ETV Bharat / state

ರಾಮನಗರ: ಮಹಿಳೆ ಬಲಿ ಪಡೆದಿದ್ದ ನರಭಕ್ಷಕ ಚಿರತೆ ಸೆರೆ.. ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

author img

By

Published : Nov 12, 2021, 11:49 AM IST

ಹಸು ಮೇಯಿಸಲು ಹೋಗುತ್ತಿದ್ದ ಮಹಾಲಕ್ಷ್ಮಮ್ಮ‍ ಎಂಬಾಕೆಯ ಮೇಲೆ ಕಳೆದ ತಿಂಗಳು ದಾಳಿ ನಡೆಸಿದ್ದ ಚಿರತೆ ಆಕೆಯನ್ನ ತಿಂದು ಹಾಕಿತ್ತು. ಬಳಿಕ ಅರಣ್ಯಾಧಿಕಾರಿಗಳು ಚಿರತೆ ಸೆರೆಗಾಗಿ ಕಾರ್ಯಾಚರಣೆ ಆರಂಭಿಸಿ ವಿವಿಧಡೆ 8 ಬೋನ್ ಇರಿಸಿತ್ತು.

cheetah captured by forest officials which killed woman
ಮಹಿಳೆಯ ಬಲಿ ಪಡೆದಿದ್ದ ನರಭಕ್ಷಕ ಚಿರತೆ ಸೆರೆ

ರಾಮನಗರ: ಮಾಗಡಿ ತಾಲೂಕಿನ ಕಲ್ಲುಪಾಳ್ಯ ಗ್ರಾಮದಲ್ಲಿ ಮಹಿಳೆಯ ಬಲಿ (Woman killed by Cheetah) ಪಡೆದಿದ್ದ ನರಭಕ್ಷಕ ಚಿರತೆ ಕೊನೆಗೂ ಸೆರೆಯಾಗಿದೆ. ಕಲ್ಲುಪಾಳ್ಯ ಸುತ್ತಮುತ್ತಲ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಹಸು ಮೇಯಿಸಲು ಹೋಗುತ್ತಿದ್ದ ಮಹಾಲಕ್ಷ್ಮಮ್ಮ‍ ಎಂಬಾಕೆಯ ಮೇಲೆ ಕಳೆದ ತಿಂಗಳು ದಾಳಿ ನಡೆಸಿದ್ದ ಚಿರತೆ ಆಕೆಯನ್ನ ತಿಂದುಹಾಕಿತ್ತು. ಬಳಿಕ ಅರಣ್ಯಾಧಿಕಾರಿಗಳು (Forest Department) ಚಿರತೆ ಸೆರೆಗಾಗಿ ಕಾರ್ಯಾಚರಣೆ ಆರಂಭಿಸಿ ವಿವಿಧಡೆ 8 ಬೋನ್ ಇರಿಸಿತ್ತು.

ಕಳೆದ 15 ದಿನಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಚಿರತೆ ಸೆರೆಗೆ ತೀವ್ರ ಶೋಧ ನಡೆಸಿದ್ದರು. 32 ಕ್ಯಾಮರಾ ಬಳಸಿ ಚಿರತೆ ಚಲನವಲನವನ್ನು ಅಧಿಕಾರಿಗಳು ಗಮನಿಸಿದ್ದರು.

ತಾಲೂಕು ಅರಣ್ಯಾಧಿಕಾರಿ ಜಗದೀಶ್ ಗೌಡ (Taluk Forest official Jagadish Gowda) ನೇತೃತ್ವದ 15 ಅಧಿಕಾರಿಗಳನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡಸಿ ಚಿರತೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.