ETV Bharat / state

ರಾಮನಗರದಲ್ಲಿ ಕುಮಾರಸ್ವಾಮಿ ಕುಟುಂಬ ಸಮೇತ ಮತದಾನ; ಹಾಸನದ ದೇವಸ್ಥಾನದಲ್ಲಿ ಹೆಚ್ ಡಿ ರೇವಣ್ಣ ಪೂಜೆ ಸಲ್ಲಿಕೆ

author img

By

Published : May 10, 2023, 11:51 AM IST

Updated : May 10, 2023, 4:35 PM IST

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕುಟುಂಬ ಸಮೇತ ರಾಮನಗರದಲ್ಲಿ ಮತ ಚಲಾಯಿಸಿದರು.

voting by hd kumaraswamy family
ಹೆಚ್​ ಡಿ ಕುಮಾರಸ್ವಾಮಿ ಮತದಾನ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತದಾನ ಮತ್ತು ಹೆಚ್ ಡಿ ರೇವಣ್ಣ ಪೂಜೆ ಸಲ್ಲಿಕೆ ವಿಡಿಯೋ

ರಾಮನಗರ: ರಾಜ್ಯ ವಿಧಾನಸಭೆ ಚುನಾವಣೆಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸಕುಂಟುಂಬ ಸಮೇತರಾಗಿ ಬಂದು ಮತದಾನ ಮಾಡಿದರು. ಬಿಡದಿ ಪುರಸಭೆ ವ್ಯಾಪ್ತಿಯ ಕೇತಿಗಾನಹಳ್ಳಿಯ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಜೊತೆ ಪತ್ನಿ ಹಾಗು ರಾಮನಗರ ವಿಧಾನಸಭೆ ಕ್ಷೇತ್ರದ ಶಾಸಕರೂ ಆಗಿರುವ ಅನಿತಾ ಕುಮಾರಸ್ವಾಮಿ, ರಾಮನಗರ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಗ ನಿಖಿಲ್​ ಕುಮಾರಸ್ವಾಮಿ, ಸೊಸೆ ರೇವತಿ ನಿಖಿಲ್​ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು.

ಹಾಸನಲದಲ್ಲಿ ಪೂಜೆ ಸಲ್ಲಿಸಿದ ಹೆಚ್ ಡಿ ರೇವಣ್ಣ ಕುಟುಂಬ: ಜೆಡಿಎಸ್ ಅಭ್ಯರ್ಥಿ ಎಚ್.ಡಿ.ರೇವಣ್ಣ ತಮ್ಮ ಕುಟುಂಬ ಸಮೇತ ಹಾಸನ ಜಿಲ್ಲೆಯ ಹೊಳೆನರಸೀಪುರದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಮತದಾನ ಮಾಡಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಕುಟುಂಬ

ಮತದಾನ ಮಾಡಿ ನಂತರ ಮಾತನಾಡಿದ ಹೆಚ್​ಡಿ ಕುಮಾರಸ್ವಾಮಿ, ನಾಡಿನ ಜನತೆ ಮತದಾನ ಮಾಡುವುದರಲ್ಲಿ ಹಿಂದೆ ಸರಿಯಬೇಡಿ ಎಂದು ಮನವಿ ಮಾಡುತ್ತೇನೆ ಎಂದರು. ಮುಂದೆ ಮಗ ನಿಖಿಲ್​ ಕುಮಾರಸ್ವಾಮಿ ಮಾತನಾಡಿ, ಇವತ್ತು ರಾಜಕೀಯದ ವ್ಯವಸ್ಥೆಯನ್ನು ನೋಡಿದಾಗ, ಚುನಾವಣೆ ದುಡ್ಡಿನ ಬಲದ ಮೇಲೆ ನಿಂತಿರುವಂಥದ್ದು. ಇವೆಲ್ಲ ವಿಚಾರಗಳು ನನ್ನಂತಹ ಯುವಕರಲ್ಲಿ ನೋವು ತಂದಿರುವಂಥದ್ದು. ಯಾರು ನಿಜಕ್ಕೂ ಅವಕಾಶ ಸಿಕ್ಕಂತಹ ಸಂದರ್ಭದಲ್ಲಿ ಸೇವೆ ಮಾಡಲು ಕ್ಷೇತ್ರದ ಜನರೊಟ್ಟಿಗೆ ನಿಂತಿದ್ದಾರೆ ಎಂದು ನೋಡಿ ಜನ ಸಾಮಾನ್ಯರು ಮತ ಹಾಕಬೇಕು. ಮುಂದಿನ ದಿನಗಳಲ್ಲಿ ಇದಕ್ಕೆ ದೊಡ್ಡ ಮಟ್ಟದಲ್ಲಿ ಬದಲಾವಣೆಯನ್ನು ಕರ್ನಾಟಕದ ರಾಜ್ಯದ ಜನತೆ ತರಲಿ ಎಂದು ಆಶಿಸುತ್ತೇನೆ ಎಂದರು.

ಆದರೆ, ಈಗಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದಾಗ, ರಾಜ್ಯ ರಾಜಕಾರಣದಲ್ಲಿ ಚುನಾವಣೆ ನಡೆದಿರುವಂಥದ್ದು ಒಂದು ಹಂತಕ್ಕೆ ದುಡ್ಡಿನ ಮೇಲೇ ನಡೆದಿದೆ. ಸಂಪೂರ್ಣವಾಗಿ ಎಂದು ನಾನು ಹೇಳುದಿಲ್ಲ. ಆದರೆ ಒಂದು ಹಂತಕ್ಕೆ ಇದು ಹಣದ ಮೇಲೆ ನಡೆಯುತ್ತಿರುವ ಚುನಾವಣೆ. ದುಡ್ಡು ಇರುವಂಥವರು ಹಣ ಕೊಟ್ಟು ಮತ ಹಾಕಿಸಿಕೊಳ್ಳುತ್ತಾರೆ. ಹಣ ಇಲ್ಲದವರು ಚುನಾವಣೆಯಲ್ಲಿ ಹಿನ್ನಡೆಯನ್ನು ಕಾಣಬಹುದು. ಆದರೆ ಇದೆಲ್ಲಾ ಜನತೆ ಮೇಲೆ ಬಿಟ್ಟಿರುವಂತ ತೀರ್ಮಾನ.

ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಒಳ್ಳೆ ವಾತಾವರಣ ಕಾಣುತ್ತಿದೆ. ಈ ಬಾರಿ ನಮ್ಮ ಪಕ್ಷಕ್ಕೆ ಒಳ್ಳೆದಾಗುತ್ತೆ ಎಂಬ ವಿಶ್ವಾಸವಿದೆ. ಆದರೆ ವ್ಯವಸ್ಥೆ ಸ್ವಲ್ಪ ಹಾಳಾಗಿದೆ ಎಂದು ಅನಿಸುತ್ತಿದೆ. ಇದನ್ನೆಲ್ಲವನ್ನು ಮುಂದಿನ ದಿನಗಳಲ್ಲಿ ಸ್ವಲ್ಪ ಜನರಿಗೆ ಮನವರಿಕೆ ಮಾಡಿಕೊಡಬೇಕು. ಆದರೆ ಈ ಮೂರು ಪಕ್ಷಗಳು ಕೈ ಜೋಡಿಸಬೇಕು ಆ ಮೂಲಕ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂಬುದು ನನ್ನ ಭಾವನೆ ಎಂದರು.

ಇದನ್ನೂ ಓದಿ: 'ಅಪ್ಪು ಇಲ್ಲದೇ ಮತದಾನ ಮಾಡಿದ್ವಿ': ಡಾ.ರಾಜ್ ಕುಟುಂಬ ಭಾವುಕ

Last Updated :May 10, 2023, 4:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.