ETV Bharat / state

ಇಂದಿನಿಂದ ಚುನಾವಣಾ ನೀತಿ ಸಂಹಿತೆಯ ಮಾದರಿ ನೀತಿ ಸಂಹಿತೆ ಜಾರಿ: ಡಿ ಸಿ ಡಾ ಸೆಲ್ವಮಣಿ

author img

By

Published : Mar 29, 2023, 10:16 PM IST

ಚುನಾವಣೆಗೆ ಬೇಕಾದ ಎಲ್ಲಾ ರಕ್ಷಣಾ ಕಾರ್ಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಎಸ್​​ಪಿ ಮಿಥುನ್ ಕುಮಾರ್ ಜಿ. ಕೆ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಡಾ ಸೆಲ್ವಮಣಿ
ಜಿಲ್ಲಾಧಿಕಾರಿ ಡಾ ಸೆಲ್ವಮಣಿ

ಜಿಲ್ಲಾಧಿಕಾರಿ ಡಾ ಸೆಲ್ವಮಣಿ

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆಯ ಮಾದರಿ ನೀತಿ ಸಂಹಿತೆ ಇಂದಿನಿಂದ ಜಾರಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ ಸೆಲ್ವಮಣಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂದರು.

ಜಿಲ್ಲೆಯ ಕ್ಷೇತ್ರವಾರು ಮತದಾರರ ವಿವರ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಪುರುಷರು- 1,04,610 ಮಹಿಳೆಯರು-1,05,768 ಹಾಗೂ ಇತರರು-4 ಸೇರಿ ಒಟ್ಟು -2,10,412 ಮತದಾರರಿದ್ದಾರೆ‌. ಭದ್ರಾವತಿ ಕ್ಷೇತ್ರ- ಪುರುಷರು-1,02,236, ಮಹಿಳೆಯರು-1,07,971 ಹಾಗೂ ಇತರೆ-5 ಸೇರಿ ಒಟ್ಟು -2,10,212 ಮತದಾರರಿದ್ದಾರೆ.

ಶಿವಮೊಗ್ಗ ನಗರ ಕ್ಷೇತ್ರದಲ್ಲಿ 1,25,942 ಪುರುಷರು, 1,31,729 ಮಹಿಳಾ ಮತದಾರರು ಹಾಗೂ ಇತರರು 13 ಜನ ಸೇರಿ ಒಟ್ಟು 2,57,685 ಮತದಾರರು ಇದ್ದಾರೆ. ತೀರ್ಥಹಳ್ಳಿ ಕ್ಷೇತ್ರದಲ್ಲಿ 92,141 ಪುರುಷರು, 94,453 ಮಹಿಳೆಯರು ಸೇರಿ 1,86,594 ಮತದಾರರಿದ್ದಾರೆ. ಶಿಕಾರಿಪುರ ದಲ್ಲಿ 9,91,29 ಪುರುಷರು, 9,83,11 ಮಹಿಳೆಯರು ಹಾಗೂ ಇತರರು 3 ಮತದಾರರು ಸೇರಿ ಒಟ್ಟು 1,97,443 ಮತದಾರರಿದ್ದಾರೆ.

ಎಸ್​​ಪಿ ಮಿಥುನ್ ಕುಮಾರ್

ಸೊರಬ ಕ್ಷೇತ್ರದಲ್ಲಿ 97,674 ಪುರುಷ ಮತದಾರರು, 95,910 ಮಹಿಳಾ ಮತದಾರರು ಸೇರಿ ಒಟ್ಟು 1,93,584 ಮತದಾರರಿದ್ದಾರೆ. ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಪುರುಷರು -10,317, ಮಹಿಳೆಯರು-1,02,432 ಹಾಗೂ ಇತರರು 1 ಸೇರಿ ಒಟ್ಟು- 2,02,750 ಮತದಾರರಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ 14,58,680 ಮತದಾರರಿದ್ದಾರೆ.

ಜಿಲ್ಲೆಯ ಮತಗಟ್ಟೆಗಳ ವಿವರ:

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ-247.
ಭದ್ರಾವತಿ ಕ್ಷೇತ್ರ-253.
ಶಿವಮೊಗ್ಗ ಕ್ಷೇತ್ರ-282.
ತೀರ್ಥಹಳ್ಳಿ ಕ್ಷೇತ್ರ-258.
ಶಿಕಾರಿಪುರ ಕ್ಷೇತ್ರ-232.
ಸೊರಬ ಕ್ಷೇತ್ರ-239.
ಸಾಗರ ಕ್ಷೇತ್ರ-264 ಮತಗಟ್ಟೆಗಳಿವೆ.

ವಿವಿಧ ತಂಡಗಳ ರಚನೆ- ಸೆಕ್ಟರ್ ಆಫೀಸರ್ಸ್-166, ಅಸಿಸ್ಟೆಂಟ್ ಎಕ್ಸ್ಪೆಂಡಿಚರ್ಸ್ ಅರ್ಬವರ್ಸ್-07, ಅಕೌಂಟಿಂಗ್ ಟೀಂ-07, ಫ್ಲೈಯಿಂಗ್ ಸ್ಕ್ವಾಡ್ -44, ಸ್ಟಾಟಿಕ್ ಸರ್ವೆಲೆನ್ಸ್ ಟೀಂ-36, ಎಂಸಿಸಿ-07, ವಿಡಿಯೋ ಸರ್ವೆಲೆನ್ಸ್ ಟೀಂ-44, ವಿಡಿಯೋ ವ್ಯೂಯಿಂಗ್ ಟೀಂ-07

ಚೆಕ್​ಪೋಸ್ಟ್​ ವಿವರ- ಜಿಲ್ಲೆಯಲ್ಲಿ ಒಟ್ಟು 36 ಕಡೆ ಚೆಕ್​ ಪೋಸ್ಟ್​ ತೆರೆಯಲಾಗಿದೆ. ಇದರಲ್ಲಿ ಈಗಾಗಲೇ 7 ಕಡೆ ಚೆಕ್​ಪೋಸ್ಟ್​ ಕಾರ್ಯಾರಂಭ ಮಾಡಲಾಗಿದೆ ಎಂದು‌ ಎಸ್​​ಪಿ ಮಿಥುನ್ ಕುಮಾರ್ ಜಿ. ಕೆ ತಿಳಿಸಿದ್ದಾರೆ.

ಇದನ್ನೂ ಓದಿ : ಮುಂದೆ ನಮ್ಮದೇ ಸರ್ಕಾರ ಬರುತ್ತೆ, ಕಾಂಗ್ರೆಸ್​ಅನ್ನು ಕಿತ್ತು ಹಾಕುತ್ತೇವೆ : ಸಚಿವ ಆರ್ ಅಶೋಕ್

6 ಜನರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ: ಚುನಾವಣೆಗಾಗಿಯೇ CRPF 6 ತಂಡಗಳು ಜಿಲ್ಲೆಗೆ ಬರಲಿವೆ. ಸ್ಟ್ಟಾಂಗ್ ರೂಂ, ಮತ ಎಣಿಕೆ ಕೇಂದ್ರಗಳಿಗೆ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಜಿಲ್ಲೆಯಿಂದ 55 ಜನರನ್ನು ಗಡಿಪಾರು ಮಾಡಲಾಗಿದೆ. 6 ಜನರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ಚುನಾವಣೆಗೆ ಬೇಕಾದ ಎಲ್ಲಾ ರಕ್ಷಣಾ ವ್ಯವಸ್ಥೆಯನ್ನು ತೆಗೆದುಕೊಳ್ಳಲಾಗಿದೆ ಎಂದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಎಸ್. ಎಸ್. ಬಿರಾದರ್ ಹಾಜರಿದ್ದರು.

ಇದನ್ನೂ ಓದಿ : 2217 ಬೂತ್ ಗಳು ಅತಿ ಸೂಕ್ಷ್ಮ ಎಂದು ಗುರುತು: ಮುಖ್ಯ ಆಯುಕ್ತ ತುಷಾರ್ ಗಿರಿನಾಥ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.