ETV Bharat / state

ಮಾನವಿಯಲ್ಲಿ ಕಾರು ಅಪಘಾತ: ಪತಿ ಸಾವು, ಪತ್ನಿ ಗಂಭೀರ

author img

By

Published : Jun 25, 2021, 6:40 AM IST

ಕಾರು​ ಅಪಘಾತದಲ್ಲಿ ಪತಿ ಸಾವನ್ನಪ್ಪಿದ್ದು, ಪತ್ನಿಗೆ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ಸಂಭವಿಸಿದೆ.

Woman death in car accident, Woman death in car accident at Raichur district, Raichur news, Raichur accident news, ಕಾರ್ ಅಪಘಾತದಲ್ಲಿ ಮಹಿಳೆ ಸಾವು, ರಾಯಚೂರು ಜಿಲ್ಲೆಯಲ್ಲಿ ಕಾರ್ ಅಪಘಾತದಲ್ಲಿ ಮಹಿಳೆ ಸಾವು, ರಾಯಚೂರು ಸುದ್ದಿ, ರಾಯಚೂರು ಅಪಘಾತ ಸುದ್ದಿ,
ಕಾರ್​ ಅಪಘಾತದ ದೃಶ್ಯ

ರಾಯಚೂರು: ರಸ್ತೆಬದಿ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದ‌ ಪರಿಣಾಮ ವೃದ್ಧ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟು ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಮಾನವಿ ತಾಲೂಕಿನ ಬೋಮ್ಮನಾಳ ಕ್ರಾಸ್ ಬಳಿ ಈ‌ ದುರ್ಘಟನೆ ಸಂಭವಿಸಿತು.

Woman death in car accident, Woman death in car accident at Raichur district, Raichur news, Raichur accident news, ಕಾರ್ ಅಪಘಾತದಲ್ಲಿ ಮಹಿಳೆ ಸಾವು, ರಾಯಚೂರು ಜಿಲ್ಲೆಯಲ್ಲಿ ಕಾರ್ ಅಪಘಾತದಲ್ಲಿ ಮಹಿಳೆ ಸಾವು, ರಾಯಚೂರು ಸುದ್ದಿ, ರಾಯಚೂರು ಅಪಘಾತ ಸುದ್ದಿ,
ಘಟನಾ ಸ್ಥಳದ ಚಿತ್ರ

ಮೃತ ವ್ಯಕ್ತಿಯನ್ನು ಕಂಪ್ಲಿಯ ಮೂಲದ ಪಂಚಯ್ಯ ಸ್ವಾಮಿ (70) ಎಂದು ಗುರುತಿಸಲಾಗಿದೆ. ಪತ್ನಿ ಶಾಂತಮ್ಮ ಗಂಭೀರವಾಗಿ ಗಾಯಗೊಂಡಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಂಪ್ಲಿ ಪಂಚಯ್ಯ ಸ್ವಾಮಿ ಪತ್ನಿಯೊಡನೆ ರಾಯಚೂರಿಗೆ ಬಟ್ಟೆ ವ್ಯಾಪಾರಕ್ಕೆ ಬೆಳಿಗ್ಗೆ ಬಂದಿದ್ದರು. ವ್ಯಾಪಾರ ಮುಗಿಸಿಕೊಂಡು ವಾಪಸ್ ತಮ್ಮೂರಿಗೆ ತೆರಳುವಾಗ ಮಾರ್ಗಮಧ್ಯೆ ರಸ್ತೆ ಬದಿಯಲ್ಲಿರುವ ತಡೆಗೋಡೆ‌ಗೆ ಕಾರು ಡಿಕ್ಕಿ ಹೊಡೆದಿದೆ.

ಮಾನವಿ ಪೊಲೀಸರು ವೃದ್ಧನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಗಾಯಗೊಂಡ ಶಾಂತಮ್ಮ ಅವರನ್ನು ರಿಮ್ಸ್ ಆಸ್ಪತ್ರೆ ದಾಖಲಿಸಲಾಗಿದೆ. ಮಾನವಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.