ಸರ್ಕಾರಿ ಜಾಗ ಮರು ವಶಕ್ಕೆ ಪಡೆದ ಅಧಿಕಾರಿಗಳು: ಈಟಿವಿ ಭಾರತ ವರದಿ ಫಲಶೃತಿ

author img

By

Published : Sep 26, 2021, 2:43 PM IST

mandya

ಸರ್ಕಾರಿ ಜಾಗವನ್ನು ಅಕ್ರಮವಾಗಿ ಧಾರ್ಮಿಕ ಸ್ಥಳವನ್ನಾಗಿ ಪರಿವರ್ತಿಸಿಕೊಂಡಿದ್ದ ಧರ್ಮಗುರುವೊಬ್ಬರು ವಾಸ್ತವ್ಯ ಹೂಡಿದ್ದ ಪ್ರದೇಶಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಆಗಮಿಸಿದ ತಹಶೀಲ್ದಾರ್​ ದಾಖಲೆಗಳನ್ನು ಪರಿಶೀಲಿಸಿ, ತೆರವುಗೊಳಿಸಿದರು.

ಮಂಡ್ಯ: ಸರ್ಕಾರಿ ಉರ್ದು ಶಾಲೆಯ ಜಾಗವನ್ನು ಅಕ್ರಮವಾಗಿ ಧಾರ್ಮಿಕ ಸ್ಥಳವನ್ನಾಗಿ ಪರಿವರ್ತಿಸಿಕೊಂಡು ಧರ್ಮಗುರುವೊಬ್ಬರು ವಾಸ್ತವ್ಯ ಹೂಡಿದ್ದ ಸ್ಥಳಕ್ಕೆ ತಹಶೀಲ್ದಾರ್‌ ಎಂ.ಶಿವಮೂರ್ತಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ನಿನ್ನೆ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಅಕ್ರಮ ವಾಸ್ತವ್ಯ ಹೂಡಿದ್ದ ಮುಸ್ಲಿಂ ಮೌಲ್ವಿಯನ್ನು ತೆರವುಗೊಳಿಸಿದರು.

ಈ ಕುರಿತು ಈಟಿವಿ ಭಾರತ 'ಮಂಡ್ಯ: ಧಾರ್ಮಿಕ ಚಟುವಟಿಕೆಗೆ ಸರ್ಕಾರಿ ಶಾಲೆ ಆಕ್ರಮಿಸಿಕೊಂಡ ಧಾರ್ಮಿಕ ಗುರು?' ಎಂಬ ವರದಿ ಪ್ರಕಟಿಸಿತ್ತು. ಈ ವರದಿಯಿಂದ ಎಚ್ಚೆತ್ತು ಕೂಡಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್​ ದಾಖಲೆಗಳನ್ನು ಪರಿಶೀಲನೆ ಮಾಡಿದರು.

ಸರ್ಕಾರಿ ಶಾಲಾ ಜಾಗ ಮರು ವಶಕ್ಕೆ ಪಡೆದ ಅಧಿಕಾರಿಗಳು

ನಂತರ ಜಾಗವನ್ನು ಆಕ್ರಮ ಮಾಡಿಕೊಂಡಿರುವುದು ಕಂಡು ಬಂದಿದ್ದು ಧರ್ಮಗುರುಗೆ ಬುದ್ದಿ ಹೇಳಿ, ಸರ್ಕಾರಿ ಅಧೀನದಲ್ಲಿರುವ ಯಾವುದೇ ಕಟ್ಟಡಕ್ಕೆ ಪ್ರವೇಶ ಮಾಡಿದ್ರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದರು. ಜೊತೆಗೆ ಅವರ ಬಳಿಯಿದ್ದ ಬಿಸಿಯೂಟ ಯೋಜನೆ ಸಾಮಗ್ರಿಗಳು ಸೇರಿದಂತೆ ಶಾಲಾ ಸಾಮಗ್ರಿಗಳನ್ನು ಮರುವಶಕ್ಕೆ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.