ETV Bharat / state

ಆಸ್ತಿ ವಿವಾದ: ತಂದೆ, ತಮ್ಮನಿಂದಲೇ ಅಣ್ಣನ ಮನೆಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನ ಆರೋಪ

author img

By

Published : Jan 3, 2022, 11:56 AM IST

ಆಸ್ತಿ ವಿವಾದ ಹಿನ್ನೆಲೆ ತಂದೆ ಹಾಗೂ ಅಣ್ಣನ ಮನೆಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ನೆಲಜೇರಿ ಗ್ರಾಮದಲ್ಲಿ ನಡೆದಿದೆ.

ಚೆನ್ನಪ್ಪಗೌಡ  ಹಾಗೂ  ವೆಂಕಟೇಶ್
ಚೆನ್ನಪ್ಪಗೌಡ ಹಾಗೂ ವೆಂಕಟೇಶ್

ಕೊಪ್ಪಳ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಹಾಗೂ ತಮ್ಮನಿಂದಲೇ ಅಣ್ಣನ ಕೊಲೆ ಯತ್ನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ನೆಲಜೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಆಸ್ತಿ ವಿವಾದ: ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ನಿನ್ನೆ(ಭಾನುವಾರ) ತಡರಾತ್ರಿ ತಂದೆ ಚೆನ್ನಪ್ಪಗೌಡ ಹಾಗೂ ತಮ್ಮ ವೆಂಕಟೇಶ್ ಎಂಬುವವರು ತಮ್ಮ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಅನಿಲ್​ ಕುಮಾರ್ ಎಂಬುವವರು ಆರೋಪಿಸಿದ್ದಾರೆ.

ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಇವರ ಮಧ್ಯೆ ವೈಮನಸು ಉಂಟಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ ಅನಿಲ್​ ಕುಮಾರ್ ಮನೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ನಿರ್ಧರಿಸಿದ್ದಾರೆ. ಆದರೆ ಅದೃಷ್ಟವಶಾತ್ ಅನಿಲ್ ಕುಮಾರ್ ಹಾಗೂ ಅವರ ಕುಟುಂಬ ಅಪಾಯದಿಂದ ಪಾರಾಗಿದೆ ಎನ್ನಲಾಗ್ತಿದೆ.

ಈ ಸಂಬಂಧ ಅನಿಲ್​ ಕುಮಾರ ಬೇವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಅನೀಲ ಕುಮಾರ್ ತಂದೆ ಚೆನ್ನಪ್ಪಗೌಡ ಹಾಗೂ ತಮ್ಮ ವೆಂಕಟೇಶ್ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಗಂಡ ಮನೆಯಲ್ಲಿ ಇಲ್ಲದಾಗ ಅತ್ತೆ - ಮಾವನ ಕೊಂದು ಬೆಂಕಿಯಿಟ್ಟ ಸೊಸೆ.. ಬಳಿಕ ಪಕ್ಕದ ರೂಂನಲ್ಲಿ ಲಾಕ್​!

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.