ETV Bharat / state

ಮಲಗಿದ್ದ ಇಬ್ಬರ ಬರ್ಬರ ಕೊಲೆ: ಬೆಚ್ಚಿಬಿದ್ದ ಮಂಡ್ಯ ಜಿಲ್ಲೆ

author img

By

Published : Sep 4, 2020, 10:50 AM IST

Updated : Sep 4, 2020, 11:09 AM IST

ಮಲಗಿದ್ದ ಇಬ್ಬರ ಬರ್ಬರ ಕೊಲೆ
ಮಲಗಿದ್ದ ಇಬ್ಬರ ಬರ್ಬರ ಕೊಲೆ

ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಮಂಡ್ಯ: ಮಲಗಿದ್ದವರ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿ ಜೋಡಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಯಲಿಯೂರು ಸಮೀಪದ ತೋಟದ ಮನೆಯಲ್ಲಿ‌ ನಡೆದಿದೆ.

ಮಾರುತಿ ಬ್ರಿಕ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ರಾಮಮೂರ್ತಿ(46) ಮತ್ತು ಬಸವರಾಜು(44) ಎಂಬವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ, ಕೊಲೆ ಮಾಡಲಾಗಿದೆ.

ಮಲಗಿದ್ದ ಇಬ್ಬರ ಬರ್ಬರ ಕೊಲೆ

ರಾತ್ರಿ ಮಲಗಿದ್ದ ವೇಳೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರ ಭೇಟಿ ಪರೀಶೀಲನೆ ನಡೆಸಿದ್ದು, ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated :Sep 4, 2020, 11:09 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.