ETV Bharat / state

ಕಾವಾಡಿ- ಮಾವುತರ ಸಮಸ್ಯೆ ಬಗೆಹರಿದಿದೆ: ಸಚಿವ ಉಮೇಶ್ ಕತ್ತಿ

author img

By

Published : Aug 7, 2022, 5:32 PM IST

ಮೈಸೂರು ದಸರಾ ಹಿನ್ನೆಲೆ ಗಜಪಯಣಕ್ಕೆ ಇಂದು ಚಾಲನೆ ಸಿಕ್ಕಿದೆ. ಈ ವೇಳೆ ಮಾತನಾಡಿದ ಸಚಿವ ಉಮೇಶ್​ ಕತ್ತಿ, ಮಾವುತ ಹಾಗೂ ಕಾವಾಡಿಗರ ಸಮಸ್ಯೆ ಬಗೆಹರಿದಿದೆ ಎಂದರು.

Minister Umesh Katthi speak in Mysore
ಮೈಸೂರು ದಸರಾ ಹಿನ್ನೆಲೆ ಗಜಪಯಣಕ್ಕೆ ಇಂದು ಚಾಲನೆ

ಮೈಸೂರು: ಮಾವುತ-ಕಾವಾಡಿಗರ ಸಮಸ್ಯೆ ಬಗೆ ಹರಿದಿದೆ. ಒಳ್ಳೆಯ ರೀತಿ ದಸರಾ ಆರಂಭವಾಗಲಿ ಎಂದು ಗಜ ಪಡೆಗೆ ಪೂಜೆ ಸಲ್ಲಿಸಲಾಗಿದೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಗಜ ಪಯಣಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

ಇಂದು ವೀರನ ಹೊಸಹಳ್ಳಿಯ ಬಳಿ ಗಜ ಪಯಣಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಸಚಿವರು ಉಮೇಶ್ ಕತ್ತಿ, 30 ವರ್ಷಗಳಿಂದ ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂಬ ಆಸೆಯಿತ್ತು. ಅದರಂತೆ ಇಂದು ಈ ಬಾರಿ ದಸರಾ ಗಜಪಡೆಗೆ ಪೂಜೆ ಸಲ್ಲಿಸಿ, ಚಾಲನೆ ನೀಡಲಾಗಿದೆ. ಮಾವುತ ಹಾಗೂ ಕಾವಾಡಿಗರ ಸಮಸ್ಯೆ ಬಗೆಹರಿದಿದೆ ಎಂದರು.

ಮೈಸೂರು ದಸರಾ ಹಿನ್ನೆಲೆ ಗಜಪಯಣಕ್ಕೆ ಇಂದು ಚಾಲನೆ

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಈ ಬಾರಿ ಅದ್ಧೂರಿ ದಸರಾ ಹಿನ್ನೆಲೆ ಗಜ ಪಯಣಕ್ಕೆ ಎಲ್ಲರ ನೇತೃತ್ವದಲ್ಲಿ ಚಾಲನೆ ನೀಡಲಾಗಿದೆ. ಆನೆಗಳಿಗೆ ಪೂಜೆ ಮಾಡುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು ಎಂದು ತಿಳಿಸಿದರು.

ಇದನ್ನೂ ಓದಿ: ಮೈಸೂರು ದಸರಾ: ಗಜ ಪಯಣಕ್ಕೆ ಸಂಭ್ರಮದ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.