ETV Bharat / state

ಕೊರೊನಾ ಸಂಕಷ್ಟ ಪರಿಹಾರ: ಸುತ್ತೂರು ಶ್ರೀಗಳಿಂದ ಇಷ್ಟಲಿಂಗ ಪೂಜೆ

author img

By

Published : Apr 13, 2020, 10:30 PM IST

ಕೊರೊನಾ ವೈರಸ್​ನಿಂದ ಪ್ರಪಂಚವೇ ತಲ್ಲಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಸುತ್ತೂರು ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಇಷ್ಟಲಿಂಗ ಪೂಜೆ ಮಾಡಿದರು. ಇಂದಿನ ಆತಂಕಕಾರಿ ಸಂಕಷ್ಟ ನಿವಾರಣೆಗೊಂಡು ಸಮಸ್ತ ಜನತೆಗೆ ಆರೋಗ್ಯ-ನೆಮ್ಮದಿ ಸಿಗಲೆಂದು ಪ್ರಾರ್ಥನೆ ಸಲ್ಲಿಸಿದರು.

Shri Shivaratri Desi Kendra Swamiji
ಕೊರೊನಾ ಸಂಕಷ್ಟ ಪರಿಹಾರಕ್ಕೆ ಸುತ್ತೂರು ಶ್ರೀಗಳಿಂದ ಇಷ್ಟಲಿಂಗ ಪೂಜೆ

ಮೈಸೂರು: ನಾಡಿಗೆ ಬಂದಿರುವ ಕೊರೊನಾ ಕಂಟಕ ನಿವಾರಣೆಯಾಗಲೆಂದು ಸುತ್ತೂರು ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದರು.

Shri Shivaratri Desi Kendra Swamiji
ಕೊರೊನಾ ಸಂಕಷ್ಟ ಪರಿಹಾರಕ್ಕೆ ಸುತ್ತೂರು ಶ್ರೀಗಳಿಂದ ಇಷ್ಟಲಿಂಗ ಪೂಜೆ
ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಬಸವ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಇಂದು ಸಂಜೆ 7 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಶಾಖಾ ಮಠದಲ್ಲಿ ಇಷ್ಟಲಿಂಗ ಪೂಜೆಯನ್ನು ಸುತ್ತೂರು ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ನೆರವೇರಿಸಲಾಯಿತು.

ಕೊರೊನಾ ವೈರಸ್​ನಿಂದ ಪ್ರಪಂಚವೇ ತಲ್ಲಣಗೊಂಡಿದ್ದು, ಈ ಸಂಕಷ್ಟ ನಿವಾರಣೆಯಾಗಲೆಂದು ಪೀಠಾಧಿಪತಿ ಲಿಂಗ ಪೂಜೆ ನೆರವೇರಿಸಿ, ಸಂಕಷ್ಟದಿಂದ ಮುಕ್ತಿ ಹೊಂದಿ ಜನತೆಗೆ ಆರೋಗ್ಯ, ನೆಮ್ಮದಿ ದೊರೆಯಲೆಂದು ಪ್ರಾರ್ಥಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.