ETV Bharat / state

ಮೇಲುಕೋಟೆ ವೈರಮುಡಿ ಉತ್ಸವ ಬಿಗಿಭದ್ರತೆಯಲ್ಲಿ ಜಿಲ್ಲಾ ಖಜಾನೆಯಿಂದ ವಜ್ರಖಚಿತ ಕಿರೀಟ ರವಾನೆ

author img

By

Published : Apr 1, 2023, 10:04 AM IST

Updated : Apr 1, 2023, 11:23 AM IST

ಮೇಲುಕೊಟೆ ಚುಲುವನಾರಾಯಣ ಸ್ವಾಮಿಯ ವೈರಮುಡಿ ಉತ್ಸವ ಇಂದು ನಡೆಯಲಿದ್ದು ದೇವಸ್ಥಾನಕ್ಕೆ ವಜ್ರಖಚಿತ ಕಿರೀಟ ಪೊಲೀಸ್​ ಭದ್ರತೆಯೊಂದಿಗೆ ಸಾಗಿಸಲಾಗಿದೆ.

ವೈರಮುಡಿ ಉತ್ಸವದ ಆಭರಣ
ವೈರಮುಡಿ ಉತ್ಸವದ ಆಭರಣ

ವೈರಮುಡಿ ಕಿರೀಟ ಆಗಮನ

ಮಂಡ್ಯ: ಇಂದು ವಿಶ್ವ ವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವ ಹಿನ್ನೆಲೆಯಲ್ಲಿ ಬಿಗಿಭದ್ರತೆಯಲ್ಲಿ ಜಿಲ್ಲಾ ಖಜಾನೆಯಿಂದ ದೇವಸ್ಥಾನಕ್ಕೆ ವಜ್ರಖಚಿತ ಕಿರೀಟ ರವಾನೆಯಾಯಿತು. ಇಂದು ಬೆಳಗ್ಗೆ ನಗರದ ಜಿಲ್ಲಾ ಖಜಾನೆಯಲ್ಲಿದ್ದ ಚೆಲುವನಾರಾಯಣಸ್ವಾಮಿಯ ಆಭರಣಗಳನ್ನು ಡಿಸಿ ಹೆಚ್.ಎನ್. ಗೋಪಾಲಕೃಷ್ಣ ನೇತೃತ್ವದಲ್ಲಿ ತೆಗೆದು ವಿಶೇಷ ಪೂಜೆ ಸಲ್ಲಿಸಿ ನಂತರ ನಗರದ ಲಕ್ಷ್ಮೀಜನಾರ್ಧನಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಮೇಲುಕೋಟೆಗೆ ಕೊಂಡೊಯ್ಯಲಾಯಿತು.

ರಸ್ತೆಯುದ್ದಕ್ಕೂ ಭಕ್ತರು ಹಾಗೂ ಸಾರ್ವಜನಿಕರು ಆಭರಣಕ್ಕೆ ನಮಿಸಲು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೀಕ್ಷಿಸುತ್ತಿದ್ದ ದೃಶ್ಯ ಕಂಡುಬಂತು. ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ ಮೂಲಕ ಸಂಜೆ 6 ಗಂಟೆಗೆ ಉತ್ಸವ ದೇವಸ್ಥಾನಕ್ಕೆ ತಲುಪಲಿದೆ. ಬಳಿಕ ರಾತ್ರಿ ಅಧಿಕಾರಿಗಳ ಸಮ್ಮುಖದಲ್ಲಿ ಆಭರಣಗಳ ವರ್ಗಾವಣೆ ನಡೆಸಿ ಚೆಲುವನಾರಾಯಣ ಸ್ವಾಮಿಗೆ ತೊಡಿಸಿ ವೈರಮುಡಿ ಉತ್ಸವ ನಡೆಯಲಿದೆ. ಈಗಾಗಲೇ ಪೊಲೀಸ್ ಇಲಾಖೆ ಮೇಲುಕೋಟೆಯಲ್ಲಿ ಬಾರಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. 600ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಬಂದಂತಹ ಭಕ್ತರು ಸಹಕರಿಸಿ ಉತ್ಸವ ಕಣ್ತುಂಬಿಕೊಳ್ಳಲು ದೇವಸ್ಥಾನ ಮನವಿ ಮಾಡಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಹೆಚ್.ಎನ್. ಗೋಪಾಲಕೃಷ್ಣ ಮಾತನಾಡಿ, ಮಂಡ್ಯ ಜಿಲ್ಲಾ ಖಜಾನೆಯಿಂದ ಶ್ರೀ ವೈರಮುಡಿ ಮತ್ತು ರಾಜಮುಡಿಯ ಕಿರೀಟವನ್ನು ಅರ್ಚಕರು ಮತ್ತು ಪಾಲಿಕರ ಸುಪರ್ದಿಗೆ ವಹಿಸಲಾಗಿದೆ. ಉ್ತಸವಕ್ಕೆ ಬರುವಂತಹ ಭಕ್ತರಿಗೆ ದರ್ಶನದ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೇ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 8.30ರ ಸುಮಾರಿಗೆ ಉತ್ಸವ ಆರಂಭವಾಗಿ ಬೆಳಗಿನ ಜಾಚ 4 ಗಂಟೆ ವರೆಗೆ ನಡೆಯಲಿದೆ. ದೇವಸ್ಥಾನದ ಹೊರಗಡೆ ಭಕ್ತರಿಗೆ ಅನುಕೂಲವಾಗಲೆಂದು 8 ಎಲ್​ಇಡಿ ಸ್ಕ್ರೀನ್​ಗಳನ್ನು ಅಳವಡಿಸಲಾಗಿದೆ ಎಂದರು.

ಬಳಿಕ ಜಿಲ್ಲಾ ಎಸ್ಪಿ ಎನ್​. ಯತೀಶ್​ ಮಾತನಾಡಿ, ವೈರುಮುಡಿ ಉತ್ಸವದ ಹಿನ್ನೆಲೆ ಭದ್ರತಾ ದೃಷ್ಟಿಯಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗೆ ಸುಮಾರು 600 ಪೊಲೀಸ್​ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಉತ್ಸವಕ್ಕೆ ಆಗಮಿಸುವ ವಾಹನಗಳ ಪಾರ್ಕಿಂಗ್​ ವ್ಯವಸ್ಥೆ ಮಾಡಲಾಗಿದ್ದು, ಉತ್ಸವಕ್ಕೆ ಬರುವಂತಹ ಭಕ್ತರಿಗೆ ಯಾವುದೇ ಸಮಸ್ಯೆಗಳು ಆಗದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಇದನ್ನೂನ ಓದಿ: ಆಮೆ ಸಂರಕ್ಷಣೆಗೆ ಸಂಕಲ್ಪ..ಕಾರವಾರದಲ್ಲಿ ಗಮನ ಸೆಳೆದ 'ಕಡಲಾಮೆ' ಉತ್ಸವ

Last Updated : Apr 1, 2023, 11:23 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.