ETV Bharat / state

ಕೌಟುಂಬಿಕ ಕಲಹ ಹಿನ್ನೆಲೆ ಗೃಹಿಣಿ ಆತ್ಮಹತ್ಯೆ: ಸಂಬಧಿಕರಿಂದ ಕೊಲೆ ಆರೋಪ

author img

By

Published : Jan 4, 2020, 2:03 PM IST

ಭದ್ರಾವತಿ ತಾಲೂಕಿನ ಮೈದೂಳಲು ಗ್ರಾಮದಲ್ಲಿ ಗೃಹಿಣಿ ದೀಪಾ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಸಂಬಂಧಿಕರು ಇದು ಕೊಲೆ ಎಂದು ಆರೋಪ ಮಾಡಿದ್ದಾರೆ.

ಗೃಹಿಣಿ ಆತ್ಮಹತ್ಯೆ
ಗೃಹಿಣಿ ಆತ್ಮಹತ್ಯೆ

ಶಿವಮೊಗ್ಗ: ಗೃಹಿಣಿಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭದ್ರಾವತಿ ತಾಲೂಕು ಮೈದೂಳಲು ಗ್ರಾಮದಲ್ಲಿ ನಡೆದಿದೆ. ದೀಪಾ (25) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ ಎನ್ನಲಾಗಿದೆ.

ಕಳೆದ 5 ವರ್ಷಗಳ ಹಿಂದೆ ಮೈದೂಳಲು ಗ್ರಾಮದ ಪ್ರದೀಪ್ ಎಂಬುವವರಿಗೆ ದೀಪಾರನ್ನು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದಿಂದ ಮದುವೆ ಮಾಡಿಕೊಂಡು ಬರಲಾಗಿತ್ತು. 5 ವರ್ಷವಾದ್ರೂ ಮಕ್ಕಳಾಗಿರಲಿಲ್ಲ. ಇದರಿಂದ ಪ್ರದೀಪ್ ಮನೆಯಲ್ಲಿ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಗೃಹಿಣಿ ಆತ್ಮಹತ್ಯೆ

ಇದರಿಂದ ಗಂಡ, ಅತ್ತೆ, ಮಾವ ಹೊಡೆದು ಕೊಲೆ ಮಾಡಿ ನಂತರ ನೇಣು ಹಾಕಿದ್ದಾರೆ ಎಂದು ಮೃತ ದೀಪಾ ಪೋಷಕರು ಆರೋಪಿಸಿದ್ದಾರೆ. ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಗಂಡನ ಮನೆಯವರ ಕಿರುಕುಳ ಗೃಹಿಣಿ ನೇಣಿಗೆ ಶರಣು: ಸಂಬಂಧಿಕರ ಆರೋಪ.

ಶಿವಮೊಗ್ಗ: ಗೃಹಿಣಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭದ್ರಾವತಿ ತಾಲೂಕು ಮೈದೂಳಲು ಗ್ರಾಮದಲ್ಲಿ ನಡೆದಿದೆ. ದೀಪಾ (25) ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿ ಕೊಂಡ ಗೃಹಿಣಿ. Body:ಕಳೆದ 5 ವರ್ಷದ ಹಿಂದೆ ಮೈದೂಳಲು ಗ್ರಾಮದ ಪ್ರದೀಪರವರಿಗೆ ದೀಪಾರನ್ನು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದಿಂದ ಮದುವೆ ಮಾಡಿ ಕೊಂಡು ಬರಲಾಗಿತ್ತು. 5 ವರ್ಷವಾದ್ರೂ ಮಕ್ಕಳಾಗಿರಲಿಲ್ಲ. ಇದರಿಂದ ಪ್ರದೀಪ್ ಮನೆಯಲ್ಲಿ ಆಗ್ಗಾಗೆ ಜಗಳ ನಡೆಯುತ್ತಿತ್ತು. Conclusion: ಇದರಿಂದ ಗಂಡ, ಅತ್ತೆ,ಮಾವ ಹೊಡೆದು ಕೊಲೆ ಮಾಡಿ ನಂತ್ರ ನೇಣು ಹಾಕಿದ್ದಾರೆ ಮೃತ ದೀಪಾ ಪೋಷಕರು ಆರೋಪಿಸಿದ್ದಾರೆ. ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.