇಂತಿಷ್ಟು ಎಂದು ಜಮೀನು ಮಾಲೀಕರಿಗೆ ಹಣ ಬರುವಂತೆ ಮಾಡಿದ್ದೆವು. ಅದು ಈಗಲೂ ಸಮರ್ಪಕವಾಗಿ ವಿತರಣೆ ಆಗುತ್ತಿದೆ. ಈಗ ನೂತನ ಸರ್ಕಾರದ ಇಂಧನ ಸಚಿವರಾಗಿ ಹಿರಿಯ ರಾಜಕಾರಣಿ ಕೆ.ಜೆ ಜಾರ್ಜ್ ಅಧಿಕಾರ ವಹಿಸಿಕೊಂಡಿದ್ದು, ಇಂದು ಅವರೊಂದಿಗೆ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ಎಳಸು, ರಾಜಕೀಯ ಪ್ರಬುದ್ಧತೆ ಇಲ್ಲ: ಸಿಎಂ ಸಿದ್ದರಾಮಯ್ಯ

ಡಿಕೆ ಶಿವಕುಮಾರ್​ ಅವರ ಅಧಿಕಾರದ ನಂತರ ದಿನಗಳಲ್ಲಿ ಯೋಜನೆಗೆ ಭೂಮಿ ನೀಡಿದ್ದ ರೈತರಿಗೆ ಉದ್ಯೋಗದ ಅವಕಾಶ ನೀಡಿಲ್ಲ, ಅಲ್ಲದೆ ಸ್ಥಳೀಯವಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂಬ ಆರೋಪ ನಿರಂತರವಾಗಿ ಕೇಳಿಬರುತ್ತಿತ್ತು. ಹೀಗಾಗಿ ಸೋಲಾರ್ ಪಾರ್ಕ್​ನ ಸ್ಥಿತಿಗತಿ ಪರಿಶೀಲಿಸಲು ಖುದ್ದಾಗಿ ಡಿಕೆ ಶಿವಕುಮಾರ್ ಆಗಮಿಸಿದ್ದರು. ಅಲ್ಲದೆ ವಿದ್ಯುತ್ ಉತ್ಪಾದನೆ ಮಾಡುವ ಕಂಪನಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ವಿಷಯಗಳು ಕುರಿತು ಚರ್ಚಿಸಿದ್ದಾರೆ.

ರೈತರಿಂದ ಭೂಮಿ ಬಾಡಿಗೆ ಪಡೆದು ಯೋಜನೆ ಜಾರಿ: ಎಕರೆಗೆ 21,000 ರೂ. ಬಾಡಿಗೆಯನ್ನು ಸರ್ಕಾರದಿಂದ ರೈತರ ಭೂಮಿಗೆ ನೀಡಲಾಗುತ್ತದೆ. ಒಪ್ಪಂದಂತೆ ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಪ್ರಮಾಣವನ್ನು 5% ಹೆಚ್ಚಿಸಬಹುದು ಎಂದಿದೆ. ಆರಂಭದಲ್ಲಿ ಇಲ್ಲಿ 600 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ಪ್ರಸ್ತುತ ಇದು 2400 ಯುನಿಟ್​ ವರೆಗೂ ವಿದ್ಯುತ್​ ಉತ್ಪಾದನೆ ಮಾಡುತ್ತಿದೆ.

ಇದನ್ನೂ ಓದಿ: ವಾಹನ ಸಂಚಾರ ಮತ್ತು ಕಾನೂನು ಸುವ್ಯವಸ್ಥೆಗೆ ಅಡ್ಡಿ ಆರೋಪ: ಸಿಎಂ - ಡಿಸಿಎಂ ಸೇರಿ 36 ಮಂದಿಗೆ ಸಮನ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.