ETV Bharat / state

ಮನ್ಮುಲ್​ 1 ಸಾವಿರ ಕೋಟಿ ಹಗರಣ ಆರೋಪ : ಸಚಿವ ನಾರಾಯಣ ಗೌಡ ಹೇಳಿದ್ದೇನು?

author img

By

Published : Nov 2, 2021, 12:33 PM IST

ರೈತರಿಗೆ ಅನ್ಯಾಯವಾಗುವುದನ್ನ ನಾವು ಸಹಿಸುವುದಿಲ್ಲ. ತಪ್ಪಿತಸ್ಥರಿಗೆ ತಕ್ಕ ಪಾಠ ಕಲಿಸಬೇಕಾಗುತ್ತೆ. ನಾವು ಬಡವರು, ರೈತರು, ಮಂಡ್ಯ ಜಿಲ್ಲೆಯ ಪರ ಇರುತ್ತೇವೆ. ಚಲುವರಾಯಸ್ವಾಮಿ ಮನ್ಮುಲ್ ಅಕ್ರಮದ ಬಗ್ಗೆ ಮಾಹಿತಿ ಕೊಡಲಿ, ಅದನ್ನ ನಾವು ಎತ್ತಿ ಹಿಡಿಯುತ್ತೇವೆ ಎಂದು ಜೆಡಿಎಸ್ ದಳಪತಿಗಳಿಗೆ ಟಾಂಗ್​ ಕೊಟ್ಟರು..

ನಾರಾಯಣ ಗೌಡ
ನಾರಾಯಣ ಗೌಡ

ಮಂಡ್ಯ : ಮನ್ಮುಲ್​ನಲ್ಲಿ (ಕರ್ನಾಟಕ ಸರ್ಕಾರ ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ) ಒಂದು ಸಾವಿರ ಕೋಟಿ ರೂ.ಗಳ ಹಗರಣ ನಡೆದಿದೆ ಎಂಬ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿಕೆಗೆ ಸಂಬಂಧಿಸಿದಂತೆ ಕ್ರೀಡಾ ಹಾಗೂ ರೇಷ್ಮೆ ಸಚಿವ ಕೆ ಸಿ ನಾರಾಯಣ ಗೌಡ ಪ್ರತಿಕ್ರಿಯೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಸಾವಿರ ಕೋಟಿ ಹಗರಣ ನಡೆದಿದ್ದರೂ ನಡೆದಿರಬಹುದು. ಮನ್ಮುಲ್‌ನಿಂದ ರೈತರಿಗೆ, ಮಹಿಳೆಯರಿಗೆ ಹೆಚ್ಚು ಅನುಕೂಲ ಆಗುತ್ತಿದೆ. ಚಲುವರಾಯಸ್ವಾಮಿ ಹೇಳಿರುವುದಲ್ಲಿ ಸತ್ಯ ಇರಬಹುದು.

ರೈತರಿಗೆ ಅನ್ಯಾಯವಾಗುವುದನ್ನ ನಾವು ಸಹಿಸುವುದಿಲ್ಲ. ತಪ್ಪಿತಸ್ಥರಿಗೆ ತಕ್ಕ ಪಾಠ ಕಲಿಸಬೇಕಾಗುತ್ತೆ. ನಾವು ಬಡವರು, ರೈತರು, ಮಂಡ್ಯ ಜಿಲ್ಲೆಯ ಪರ ಇರುತ್ತೇವೆ. ಚಲುವರಾಯಸ್ವಾಮಿ ಮನ್ಮುಲ್ ಅಕ್ರಮದ ಬಗ್ಗೆ ಮಾಹಿತಿ ಕೊಡಲಿ, ಅದನ್ನ ನಾವು ಎತ್ತಿ ಹಿಡಿಯುತ್ತೇವೆ ಎಂದು ಜೆಡಿಎಸ್ ದಳಪತಿಗಳಿಗೆ ಟಾಂಗ್​ ಕೊಟ್ಟರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಾರಾಯಣ ಗೌಡ

ಮೈ ಶುಗರ್ ಸರ್ಕಾರಿ ಸ್ವಾಮ್ಯದಲ್ಲೇ ನಡೆಸಲು ತೀರ್ಮಾನ : ಮೈಶುಗರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ನಡೆಸಲು ಸರ್ಕಾರ ತೀರ್ಮಾನಿಸಿದೆ‌. ಹಾಗಾಗಿ, ಇಂದು ಮೈ ಶುಗರ್ ಕಾರ್ಖಾನೆಗೆ ಭೇಟಿ ನೀಡಿದ್ದೇನೆ ಎಂದ ಅವರು, ಎಂಡಿಯಾಗಿ ಗೋಪಾಲಕೃಷ್ಣ ಅವರನ್ನ ನೇಮಿಸಲಾಗಿದೆ ಎಂದರು.

ಕಾರ್ಖಾನೆ ಪ್ರಾರಂಭಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ‌‌. ಶೀಘ್ರದಲ್ಲೇ ಕಾರ್ಖಾನೆ ಪ್ರಾರಂಭವಾಗುತ್ತದೆ. ಎಂಡಿ ಅವರಿಗೆ ಹೆಚ್ಚಿನ ಬಲ ಬರಲಿ. ಎಲ್ಲರೂ ಮೈಶುಗರ್ ಆರಂಭಕ್ಕೆ ಸಹಕರಿಸಿ ಎಂದು ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.