ETV Bharat / state

'ಕೊರೊನಾ ಗೆಲ್ಲೋಣ' ಎಂಬ ಜಾಗೃತಿ ಗೀತೆ ರಚಿಸಿದ ಸೋಮಶೇಖರ್ ಜಿಗಣಿ

author img

By

Published : Jun 1, 2021, 11:09 AM IST

ಎಲ್ಲರೂ ಮನೆಯಲ್ಲೇ ಇರಿ, ಆರೋಗ್ಯವಾಗಿರಿ ಎಂಬ ಆಶಯದೊಂದಿಗೆ ರಚಿಸಿರುವ ಗೀತೆ ಇದಾಗಿದೆ. ಈ ಹಾಡಿಗೆ ಕನ್ನಡದ ಪ್ರಖ್ಯಾತ ಹಿನ್ನೆಲೆ ಗಾಯಕರಾದ ರಾಜೇಶ್ ಕೃಷ್ಣನ್, ರಘು ದೀಕ್ಷಿತ್, ನವೀನ್ ಸಜ್ಜು, ಆಲ್‌ಒಕೆ, ಎಂ.ಡಿ ಪಲ್ಲವಿ, ಅನನ್ಯ ಭಟ್, ಜೋಗಿ ಸುನೀತಾ ಧ್ವನಿ ನೀಡಿದ್ದಾರೆ..

Mandya
'ಕೊರೊನಾ ಗೆಲ್ಲೋಣ' ಎಂಬ ಜಾಗೃತಿ ಗೀತೆ ರಚಿಸಿದ ಸೋಮಶೇಖರ್ ಜಿಗಣಿ

ಮಂಡ್ಯ : ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸೋಮಶೇಖರ್ ಎಸ್.ಜಿಗಣಿ 'ಕೊರೊನಾ ಗೆಲ್ಲೋಣ' ಎಂಬ ಜಾಗೃತಿ ಗೀತೆ ರಚಿಸಿ, ರಾಗ ಸಂಯೋಜಿಸಿ ನಿರ್ದೇಶಿಸಿದ್ದಾರೆ.

ಈ ಹಿಂದೆ ಎಸ್.ಜಿಗಣಿ ಅವರು ರಚಿಸಿದ್ದ 'ಇವರೇ ಮಹಾನಾಯಕ' ಗೀತೆ ಬಿಡುಗಡೆಗೊಂಡು ಭಾರೀ ಸದ್ದು ಮಾಡಿತ್ತು. ಇದೀಗ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಕ್ಕಾಗಿ 'ಕೊರೊನಾ ಗೆಲ್ಲೋಣ' ಎಂಬ ಜಾಗೃತಿ ಗೀತೆ ರಚಿಸಿದ್ದಾರೆ. ಈ ಹಾಡಿಗೆ ಕೆಜಿಎಫ್​ನ ಪ್ರಖ್ಯಾತ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ಚೆಲುವೆಗೌಡ ಸಾಥ್ ನೀಡಿದ್ದಾರೆ.

ಈಗಾಗಲೇ ಯೂಟ್ಯೂಬ್​ನಲ್ಲಿ ಹಾಡಿನ ಟೀಸರ್ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಪೂರ್ಣ ಹಾಡು ಬಿಡುಗಡೆಯಾಗಲಿದೆ. ಈ ಗೀತೆ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ತೆಗೆದುಕೊಂಡ ಕ್ರಮ, ಸಿದ್ಧತೆಗಳು, ಜನಪ್ರತಿನಿಧಿಗಳು, ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತರು, ಪೊಲೀಸರು, ವೈದ್ಯರ ಹೋರಾಟವನ್ನು ಒಳಗೊಂಡಿದೆ.

ಎಲ್ಲರೂ ಮನೆಯಲ್ಲೇ ಇರಿ, ಆರೋಗ್ಯವಾಗಿರಿ ಎಂಬ ಆಶಯದೊಂದಿಗೆ ರಚಿಸಿರುವ ಗೀತೆ ಇದಾಗಿದೆ. ಈ ಹಾಡಿಗೆ ಕನ್ನಡದ ಪ್ರಖ್ಯಾತ ಹಿನ್ನೆಲೆ ಗಾಯಕರಾದ ರಾಜೇಶ್ ಕೃಷ್ಣನ್, ರಘು ದೀಕ್ಷಿತ್, ನವೀನ್ ಸಜ್ಜು, ಆಲ್‌ಒಕೆ, ಎಂ.ಡಿ ಪಲ್ಲವಿ, ಅನನ್ಯ ಭಟ್, ಜೋಗಿ ಸುನೀತಾ ಧ್ವನಿ ನೀಡಿದ್ದಾರೆ.

ಈ ಹಾಡಿನ ಮೇಕಿಂಗ್ ಮತ್ತು ನಿರ್ಮಾಣಕ್ಕೆ ಮೈಸೂರಿನ ಹೆಸರಾಂತ ವಿದ್ವತ್ ಸಂಸ್ಥೆಯ ಸುರೇಶ್ ಸಿದ್ದಲಿಂಗಯ್ಯ ಹಾಗೂ ಪಿಆರ್​ಒ ಶ್ರೇಯಾ ಬಾಬು ಕೈಜೋಡಿಸಿದ್ದಾರೆ. ಎಲ್ಲರೂ ಮನೆಯಲ್ಲೇ ಇರಿ ಎಂದು ಅರಿವು ಮೂಡಿಸುವ ಹಾಡಿಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಓದಿ: ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ವಾರ್ಡ್‌ ಬಾಯ್ ಬಂಧನ


ETV Bharat Logo

Copyright © 2024 Ushodaya Enterprises Pvt. Ltd., All Rights Reserved.