ತುಮಕೂರು: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಶಿಕ್ಷಕ ಸಾವು

author img

By

Published : Aug 2, 2022, 8:13 PM IST

a-teacher-died-after-being-washed-away-in-ditch-at-tumakur

ಶಾಲೆ ಮುಗಿಸಿಕೊಂಡು ಬೈಕ್​ನಲ್ಲಿ ಬರುತ್ತಿದ್ದಾಗ ಶಿಕ್ಷಕರೊಬ್ಬರು ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜರುಗಿದೆ.

ತುಮಕೂರು: ಭಾರಿ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಶಾಲಾ ಶಿಕ್ಷಕರೊಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚನ್ನನಕುಂಟೆ ಗ್ರಾಮದಲ್ಲಿ ನಡೆದಿದೆ. ಆರೀಫ್ ಉಲ್ಲಾ (55) ಎಂಬುವವರೇ ಮೃತ ಶಿಕ್ಷಕ.

ತುಮಕೂರು: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಶಿಕ್ಷಕ ಸಾವು

ಶಿರಾ ತಾಲೂಕಿನ ದಾವತ್ ಪಾಳ್ಯ ಗ್ರಾಮದಿಂದ ಶಿಕ್ಷಕ ಆರೀಫ್​ ಶಾಲೆ ಮುಗಿಸಿಕೊಂಡು ಬೈಕ್​ನಲ್ಲಿ ವಾಪಸ್ ಶಿರಾ ನಗರಕ್ಕೆ ಬರುತ್ತಿದ್ದರು. ರಸ್ತೆಯಲ್ಲಿರುವ ಹಳ್ಳ ದಾಟುವ ಸಮಯದಲ್ಲಿ ಬೈಕ್​ನೊಂದಿಗೆ ಆಯತಪ್ಪಿ ಬಿದ್ದಿರುವ ಶಿಕ್ಷಕ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಮೃತದೇಹ ಸುಮಾರು ಐವತ್ತು ಮೀಟರ್ ದೂರದ ಸೀಮೆ ಜಾಲಿ ಗಿಡಗಳ ಮಧ್ಯೆ ಪತ್ತೆಯಾಗಿದೆ. ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಭಟ್ಕಳದಲ್ಲಿ ಮನೆ ಮೇಲೆ ಕುಸಿದ ಗುಡ್ಡ; ಒಂದೇ ಕುಟುಂಬದ ನಾಲ್ವರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.