ETV Bharat / state

ವಿಷ್ಣು ತಂಗುತ್ತಿದ್ದ ಹೋಟೆಲ್​​​​ ರೂಂನಲ್ಲಿ ಭಾವುಕರಾದ ಭಾರತಿ ವಿಷ್ಣುವರ್ಧನ್​​​

author img

By

Published : Dec 30, 2019, 8:32 PM IST

10 ವರ್ಷಗಳ ಹಿಂದೆ ಮೈಸೂರು ಖಾಸಗಿ ಹೋಟೆಲ್​​ನಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಕೊನೆಯುಸಿರೆಳೆದ ರೂಂಗೆ ಬಂದು‌ ವಿಷ್ಣು ಅವರನ್ನು ನೆನೆದು ಭಾರತಿ ವಿಷ್ಣುವರ್ಧನ್ ಬೆಡ್​​​ನ ಹತ್ತಿರ ಕಣ್ಣೀರು ಹಾಕಿದ್ದಾರೆ.

bharti-vishnuvardhan-wept-in-mysore
ಭಾರತಿ ವಿಷ್ಣುವರ್ಧನ್ ಕಣ್ಣೀರಿಟ್ಟಿದ್ದೇಕೆ.?

ಮೈಸೂರು: 10 ವರ್ಷಗಳ ಹಿಂದೆ ಮೈಸೂರು ಖಾಸಗಿ ಹೋಟೆಲ್​​ನಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಕೊನೆಯುಸಿರೆಳೆದ ರೂಂಗೆ ಬಂದು‌ ವಿಷ್ಣು ಅವರನ್ನು ನೆನೆದು ಭಾರತಿ ವಿಷ್ಣುವರ್ಧನ್ ಬೆಡ್​​​ನ ಹತ್ತಿರ ಕಣ್ಣೀರು ಹಾಕಿದ್ದಾರೆ.

ಭಾರತಿ ವಿಷ್ಣುವರ್ಧನ್ ಕಣ್ಣೀರು

ನಗರದ ಕಿಂಗ್ಸ್ ಕೋರ್ಟ್ ಹೋಟೆಲ್​​ನಲ್ಲಿ 2009ರಲ್ಲಿ ನಿಧನರಾದ ವಿಷ್ಣುವರ್ಧನ್ ಅವರು ತಂಗಿದ್ದ ರೂಂ ನಂಬರ್ 334 ಹಾಗೂ 335ಕ್ಕೆ ಭಾರತಿ ವಿಷ್ಣುವರ್ಧನ್ ಬಂದಿದ್ದರು. ವಿಷ್ಣು ಸ್ಮರಣೆಯ ಪೂಜಾ ಕಾರ್ಯಕ್ರಮಕ್ಕೆ ಉದ್ಬೂರ್​​​ನಲ್ಲಿರುವ ಸ್ಥಳಕ್ಕೆ ಹೋಗುವ ಮುನ್ನ ಈ ರೂಂಗೆ ಬಂದು ವಿಷ್ಣುವರ್ಧನ್ ಕೊನೆಯುಸಿರೆಳೆದ ಬೆಡ್ ಬಳಿ ಕುಳಿತು ಕಣ್ಣೀರಿಟ್ಟಿದ್ದಾರೆ.

ಮೈಸೂರಿಗೆ ಬಂದಾಗಲೆಲ್ಲಾ ಸಾಹಸ ಸಿಂಹ ವಿಷ್ಣುವರ್ಧನ್ ಇದೇ ಹೋಟೆಲ್​​ನ ಇದೇ ರೂಂಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಇಂದು ವಿಷ್ಣುವರ್ಧನ್ ಅವರ 10ನೇ ವರ್ಷದ ಪುಣ್ಯ ಸ್ಮರಣೆಯ ದಿನವಾದ್ದರಿಂದ ಸ್ಮಾರಕ ನಿರ್ಮಾಣವಾಗುವ ಸ್ಥಳದಲ್ಲಿ ವಿಷ್ಣು ಕುಟುಂಬದವರು ಪೂಜೆ ಸಲ್ಲಿಸಿದರು.

Intro:ಮೈಸೂರು: ಕಳೆದ ೧೦ ವರ್ಷಗಳ ಹಿಂದೆ ಮೈಸೂರು ಖಾಸಗಿ ಹೋಟೆಲ್ ನಲ್ಲಿ ನಿಧನರಾದ ಸಾಹಸ ಸಿಂಹ ವಿಷ್ಣುವರ್ಧನ್ ಸಾವನಪ್ಪಿದ ಹೋಟೆಲ್ ಗೆ ರೂಂ ಗೆ ಬಂದು‌ ವಿಷ್ಣು ನೆನೆದು ಭಾರತಿ ವಿಷ್ಣುವರ್ಧನ್ ಬೆಡ್ ನ ಹತ್ತಿರ ಕಣ್ಣೀರು ಹಾಕಿದರು.
Body:


ನಗರದ ಕಿಂಗ್ಸ್ ಕೋರ್ಟ್ ಹೋಟೆಲ್ ನಲ್ಲಿ ೨೦೦೯ ರಲ್ಲಿ ನಿಧನರಾದ ವಿಷ್ಣುವರ್ಧನ್ ಅವರು ತಂಗಿದ್ದ ರೂಂ ನಂಬರ್ ೩೩೪ ಹಾಗೂ ೩೩೫ ರೂಂಗೆ ಬಂದ ಭಾರತಿ ವಿಷ್ಣುವರ್ಧನ್ ವಿಷ್ಣು ಸ್ಮರಣೆಯ ಪೂಜಾ ಕಾರ್ಯಕ್ರಮಕ್ಕೆ ಉದ್ಬೂರ್ ನಲ್ಲಿರುವ ಸ್ಥಳಕ್ಕೆ ಹೋಗುವ ಮುನ್ನಾ ಈ ರೂಂ ಗೆ ಬಂದ ಭಾರತಿ ವಿಷ್ಣುವರ್ಧನ್ ಬೆಡ್ ಬಳಿ ಕುಳಿತು ಕಣ್ಣೀರಿಟ್ಟಿದ್ದಾರೆ.
ಮೈಸೂರಿಗೆ ಬಂದಾಗಲೆಲ್ಲಾ ಸಾಹಸ ಸಿಂಹ ವಿಷ್ಣುವರ್ಧನ್ ಇದೆ ಹೋಟೆಲ್ ನ ಇದೇ ರೂಂ ಗಳಲ್ಲಿ ಉಳಿದುಕೊಳ್ಳುತ್ತಿದ್ದರು.
ಇಂದು ವಿಷ್ಣುವರ್ಧನ್ ಅವರ ೧೦ನೇ ವರ್ಷದ ಪುಣ್ಯಸ್ಮರಣೆಯ ದಿನವಾದ್ದರಿಂದ ಸ್ಮಾರಕ ನಿರ್ಮಾಣವಾಗುವ ಸ್ಥಳದಲ್ಲಿ ವಿಷ್ಣು ಕುಟುಂಬದವರು ಪೂಜೆ ಸಲ್ಲಿಸಿದರು. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.