ಶಿವಮೊಗ್ಗ : ದೇಶಕ್ಕೆ ಸಿಕ್ಕ ಅದ್ಭುತ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯವರು ಎಂದು ಮಾಜಿ ವಿಧಾನ ಪರಿಷತ್ ಸಭಾಧ್ಯಕ್ಷ ಡಿ ಹೆಚ್ ಶಂಕರ್ ಮೂರ್ತಿ ಹೇಳಿದರು.
ರವೀಂದ್ರ ನಗರ ಗಣಪತಿ ದೇವಸ್ಥಾನದಲ್ಲಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಹಿನ್ನೆಲೆ ಮೋದಿ ವಿಚಾರ ಮಂಚ್ ಹಾಗೂ ಅರ್ಚಕರ ವೃಂದದ ವತಿಯಿಂದ ಭೀಮರಥ ಶಾಂತಿ ಹಾಗೂ ಮಹಾಗಣಪತಿ ಯಾಗ ಕಾರ್ಯಕ್ರಮ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದೇಶಕ್ಕೆ ಸಿಕ್ಕ ಅದ್ಭುತ ವ್ಯಕ್ತಿ ನರೇಂದ್ರ ಮೋದಿಯವರು. ಕೋವಿಡ್ ಸಂದರ್ಭದಲ್ಲಿಯೂ ಸಹ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದಾರೆ.
ಕೊರೊನಾ ವಿರುದ್ಧ ಹೋರಾಡಲು ಕೋವಿಡ್ ಲಸಿಕೆ ನೀಡುವಲ್ಲಿ ವಿಶ್ವದಲ್ಲೇ ಇಂದು ಭಾರತ ಮುಂದಿದೆ. ನರೇಂದ್ರ ಮೋದಿಯವರ ಆರೋಗ್ಯ, ಚೈತನ್ಯ ಹೀಗೆ ಇರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮೋದಿ ವಿಚಾರ ಮಂಚ್ನ ರಾಜ್ಯಾಧ್ಯಕ್ಷ ಸಂತೋಷ ಬೆಳ್ಳಕೇರೆ, ಮಹಾನಗರ ಮಾಜಿ ಪಾಲಿಕೆ ಉಪ ಮೇಯರ್ ಸುರೇಖಾ ಮುರುಳೀಧರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ ಇ ಕಾಂತೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.