ETV Bharat / state

ಎರಡೂ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ : ಸಚಿವ ಅಶ್ವತ್ಥ್​​ ನಾರಾಯಣ​​ ವಿಶ್ವಾಸ

author img

By

Published : Nov 1, 2021, 2:31 PM IST

ನಮ್ಮದು ಜನರ ಪಕ್ಷ, ಕುಟುಂಬಕ್ಕೆ ಸೀಮಿತವಿಲ್ಲ. ನಮಗೆ ಎರಡೂ ಪಕ್ಷಗಳಿಂದ ಫೈಟ್ ಇಲ್ಲ. ರಾಮನಗರದಲ್ಲಿ ಸ್ವಲ್ಪ ಇದೇ, ಮುಂದೆ ಅದನ್ನು ತೆಗೆಯುತ್ತೇವೆ ಎಂದು ಕಾಂಗ್ರೆಸ್ - ಜೆಡಿಎಸ್​​ಗೆ ಸಚಿವ ಅಶ್ವತ್ಥ್​​ ನಾರಾಯಣ​​ ಟಾಂಗ್ ನೀಡಿದರು..

Minister Ashwath Narayan
ಸಚಿವ ಡಾ. ಸಿ.ಎನ್​​ ಅಶ್ವತ್ಥ್​​ ನಾರಾಯಣ್​​

ರಾಮನಗರ : ಸಿಂದಗಿ ಹಾಗೂ ಹಾನಗಲ್ ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲಲಿದೆ ಎಂದು ಸಚಿವ ಡಾ. ಸಿ ಎನ್​​ ಅಶ್ವತ್ಥ್​​ ನಾರಾಯಣ​​ ವಿಶ್ವಾಸ ವ್ಯಕ್ತಪಡಿಸಿದರು.

ಸಿಂದಗಿ, ಹಾನಗಲ್ ಉಪಚುನಾವಣೆ ಫಲಿತಾಂಶದ ಬಗ್ಗೆ ಸಚಿವ ಅಶ್ವತ್ಥ್​​ ನಾರಾಯಣ್ ಮಾತನಾಡಿರುವುದು..

ರಾಮನಗರದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಸಿಂದಗಿ, ಹಾನಗಲ್ ಉಪಚುನಾವಣೆ ಫಲಿತಾಂಶ ಬರಲಿದೆ. ಎರಡೂ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ ಎಂದರು.

ಚುನಾವಣೆಯಲ್ಲಿ ಹಣ ಹಂಚಿಕೆ ಮಾಡುವುದು ಕಾಂಗ್ರೆಸ್ ಸಂಸ್ಕೃತಿ. ಕುಟುಂಬಗಳ ಪಕ್ಷ ನಮ್ಮದಲ್ಲ. ನಮ್ಮಲ್ಲಿ ಯಾರು ಬೇಕಾದರೂ ನಾಯಕರಾಗಬಹುದು.

ನಮ್ಮದು ಜನರ ಪಕ್ಷ, ಕುಟುಂಬಕ್ಕೆ ಸೀಮಿತವಿಲ್ಲ. ನಮಗೆ ಎರಡೂ ಪಕ್ಷಗಳಿಂದ ಫೈಟ್ ಇಲ್ಲ. ರಾಮನಗರದಲ್ಲಿ ಸ್ವಲ್ಪ ಇದೇ, ಮುಂದೆ ಅದನ್ನು ತೆಗೆಯುತ್ತೇವೆ ಎಂದು ಕಾಂಗ್ರೆಸ್ - ಜೆಡಿಎಸ್​​ಗೆ ಸಚಿವ ಅಶ್ವತ್ಥ್​​ ನಾರಾಯಣ​​ ಟಾಂಗ್ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.