ETV Bharat / state

ದೇಶದ ಆರ್ಥಿಕತೆ, ಪ್ರಜಾಪ್ರಭುತ್ವ ವ್ಯವಸ್ಥೆ ತುಕ್ಕು ಹಿಡಿದಿವೆ: ಮೀನಾಕ್ಷಿ ಸುಂದರಂ

author img

By

Published : Sep 15, 2019, 5:43 PM IST

ನಗರದ ಕನ್ನಡ ಭವನದಲ್ಲಿ ಸಿಐಟಿಯು 14ನೇ ರಾಜ್ಯದ ಸಮ್ಮೇಳನ ಹಾಗೂ ಸಿಐಟಿಯು 50ನೇ ವರ್ಷಾಚರಣೆಯ ನೆನಪಿಗಾಗಿ ಆಯೋಜಿಸಿದ್ದ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಉದ್ಘಾಟಿಸಿದರು. ಬಳಿಕ ಮಾತನಾಡಿ ದೇಶದಲ್ಲಿರುವ ಕಾನೂನು ವ್ಯವಸ್ಥೆ, ನೀತಿ ನಿಯಮಗಳು, ಕಾರ್ಮಿಕರ ಸಮಸ್ಯೆಗಳ ಕುರಿತು ಅಭಿಪ್ರಾಯ ಹಂಚಿಕೊಂಡರು.

ಮೀನಾಕ್ಷಿ ಸುಂದರಂ , Meenakshi sundaram

ತುಮಕೂರು: ದೇಶದಲ್ಲಿರುವ ಕಾನೂನು, ನೀತಿ ನಿಯಮಗಳು, ದೇಶದ ಆರ್ಥಿಕತೆ, ಪ್ರಜಾಪ್ರಭುತ್ವ ವ್ಯವಸ್ಥೆ ತುಕ್ಕು ಹಿಡಿದಿವೆ. ಇವುಗಳೆಲ್ಲವನ್ನು ಬದಲಾಯಿಸಬೇಕು ಎಂದು ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಅಭಿಪ್ರಾಯಪಟ್ಟರು.

ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ

ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಸಿಐಟಿಯು 14ನೇ ರಾಜ್ಯ ಸಮ್ಮೇಳನ ಹಾಗೂ ಸಿಐಟಿಯು 50ನೇ ವರ್ಷಾಚರಣೆಯ ನೆನಪಿಗಾಗಿ ಆಯೋಜಿಸಿದ್ದ ವಿಚಾರ ಸಂಕಿರ್ಣ ಉದ್ಘಾಟಿಸಿ ಮಾತನಾಡಿದ ಅವರು, ಸಮಸ್ಯೆಗೆಳೇ ಸವಾಲಾಗಿವೆ. ಭ್ರಷ್ಟಾಚಾರ ದೇಶವ್ಯಾಪಿ ಆವರಿಸಿಕೊಂಡಿದ್ದು, ಅದನ್ನು ಬದಲಾಯಿಸಬೇಕು. ಈ ಎಲ್ಲಾ ಪ್ರಕ್ರಿಯೆಯನ್ನು ಕಾರ್ಮಿಕ ಕಾನೂನು ಒಳಗೊಂಡಿದೆ ಎಂದರು.

ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಬಂದಂತಹ ಕಾನೂನುಗಳು ಅಂದಿನ ಸಮಾಜದ ಅಗತ್ಯಕ್ಕೆ ತಕ್ಕಂತೆ ಇದ್ದವು. ಆದರೆ ಇಂದಿನ ಸಮಾಜ ಅಂದಿನ ರೀತಿಯಲ್ಲಿ ಇಲ್ಲ. ಹಾಗಾಗಿ ಇಂದಿನ ಸಮಾಜಕ್ಕೆ ತಕ್ಕಂತೆ ಕಾನೂನುಗಳು ಬದಲಾಗಬೇಕು ಎಂದು ಮೀನಾಕ್ಷಿ ಸುಂದರಂ ಒತ್ತಾಯಿಸಿದರು.

Intro:ತುಮಕೂರು: ದೇಶದಲ್ಲಿರುವ ಕಾನೂನು, ನೀತಿ ನಿಯಮಗಳು, ದೇಶದ ಆರ್ಥಿಕತೆ, ಪ್ರಜಾಪ್ರಭುತ್ವ ವ್ಯವಸ್ಥೆ ತುಕ್ಕು ಹಿಡಿದಿದೆ ಇವುಗಳೆಲ್ಲವನ್ನು ಬದಲಾಯಿಸಬೇಕು. ಭ್ರಷ್ಟಾಚಾರ ದೇಶವ್ಯಾಪ್ತಿ ಆವರಿಸಿ ಕೊಂಡಿದ್ದು ಅದನ್ನು ಬದಲಾಯಿಸಬೇಕು ಎಂದು ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಅಭಿಪ್ರಾಯ ಪಟ್ಟರು.


Body:ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಸಿ.ಐ.ಟಿ.ಯು ೧೪ನೇ ರಾಜ್ಯದ ಸಮ್ಮೇಳನ ಹಾಗೂ ಸಿ.ಐ.ಟಿ.ಯು ೫೦ನೇ ವರ್ಷಚರಣೆಯ ನೆನಪಿನಲ್ಲಿ ಕಾರ್ಮಿಕ ಕಾಯ್ದೆ- ಸಂಹಿತೆಗಳಾಗಿ ಬದಲಾವಣೆ ದುಎಇವ ಜನರ ನಿಲುಮೆ ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸಮಸ್ಯೆಗೆಳೇ ಸವಾಲಾಗಿ ಎದುರಾಗಿವೆ. ದೇಶದಲ್ಲಿರುವ ಕಾನೂನು, ನೀತಿ ನಿಯಮಗಳು, ದೇಶದ ಆರ್ಥಿಕತೆ, ಪ್ರಜಾಪ್ರಭುತ್ವ ವ್ಯವಸ್ಥೆ ತುಕ್ಕು ಹಿಡಿದಿದೆ ಇವುಗಳೆಲ್ಲವನ್ನು ಬದಲಾಯಿಸಬೇಕು. ಭ್ರಷ್ಟಾಚಾರ ದೇಶವ್ಯಾಪ್ತಿ ಆವರಿಸಿ ಕೊಂಡಿದ್ದು ಅದನ್ನು ಬದಲಾಯಿಸಬೇಕು. ಈ ಎಲ್ಲ ಪ್ರಕ್ರಿಯೆಯನ್ನು ಕಾರ್ಮಿಕ ಕಾನೂನು ಒಳಗೊಂಡಿದೆ.
ಭಾರತ ಸ್ವಾತಂತ್ರ್ಯ ಆದ ಸಂಧರ್ಭದಲ್ಲಿ ಬಂದಂತಹ ಕಾನೂನುಗಳು ಅಂದಿನ ಸಮಾಜಕ್ಕೆ ಅಗತ್ಯವಾದಂತೆ ಇದ್ದವು, ಆದರೆ ಇಂದಿನ ಸಮಾಜ ಅಂದಿನ ರೀತಿಯಲ್ಲಿ ಇಲ್ಲ ಹಾಗಾಗಿ ಇಂದಿನ ಸಮಾಜಕ್ಕೆ ತಕ್ಕಂತೆ ಕಾನೂನುಗಳು ಬದಲಾಗಬೇಕು ಎಂದು ಅಭಿಪ್ರಾಯ ಪಟ್ಟರು.
ಬೈಟ್: ಮೀನಾಕ್ಷಿ ಸುಂದರಂ, ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ


Conclusion:ವರದಿ
ಸುಧಾಕರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.