ETV Bharat / state

ಮಂಡ್ಯದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕ ಲೋಕಾರ್ಪಣೆ

author img

By

Published : Jun 23, 2021, 3:53 PM IST

ಕೊರೊನಾ ಸೋಂಕಿತರಿಗೆ ಹೆಚ್ಚಾಗಿ ಕಾಡುತ್ತಿದ್ದ ಆಮ್ಲಜನಕದ ಕೊರತೆ ನೀಗಿಸಿ ಸಾವಿನ ದವಡೆಯಿಂದ ಪಾರು ಮಾಡುವ ಸಲುವಾಗಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮುಂದಾಲೋಚನೆಯ ಫಲವಾಗಿ ಆಸ್ಪತ್ರೆ ಆವರಣದಲ್ಲಿ ನಿರ್ಮಾಣಗೊಂಡಿರುವ ಬೃಹತ್ ಮಟ್ಟದ ಆಕ್ಸಿಜನ್ ಘಟಕ ಉದ್ಘಾಟನೆಯಾಗಿದೆ.

ಮಂಡ್ಯ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕ ಲೋಕಾರ್ಪಣೆ
ಮಂಡ್ಯ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕ ಲೋಕಾರ್ಪಣೆ

ಮಂಡ್ಯ: ಕೊರೊನಾ ಸೋಂಕಿತರ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಹೊಸದಾಗಿ ಸ್ಥಾಪಿಸಿರುವ ಹೆಚ್ಚಿನ ಸಾಮರ್ಥ್ಯವುಳ್ಳ ಆಮ್ಲಜನಕ ಜನರೇಟರ್ ಘಟಕವನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ದೆಹಲಿಯಿಂದ ಆನ್‌ಲೈನ್ ಮೂಲಕ ಉದ್ಘಾಟಿಸಿದ್ದಾರೆ.

ಆಕ್ಸಿಜನ್ ಘಟಕ ಲೋಕಾರ್ಪಣೆ ನಂತರ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಆಸ್ಪತ್ರೆಯ ಪ್ರಾಂಶುಪಾಲರೂ ಮತ್ತು ಅಧಿಕಾರಿಗಳು ಘಟಕಕ್ಕೆ ಪೂಜೆ ಪುರಸ್ಕಾರಗಳನ್ನು ನೆರವೇರಿಸಿ ಅಧಿಕೃತವಾಗಿ ಚಾಲನೆ ನೀಡಿದರು.

700 ಲೀ ಸಾಮರ್ಥ್ಯ:
ಈ ಘಟಕ ಪ್ರತಿ ನಿಮಿಷಕ್ಕೆ 700 ಲೀಟರ್​ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಂದಾಜು ಶೇ.93 ರಷ್ಟು ಸಾಂದ್ರತೆಯಳ್ಳ ಆಮ್ಲಜನಕ ಆಸ್ಪತ್ರೆಯ ರೋಗಿಗಳಿಗೆ ಇನ್ಮುಂದೆ ನಿರಂತರವಾಗಿ ಲಭ್ಯವಾಗಲಿದೆ. ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ಕಾರ್ಯಕರ್ತರು ಮತ್ತು ಆಸ್ಪತ್ರೆಯ ಸೇವೆಗಳನ್ನು ಬಳಸುತ್ತಿರುವ ಸುತ್ತಮುತ್ತಲಿನ ಎಲ್ಲ ವರ್ಗದ ಜನರಿಗೂ ಅನುಕೂಲವಾಗುತ್ತದೆ ಎಂದು ಶ್ರೀಗಳು ಹೇಳಿದ್ದಾರೆ.

143 ಸಿಲಿಂಡರ್ ಅಥವಾ ಸಾಮರ್ಥ್ಯ 1ಕಿ.ಲೀ ದ್ರವರೂಪದ ಆಮ್ಲಜನಕಕ್ಕೆ ಸಮನಾಗಿರುತ್ತದೆ. ಈ ವ್ಯವಸ್ಥೆಯಿಂದ ಹೊರಬರುವ ಆಮ್ಲಜನಕ ಶೇ 93ರ (+/-3%) ಪ್ರಮಾಣದಲ್ಲಿದೆ. ಅಂದಾಜು 150 ಆಮ್ಲಜನಕ ಅವಲಂಬಿತ ರೋಗಿಗಳಿಗೆ ಅಥವಾ ವೆಂಟಿಲೇಟರ್ ಮೇಲಿರುವ 40 ರೋಗಿಗಳಿಗೆ ಏಕಕಾಲದಲ್ಲಿ ಪ್ರಾಣ ವಾಯು ಸಿಗಲಿದೆ. 1 ಕೋಟಿ ಬೆಲೆಬಾಳುವ ಈ ಆಮ್ಲಜನಕ ಜನರೇಟರ್​ನಲ್ಲಿ ಶೇಖರಿಸಲ್ಪಟ್ಟ ಆಮ್ಲಜನಕವನ್ನು ಅಗತ್ಯವಿರುವ ಆಸ್ಪತ್ರೆಯ ಎಲ್ಲಾ ವಾರ್ಡ್‌ಗಳಿಗೂ ರವಾನೆಯಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.

ಓದಿ:ವಿಸ್ಮಯಾ ಆತ್ಮಹತ್ಯೆ ಪ್ರಕರಣ: ಬಲವಾದ ಪುರಾವೆ ಲಭ್ಯವಾಗಿವೆ ಎಂದ ತನಿಖಾಧಿಕಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.