ಕೆರೆ ದಡದ ಕಸ ತೆರವುಗೊಳಿಸಿದ ಡಿವೈಎಸ್‌ಪಿ ತಂಡ: ಬಹುಕಾಲದ ಸಮಸ್ಯೆಗೆ ಮುಕ್ತಿ

author img

By

Published : Oct 12, 2021, 8:01 AM IST

Chennapatna DYSP cleans lake shore at Ramngar

ನಗರದ ಕುಡಿನೀರು ಕಟ್ಟೆಯಲ್ಲಿ ಸೂಕ್ತ ನಿರ್ವಹಣೆಯಿಲ್ಲದೆ ಗಿಡಗಳು ಬೆಳೆದು ಓಡಾಟಕ್ಕೆ ಅಡ್ಡಿಯಾಗಿತ್ತು. ಇದೀಗ ಡಿವೈಎಸ್​ಪಿ ರಮೇಶ್ ಅವರ ದೃಢಸಂಕಲ್ಪದಿಂದಾಗಿ ಕೆರೆ ದಡದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದ್ದು, ಕಸ ತೆರವುಗೊಳಿಸಿ ಸಮಸ್ಯೆಗೆ ಅಂತ್ಯಹಾಡಿದ್ದಾರೆ.

ರಾಮನಗರ: ಕೆರೆ ಅಂಚಿನಲ್ಲಿ ಬೆಳೆದಿದ್ದ ಗಿಡಗಳನ್ನು ಕತ್ತರಿಸಿ ಸ್ಚಚ್ಛಗೊಳಿಸುವ ಮೂಲಕ ಡಿವೈಎಸ್​ಪಿ ರಮೇಶ್ ತಂಡ ಮಾದರಿ ಕೆಲಸ ಮಾಡಿದೆ. ಕೆಲವು ತಿಂಗಳಿನಿಂದ ಗಿಡಗಳು ರಸ್ತೆ ಮೇಲೆ ಬಂದಿತ್ತಲ್ಲದೆ, ಪಾದಚಾರಿಗಳಿಗೆ ಸಮಸ್ಯೆಯಾಗಿತ್ತು. ಜೊತೆಗೆ ನಗರ ಸೌಂದರ್ಯಕ್ಕೂ ಕುಂದು ತಂದಿತ್ತು.

ಇದನ್ನು ಗಮನಿಸಿದ ಚನ್ನಪಟ್ಟಣ ಡಿವೈಎಸ್​​ಪಿ ರಮೇಶ್​ ಈ ಕಸ ತೆರವುಗೊಳಿಸಲು ಮುಂದಾಗಿದ್ದರು. ಇದಕ್ಕಾಗಿ ವಾಟ್ಸಾಪ್​​​ನಲ್ಲಿ ಗ್ರೂಪ್ ಮಾಡಿಕೊಂಡು ಕೆಲ ದಿನಗಳಿಂದ ಚರ್ಚೆ ನಡೆಸಲಾಗಿತ್ತು.

ಕೆರೆ ದಡದಲ್ಲಿದ್ದ ಕಸ ತೆರವುಗೊಳಿಸುತ್ತಿರುವ ರಾಮನಗರ ಡಿವೈಎಸ್​​ಪಿ ತಂಡ

ಈ ಹಿನ್ನೆಲೆಯಲ್ಲಿ ಕೈಜೋಡಿಸಿದ 35ಕ್ಕೂ ಹೆಚ್ಚು ಮಂದಿ ಕುಡಿನೀರು ಕಟ್ಟೆಯಲ್ಲಿ ಬೆಳೆದಿದ್ದ ರಾಶಿ ರಾಶಿ ಕಸವನ್ನು ತೆರವು ಮಾಡಿದ್ದಾರೆ. ಈ ತಂಡ ಬೆಳಗ್ಗೆಯಿಂದ ಸಂಜೆವರೆಗೂ ಕಸ ತೆರವು ಕಾರ್ಯದಲ್ಲಿ ನಿರತವಾಗಿತ್ತು.

ಕೊರೊನಾಗಿಂತಲೂ ಮೊದಲು ಈ ಕೆರೆಯ ಬಳಿ ವಾಯುವಿಹಾರಕ್ಕೆಂದು ನೂರಾರು ಮಂದಿ ಬರುತ್ತಿದ್ದರು. ಆದರೆ ಕೊರೊನಾ ಬಳಿಕ ಜನರ ಓಡಾಟವಿಲ್ಲದೆ, ಗಿಡಗಳು ಬೆಳೆದಿದ್ದವು. ಜನರ ಓಡಾಟಕ್ಕೂ ಅಡ್ಡಿಯಾಗಿತ್ತು.

ಇದನ್ನೂ ಓದಿ: 'ಲೋಕಾಯುಕ್ತ ಮರುಸ್ಥಾಪಿಸಿ, ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.