ETV Bharat / state

ನಗರಕ್ಕೆ ನುಗ್ಗಿದ ಕಾಡಾನೆ: ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಶುರು

author img

By

Published : Mar 21, 2021, 9:53 AM IST

Updated : Mar 21, 2021, 1:31 PM IST

ರಾಮನಗರ ಜಿಲ್ಲೆಯ ಕನಕಪುರ ಪಟ್ಟಣದಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಜನ ಆತಂಕಕ್ಕೊಳಗಾಗಿದ್ದಾರೆ.

wild elephants enters to kanakpur city
ನಗರಕ್ಕೆ ನುಗ್ಗಿದ ಕಾಡಾನೆ

ರಾಮನಗರ: ಜಿಲ್ಲೆಯ ಕನಕಪುರ ಪಟ್ಟಣದಲ್ಲಿ ಕಾಡಾನೆ ಪ್ರತ್ಯಕ್ಷವಾಗಿದೆ. ಇದರಿಂದಾಗಿ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಬೆಳ್ಳಂಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಶುರುಮಾಡಿದ್ದಾರೆ.

ನಗರಕ್ಕೆ ನುಗ್ಗಿದ ಕಾಡಾನೆ
ಈವರೆಗೆ ಗ್ರಾಮಾಂತರ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದ ಆನೆಗಳು, ಈಗ ನಗರದಲ್ಲಿಯೂ ಕಾಣಿಸಿಕೊಳ್ಳುತ್ತಿವೆ. ಕನಕಪುರ ನಗರದ ಕೋಟೆ ಬೀದಿಯಲ್ಲಿನ ಅರ್ಕಾವತಿ ನದಿ ದಡದಲ್ಲೇ ಎರಡು ಆನೆಗಳು ಕಾಣಿಸಿಕೊಂಡಿವೆ. ಕನಕಪುರದ ಅಂಚಿನಲ್ಲಿರುವ ಬಿಳಿಕಲ್ಲು ಬೆಟ್ಟದಿಂದ ಈ ಆನೆಗಳು ಅರ್ಕಾವತಿ ನದಿ ಪಾತ್ರದ ಮೂಲಕ ಕನಕಪುರಕ್ಕೆ ದಾಂಗುಡಿ ಇಟ್ಟಿವೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಕಾಡಾನೆಯನ್ನ ಕಾಡಿಗೆ ಕಳಿಸುವ ಯತ್ನ ಮಾಡುತ್ತಿದ್ದಾರೆ. ಅರ್ಕಾವತಿ ನದಿ ಬಳಿ ಇರುವ ಸಾರ್ವಜನಿಕರು ಮನೆಯಿಂದ ಹೊರಬರದಂತೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ತುಂಡುಬಟ್ಟೆ ಧರಿಸಿದ ಭಕ್ತರಿಗೆ ಗುಜರಾತ್​ ದೇವಾಲಯಕ್ಕೆ ಪ್ರವೇಶವಿಲ್ಲ!

Last Updated : Mar 21, 2021, 1:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.