ETV Bharat / state

ಮುಂದಿನ 2 ವರ್ಷಗಳ ಕಾಲ ಯಡಿಯೂರಪ್ಪ ಅವರೇ ಸಿಎಂ : ಡಾ.ಅಶ್ವತ್ಥ್‌ ನಾರಾಯಣ

author img

By

Published : Jul 19, 2021, 6:34 PM IST

ಜುಲೈ 26ಕ್ಕೆ ಬಿಜೆಪಿ ಶಾಸಕರ ಸಭೆ ಹಿನ್ನೆಲೆಯಲ್ಲಿ ಸಿಎಂ ಬಿಎಸ್​​ವೈ ರಾಜೀನಾಮೆ ನೀಡ್ತಾರೆ ಎಂಬುದನ್ನ ಅಲ್ಲಗಳೆದಿದ್ದಾರೆ ಡಿಸಿಎಂ. ಅದೆಲ್ಲಾ ವದಂತಿಗಳು, ಸತ್ಯಕ್ಕೆ ದೂರವಾದ ಮಾತುಗಳಾಗಿವೆ‌. ನಮ್ಮ ಸರ್ಕಾರದ ಸಾಧನೆಗಳು ಮುಂದಿನ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು..

ರಾಮನಗರದಲ್ಲಿ ಡಿಸಿಎಂ ಡಾ.ಅಶ್ವಥ್ ನಾರಾಯಣ್ ಹೇಳಿಕೆ
ರಾಮನಗರದಲ್ಲಿ ಡಿಸಿಎಂ ಡಾ.ಅಶ್ವಥ್ ನಾರಾಯಣ್ ಹೇಳಿಕೆ

ರಾಮನಗರ : ಮುಂದಿನ ಎರಡು ವರ್ಷಗಳ ಕಾಲ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಅಂತಾ ಡಿಸಿಎಂ ಅಶ್ವತ್ಥ್ ನಾರಾಯಣ ಅವರು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಇನ್ನೆರಡು ವರ್ಷಗಳ ಕಾಲ ಮುಂದುವರೆಯುತ್ತಾರೆಂಬುಕ್ಕೆ ಯಾವುದೇ ಗೊಂದಲಗಳಿಲ್ಲ. ಹಾಗೆಯೇ ಜುಲೈ 26ಕ್ಕೆ ಬಿಜೆಪಿ ಶಾಸಕರ ಸಭೆ ಹಿನ್ನೆಲೆಯಲ್ಲಿ ಸಿಎಂ ಬಿಎಸ್​​ವೈ ರಾಜೀನಾಮೆ ನೀಡ್ತಾರೆ ಎಂಬುದನ್ನ ಅಲ್ಲಗಳೆದಿದ್ದಾರೆ.

ಅದೆಲ್ಲಾ ವದಂತಿಗಳು, ಸತ್ಯಕ್ಕೆ ದೂರವಾದ ಮಾತುಗಳಾಗಿವೆ‌. ನಮ್ಮ ಸರ್ಕಾರದ ಸಾಧನೆಗಳು ಮುಂದಿನ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ಇನ್ನು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್‌ ಅವರದು ಎನ್ನಲಾದ ಆಡಿಯೋ ವೈರಲ್ ಆಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಉನ್ನತ ಸಚಿವರೂ ಆದ ಅಶ್ವತ್ಥ್ ನಾರಾಯಣ ಅವರು, ಆ ಆ ಆಡಿಯೋ ತಮ್ಮದಲ್ಲ ಎಂದು ಈಗಾಗಲೇ ಕಟೀಲ್‌ ಅವರೇ ಸ್ಪಷ್ಟಪಡಿಸಿದ್ದಾರೆ ಎಂದರು.

ಇದನ್ನೂ ಓದಿ : ಸಾಮಾನ್ಯರದ್ದಲ್ಲ, ಈ ಆಡಿಯೋ ನಳಿನ್ ಕುಮಾರ್ ಕಟೀಲ್ ಅವರದ್ದೇ.. : ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.