ETV Bharat / state

ಮೈಸೂರು: ಎರಡು ದೇವಸ್ಥಾನಗಳ ಬೀಗ ಒಡೆದು ಕಳ್ಳತನ

author img

By

Published : Jan 6, 2021, 12:34 PM IST

ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದ ಗ್ರಾಮ ದೇವತೆ ಆದಿಶಕ್ತಿ ಮುತ್ತುತಾಳಮ್ಮ ಮತ್ತು ವೀರಭದ್ರೇಶ್ವರ ದೇವಾಲಯದ ಬೀಗ ಒಡೆದು ದೇವರ ಚಿನ್ನದ ಹಾಗೂ ಬೆಳ್ಳಿ ಆಭರಣಗಳನ್ನು ದೋಚಿರುವ ಪ್ರಕರಣ ನಡೆದಿದೆ.

theft in mysore's two temples
ದೇವಸ್ಥಾನಗಳಲ್ಲಿ ಕಳ್ಳತನ

ಮೈಸೂರು : ಎರಡು ದೇವಸ್ಥಾನಗಳ ಬೀಗ ಒಡೆದು ಕಳ್ಳತನ ಮಾಡಿರುವ ಘಟನೆ ಕೆಆರ್ ನಗರ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ದೇವಸ್ಥಾನಗಳಲ್ಲಿ ಕಳ್ಳತನ
ಜಿಲ್ಲೆಯ ಕೆಆರ್ ನಗರ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದ ಗ್ರಾಮ ದೇವತೆ ಆದಿಶಕ್ತಿ ಮುತ್ತುತಾಳಮ್ಮ ಮತ್ತು ವೀರಭದ್ರೇಶ್ವರ ದೇವಾಲಯದ ಬೀಗ ಒಡೆದು ಕಳ್ಳತನ ಮಾಡಲಾಗಿದೆ. ಆದಿಶಕ್ತಿ ಮುತ್ತು ತಾಳಮ್ಮ ದೇವಾಲಯದಲ್ಲಿ ದೇವರ ಚಿನ್ನದ ತಾಳಿ, ಬೆಳ್ಳಿಯ ಗುಂಡು , ಹುಂಡಿಯಲ್ಲಿನ ಹಣವನ್ನು ಕಳ್ಳತನ ಮಾಡಲಾಗಿದೆ. ವೀರಭದ್ರೇಶ್ವರ ದೇವಾಲಯದಲ್ಲಿ 1,500 ಗ್ರಾಂ ಬೆಳ್ಳಿ, ಬೆಳ್ಳಿಯ ವಿಗ್ರಹಗಳನ್ನು ಹಾಗೂ ಹುಂಡಿಯಲ್ಲಿ ಇದ್ದ ಹಣವನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ. ಘಟನಾ ಸ್ಥಳಕ್ಕೆ ಕೆಆರ್​ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಕಳೆದ 6 ತಿಂಗಳಿಂದ ಕೆಆರ್​​ ನಗರ ತಾಲೂಕಿನಲ್ಲಿ ದೇವಾಲಯಗಳ ಸರಣಿ ಕಳ್ಳತನ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ:ಗಂಗೂಲಿ ಡಿಸ್ಚಾರ್ಜ್ ಸಮಯ ಬದಲು: ಇನ್ನೊಂದು ದಿನ ಆಸ್ಪತ್ರೆಯಲ್ಲೇ ಉಳಿಯಲು ದಾದಾ ನಿರ್ಧಾರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.