ETV Bharat / state

ಬಿಎಸ್​ವೈ ಏನು ಹೇಳುತ್ತಾರೋ ಅದನ್ನವರು 75% ಮಾಡುತ್ತಾರೆ: ಶಾಸಕ ಎನ್.ಮಹೇಶ್

author img

By

Published : Feb 7, 2020, 6:12 PM IST

ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಎನ್​ ಮಹೇಶ್​, ಯಡಿಯೂರಪ್ಪನವರು ಏನು ಹೇಳುತ್ತಾರೋ ಅದನ್ನು 75% ಮಾಡುತ್ತಾರೆ. ಯಡಿಯೂರಪ್ಪನವರು ನನಗೆ ಏನು ಆಶ್ವಾಸನೆ ಕೊಟ್ಟಿಲ್ಲ, ನಾನು ಈಗ ಸ್ವತಂತ್ರನಾಗಿದ್ದೇನೆ. ನಿಮಗೆ ಸಂಕಷ್ಟ ಬಂದಾಗ ನಾನು ನಿಮ್ಮ ಜೊತೆಯಲ್ಲಿ ಇರುತ್ತೇನೆ, ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಹಾಯ ನೀಡಬೇಕೆಂದು ಕೇಳಿಕೊಂಡಿದ್ದೇನೆ ಅಷ್ಟೇ ಎಂದಿದ್ದಾರೆ.

ಶಾಸಕ ಎನ್.ಮಹೇಶ್, N Mahesh, MLA of Kallagela
ಶಾಸಕ ಎನ್.ಮಹೇಶ್

ಮೈಸೂರು: ನಾನು ಈಗ ಸ್ವತಂತ್ರನಾಗಿದ್ದೇನೆ. ನಿಮಗೆ ಸಂಕಷ್ಟ ಬಂದಾಗ ನಾನು ನಿಮ್ಮ ಜೊತೆಯಲ್ಲಿ ಇರುತ್ತೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಹಾಯ ನೀಡಿ ಎಂದು ಬಿಎಸ್​ವೈ ಬಳಿ ಕೇಳಿಕೊಂಡಿರುವುದಾಗಿ ಬಿಎಸ್​ಪಿ ಪಕ್ಷದ ಉಚ್ಚಾಟಿತ ಶಾಸಕ ಎನ್.ಮಹೇಶ್ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಎನ್​ ಮಹೇಶ್​, ಯಡಿಯೂರಪ್ಪನವರು ಏನು ಹೇಳುತ್ತಾರೋ ಅದನ್ನು 75% ಮಾಡುತ್ತಾರೆ. ಯಡಿಯೂರಪ್ಪನವರು ನನಗೆ ಏನು ಆಶ್ವಾಸನೆ ಕೊಟ್ಟಿಲ್ಲ, ನಾನು ಈಗ ಸ್ವತಂತ್ರನಾಗಿದ್ದೇನೆ. ನಿಮಗೆ ಸಂಕಷ್ಟ ಬಂದಾಗ ನಾನು ನಿಮ್ಮ ಜೊತೆಯಲ್ಲಿ ಇರುತ್ತೇನೆ, ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಹಾಯ ನೀಡಬೇಕೆಂದು ಕೇಳಿಕೊಂಡಿದ್ದೇನೆ ಅಷ್ಟೇ ಎಂದರು.

ಶಾಸಕ ಎನ್.ಮಹೇಶ್

ನಾನು ಸ್ವತಂತ್ರನಾಗಿದ್ದೇನೆ ನಾನೀಗ ಬಿಎಸ್​ಪಿಯಲ್ಲಿ ಇಲ್ಲ. ನನ್ನ ಕ್ಷೇತ್ರದ ಜನರು ನಿರೀಕ್ಷೆ ಮಾಡುವುದು ಅಭಿವೃದ್ಧಿಯನ್ನು, ಅದನ್ನು ಮಾಡುತ್ತೇನೆ. ಮುಂದಿನ ರಾಜಕೀಯ ನಿರ್ಧಾರಕ್ಕೆ ಇನ್ನೂ 3 ವರ್ಷ ಇದೆ. ಆಮೇಲೆ ನೋಡೋಣ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.