ಹಳೇ ವೈಷಮ್ಯ : ವೃತ್ತಿ ಕಲಿಸಿದ ಗುರುವನ್ನೇ ಕೊಂದ ಶಿಷ್ಯ

author img

By

Published : Sep 4, 2021, 10:54 PM IST

murder-in-hatti-gold-mine-bus-stand

ಹಳೆ ವೈಷಮ್ಯ ಹಿನ್ನೆಲೆ ಮೆಕ್ಯಾನಿಕ್ ವೃತ್ತಿ ಕಲಿಸಿದ ಗುರುವನ್ನೇ ಶಿಷ್ಯನೊಬ್ಬ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಹೊಸ ಬಸ್​ ನಿಲ್ದಾಣದ ಬಳಿ ನಡೆದಿದೆ.

ಲಿಂಗಸುಗೂರು: ಹಟ್ಟಿ ಚಿನ್ನದ ಗಣಿ ಹೊಸ ಬಸ್ ನಿಲ್ದಾಣ ಬಳಿ ವೃತ್ತಿ ವೈಷಮ್ಯದಿಂದ ಶಿಷ್ಯ ಗುರುವನ್ನೆ ಬರ್ಬರವಾಗಿ ಕೊಲೆ ಮಾಡಿದ ಘಟನೆ ಜರುಗಿದೆ.

ಮುರ್ತುಜಾ ಅನ್ಸಾರಿ(35) ಮೃತ ವ್ಯಕ್ತಿ. ಶನಿವಾರ ಮಧ್ಯಾಹ್ನ ನಮಾಜ್ ಮಾಡಲು ತೆರಳುತ್ತಿದ್ದ ಮುರ್ತುಜಾ ಮೇಲೆ ಮೌಲಾಪಾಷಾ ಹಾಗೂ ಹಾಗೂ ಸ್ನೇಹಿತರು ದಾಳಿ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಮುರ್ತುಜಾ ಅನ್ಸಾರಿ ಗ್ಯಾರೇಜ್​​ನಲ್ಲಿಯೇ ಮೌಲಾಪಾಷಾ ಮೆಕ್ಯಾನಿಕ್ ಕಲಿಯುತ್ತಿದ್ದ. ಪ್ರತ್ಯೇಕ ಗ್ಯಾರೇಜ್ ಹಾಕುವ ಸಂಬಂಧದ ವೈಷಮ್ಯವೇ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಎಸ್.ಎಸ್ ಹುಲ್ಲೂರು, ಸಿಪಿಐ ಮಹಾಂತೇಶ ಸಜ್ಜನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.