ETV Bharat / state

ವಾಯುಪಡೆಗೆ ವಿಮಾನ ನಿಲ್ದಾಣ ಹಸ್ತಾಂತರ ಮಾಡಲ್ಲ: ಸಚಿವರ ಭರವಸೆ

author img

By

Published : Feb 11, 2020, 3:00 PM IST

ಮೈಸೂರು ವಿಮಾನ ನಿಲ್ದಾಣವನ್ನು ವಾಯುಪಡೆಗೆ ಹಸ್ತಾಂತರ ಮಾಡದೇ ನಾಗರಿಕರ ಪ್ರಯಾಣದ ಉದ್ದೇಶಕ್ಕೆ ಮೀಸಲಿಡಬೇಕೆಂದು ಪ್ರತಾಪ್​ ಸಿಂಹ ಮನವಿ ಸಲ್ಲಿಸಿದ್ದು, ಹರ್ದೀಪ್ ಸಿಂಗ್ ಪುರಿ ಈ ಮನವಿಗೆ ಸ್ಪಂದನೆ ನೀಡಿದ್ದಾರೆ.

Plea
ಮನವಿ ಸಲ್ಲಿಸಿದ್ದು

ಮೈಸೂರು: ಇಲ್ಲಿನ ವಿಮಾನ ನಿಲ್ದಾಣವನ್ನು ವಾಯುಪಡೆಗೆ ನೀಡಬಾರದು ಎಂಬ ಸಂಸದ ಪ್ರತಾಪ್ ಸಿಂಹ ಅವರು ಸಲ್ಲಿಸಿದ ಮನವಿಗೆ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಂದಿಸಿದ್ದಾರೆ.

ಮೈಸೂರು ವಿಮಾನ ನಿಲ್ದಾಣ ಸಂಪೂರ್ಣವಾಗಿ ನಾಗರಿಕರ ಪ್ರಯಾಣದ ಉದ್ದೇಶಕ್ಕೆ ಸೀಮಿತವಾಗಿರಬೇಕು ಹಾಗೂ ಹೆಲಿಕಾಪ್ಟರ್ ನೆಲೆಯಾಗಿಸಲು ಅವಕಾಶ ನೀಡಿದ್ದ ಹಿಂದಿನ ಸರ್ಕಾರದ ತೀರ್ಮಾನವನ್ನು ತಿರಸ್ಕರಿಸಬೇಕೆಂದು ಮನವಿ ಮಾಡಿಕೊಂಡಿದ್ದ ಪ್ರತಾಪ್ ಸಿಂಹ ಅವರ ಬೇಡಿಕೆಗಳಿಗೆ ಸಚಿವರು ಸ್ಪಂದಿಸಿದ್ದಾರೆ.

Letter
ಮನವಿ ಪತ್ರ

ವಾಯುಪಡೆಗೆ ಈ ವಿಮಾನ ನಿಲ್ದಾಣವನ್ನು ನೀಡಿದರೆ ಭದ್ರತೆ ದೃಷ್ಟಿಯಿಂದ ಕೆಲವು ನಿರ್ಬಂಧ ವಿಧಿಸಭೇಕಾಗುತ್ತದೆ ಹಾಗೂ ಇದರಿಂದ ವಿಮಾನ ನಿಲ್ದಾಣದ ಬೆಳವಣಿಗೆಗೆ ಅಡ್ಡಿಯಾಗುವುದು ಎಂದು ಪ್ರತಾಪ್​ ಸಿಂಹ ಮನವಿಯಲ್ಲಿ ಉಲ್ಲೇಖಿಸಿದ್ದರು. ಅದಲ್ಲದೇ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಯೋಜನೆ ಕೈಗೆತ್ತಿಕೊಳ್ಳಲು ಶೀಘ್ರವೇ ಆಸ್ಪದ ಕಲ್ಪಿಸುವಂತೆ ಕೇಳಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.