ಮಂಡ್ಯದಲ್ಲಿ ಹರಿದ ನೆತ್ತರು.. ತಡರಾತ್ರಿ ಯುವಕನ ಕರೆಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

author img

By

Published : Dec 19, 2021, 11:53 AM IST

murder in mandya

ಮಂಡ್ಯದ ಕಲ್ಲಹಳ್ಳಿ ಬಡಾವಣೆಯ ರೈಲ್ವೆ ಹಳಿ ಸಮೀಪ ತಡರಾತ್ರಿ ಯುವಕನನ್ನು ಕೊಚ್ಚಿ ಕೊಲೆ ಮಾಡಲಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.

ಮಂಡ್ಯ: ನಗರದ ಕಲ್ಲಹಳ್ಳಿ ಬಡಾವಣೆಯ ರೈಲ್ವೆ ಹಳಿ ಸಮೀಪ ತಡರಾತ್ರಿ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ. ರಕ್ಷಿತ್ ಅಲಿಯಾಸ್​ ರಕ್ಷಿ (21) ಎಂಬಾತ ಕೊಲೆಯಾಗಿರುವ ಯುವಕ.

murder in mandya
ಕೊಲೆಗೀಡಾದ ರಕ್ಷಿತ್

ಈತ ಮಂಡ್ಯ ತಾಲೂಕಿನ ಯಲಿಯೂರು ಗ್ರಾಮದ ನಿವಾಸಿಯಾಗಿದ್ದು, ನಿನ್ನೆ ತಡರಾತ್ರಿ ಕೊಲೆಯಾಗಿದ್ದಾನೆ. ಯುವಕನಿಗೆ ಫೋನ್ ಕರೆ ಮಾಡಿ ಕರೆಯಿಸಿಕೊಂಡ ದುಷ್ಕರ್ಮಿಗಳು ರಸ್ತೆಯಲ್ಲಿ ಅಟ್ಟಾಡಿಸಿ ಬರ್ಬರ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

murder in mandya
ರಕ್ಷಿತ್

ಘಟನಾ ಸ್ಥಳಕ್ಕೆ ಮಂಡ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮಂಡ್ಯದ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಂಗಳೂರು: ಸೈನಿಕನ ಸೋಗಿನಲ್ಲಿ ಮೈದಾ ಹಿಟ್ಟು ಖರೀದಿಸುವುದಾಗಿ ನಂಬಿಸಿ 2.94 ಲಕ್ಷ ರೂ. ವಂಚನೆ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.