ETV Bharat / state

2-ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ : ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಅಜ್ಜಿ

author img

By

Published : Jan 17, 2021, 2:24 AM IST

ಬೆನ್ನು ಬಾಗಿದರೂ ವೇಗದ ಹೆಜ್ಜೆ ಹಾಕಿ ಯುವಕರೂ ಕೂಡ ನಾಚಿಸುವಂತೆ ಹೆಜ್ಜೆ ಹಾಕುತ್ತಿರುವುದು ಗಮನಾರ್ಹ ಎನಿಸಿತು. ಈ ಕುರಿತು ಅಜ್ಜಿಯನ್ನು ಮಾತನಾಡಿಸಿದಾಗ, ನನ್ನ ಮೊಮ್ಮಕ್ಕಳ 2-ಎ ಮೀಸಲಾತಿ ಸಿಗಲಿ ಎಂದು ಸ್ವಾಮಿಗಳೊಂದಿಗೆ ಪಾದಯಾತ್ರೆ ಮಾಡುತ್ತಿರುವೆ ಎಂದಳು.

Old woman involved in panchamasali padayatra
2-ಎ ಮೀಸಲಾತಿಗೆ ಆಗ್ರಹಿಸಿ ಹೋರಾಟದಲ್ಲಿ ಹೆಜ್ಜೆ ಹಾಕಿದ ಅಜ್ಜಿ

ಕುಷ್ಟಗಿ: ಪಂಚಮಸಾಲಿ ಸಮಾಜಕ್ಕೆ 2-ಎ ಮೀಸಲಾತಿಗೆ ಆಗ್ರಹಿಸಿ ಕೂಡಲ ಸಂಗಮದಿಮದ ಬೆಂಗಳೂರು ವಿಧಾನಸೌಧವರೆಗೂ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ಹೋರಾಟದಲ್ಲಿ ಬಿಜಕಲ್ ಗ್ರಾಮದ ವಯೋವೃಧ್ಧೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.

ಬಿಜಕಲ್ ಗ್ರಾಮದ ನಾಗಮ್ಮ ತಳವಗೇರ ವೃಧ್ಧೆ. ಬೆನ್ನು ಬಾಗಿದರೂ ವೇಗದ ಹೆಜ್ಜೆ ಹಾಕಿ ಯುವಕರೂ ಕೂಡ ನಾಚಿಸುವಂತೆ ಹೆಜ್ಜೆ ಹಾಕುತ್ತಿರುವುದು ಗಮನಾರ್ಹ ಎನಿಸಿತು. ಈ ಕುರಿತು ಅಜ್ಜಿಯನ್ನು ಮಾತನಾಡಿಸಿದಾಗ, ನನ್ನ ಮೊಮ್ಮಕ್ಕಳ 2-ಎ ಮೀಸಲಾತಿ ಸಿಗಲಿ ಎಂದು ಸ್ವಾಮಿಗಳೊಂದಿಗೆ ಪಾದಯಾತ್ರೆ ಮಾಡುತ್ತಿರುವೆ. ನನ್ನಿಂದ ಎಷ್ಟು ಸಾದ್ಯವೋ ಅಷ್ಟು ಅವರ ಜೊತೆಯಲ್ಲಿ ಪಾಯಾತ್ರೆ ಭಾಗವಹಿಸುವೆ ಎಂದರು.

2-ಎ ಮೀಸಲಾತಿಗೆ ಆಗ್ರಹಿಸಿ ಹೋರಾಟದಲ್ಲಿ ಹೆಜ್ಜೆ ಹಾಕಿದ ಅಜ್ಜಿ

ಸಾಧ್ಯವಾದರೆ ಬೆಂಗಳೂರು ವಿಧಾನಸೌಧಕ್ಕೆ ಹೋಗಲು ಸಿದ್ಧಳಾಗಿರುವೆ. ಸ್ವಾಮೀಜಿಯವರ ಪುಣ್ಯದ ಈ ಪಾದಯಾತ್ರೆಯಿಂದ 2-ಎ ಮೀಸಲಾತಿ ಸಿಗಲಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.