ETV Bharat / state

ಮೈಸೂರು: ಗೃಹಿಣಿ ಜೊತೆಗೆ ಕೆರೆಗೆ ಹಾರಿದ್ದ ಯುವಕನ ಮೃತದೇಹ ಪತ್ತೆ

author img

By

Published : Sep 11, 2021, 4:08 PM IST

ಹುಣಸೂರು ತಾಲೂಕಿನ ಉದ್ದೂರು ಬಳಿಯ ಕೆರೆಗೆ ಹಾರಿ ಶೀಲಾ (37) ಕುಮಾರ್ (27) ಸೆ‌.9ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂದು ಕೆರೆಯಲ್ಲಿ ಯುವಕನ ಮೃತ ದೇಹ ಪತ್ತೆಯಾಗಿದೆ.

ಯುವಕನ ಮೃತದೇಹ ಪತ್ತೆ
ಯುವಕನ ಮೃತದೇಹ ಪತ್ತೆ

ಮೈಸೂರು: ಗೃಹಿಣಿಯೊಂದಿಗೆ ಕೆರೆಗೆ ಹಾರಿದ್ದ ಯುವಕನ ಮೃತದೇಹ ಇಂದು ಕೆರೆಯಲ್ಲಿ ಪತ್ತೆಯಾಗಿದೆ. ಹುಣಸೂರು ತಾಲೂಕಿನ ಉದ್ದೂರು ಬಳಿಯ ಕೆರೆಗೆ ಹಾರಿ ಶೀಲಾ (37) ಕುಮಾರ್ (27) ಸೆ‌.9 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂದು ಕೆರೆಯಲ್ಲಿ ಯುವಕನ ಮೃತ ದೇಹ ಪತ್ತೆಯಾಗಿದೆ.

ಕುಮಾರ್, ಶೀಲಾಳ ಪತಿಯ ಅಣ್ಣನ ಮಗ. ಕೆರೆಗೆ ಹಾರಿರುವುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕೆರೆ ದಡದಲ್ಲಿ ಕುಮಾರ್ ಹಾಗೂ ಶೀಲಾ ಮೊಬೈಲ್ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ‌ ಕೆರೆಗೆ ಹಾರಿರುವ ಶಂಕೆಯಿಂದ ಹುಡುಕಾಟ ನಡೆಸಲಾಗಿತ್ತು.

ಬಿಳಿಕೆರೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಕೆರೆಯಲ್ಲಿ ಎರಡು ದಿನದಿಂದ ಶೋಧ ಕಾರ್ಯ ನಡೆದಿತ್ತು. ಆದರೆ, ಮೃತದೇಹ ಪತ್ತೆಯಾಗಿರಲಿಲ್ಲ. ಇಂದು ಕುಮಾರ್ ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ : ಮೈಸೂರು: ಯುವಕನ ಜೊತೆ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ ಶಂಕೆ.. ಶವಕ್ಕಾಗಿ ಶೋಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.