ETV Bharat / state

ಮಹಿಳೆ ಸಾವು ಪ್ರಕರಣ: ಆರೋಪಿಗಳನ್ನು ಬಂಧಿಸುವಂತೆ ಸಂಬಂಧಿಕರಿಂದ ಮನವಿ

author img

By

Published : Apr 1, 2023, 6:52 PM IST

Updated : Apr 1, 2023, 8:20 PM IST

ತನ್ನ ತಾಯಿಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಮೃತ ಮಹಿಳೆಯ ಮಗ ದೂರು ನೀಡಿದ್ದಾರೆ.

Shivamogga SP Mithun Kumar
ಶಿವಮೊಗ್ಗ ಎಸ್​ಪಿ ಮಿಥುನ್​ ಕುಮಾರ್​

ಶಿವಮೊಗ್ಗ ಎಸ್​ಪಿ ಮಿಥುನ್​ ಕುಮಾರ್​

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ತಾಂಡದ ಜೀಮಿಬಾಯಿ (50) ಎಂಬ ಮಹಿಳೆಯ ಸಾವು ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಮೃತ ಮಹಿಳೆಯ ಮಗ ಮಂಜು ನಾಯ್ಕ್ ಹಾಗೂ ಸಂಬಂಧಿಕರು ಇಂದು ಶಿವಮೊಗ್ಗ ಎಸ್​ಪಿ ಮಿಥುನ್​ ಕುಮಾರ್​ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮೃತರ ಸಂಬಂಧಿಕರ ಮನವಿ ಸ್ವೀಕರಿಸಿ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್, ಮಾರ್ಚ್​ 11 ರಂದು ಚಿಕ್ಕಮಾಗಡಿ ತಾಂಡದ ಜೀಮಿಬಾಯಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತನ್ನ ತಾಯಿಯನ್ನು ಅದೇ ಗ್ರಾಮದ ಹಾಲೇಶ ನಾಯ್ಕ್​ ಹಾಗೂ ಹೇಮಂತ ನಾಯ್ಕ್​ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ, ಮೃತಳ ಮಗ ಮಾರ್ಚ್​ 13 ರಂದು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. 302 ಮತ್ತು 376 ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಅನೇಕ ಮಾಹಿತಿಗಳು ಲಭ್ಯವಾಗಿವೆ. ನಮ್ಮ ಶಿರಾಳಕೊಪ್ಪ ಪೊಲೀಸ್ ಠಾಣೆಯ ಪಿಐ ಅವರು ತ‌ನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ದೊಣ್ಣೆಯಿಂದ ಹೊಡೆದು ತಾಯಿಯ ಕೊಲೆ ಮಾಡಿದ ಮಗ

Last Updated : Apr 1, 2023, 8:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.