ಬೋನಿಗೆ ಬಿದ್ದ ಚಿರತೆ: ಜೋಡಿ ಚಿರತೆ ಪೈಕಿ ಗಂಡು ಚಿರತೆ ಸೆರೆ

author img

By

Published : Aug 29, 2022, 10:19 AM IST

leopard captured
ಚಿರತೆ ಸೆರೆ ()

ಜಯನಗರದ ಸಿದ್ದಿಕೇರಿ ರಸ್ತೆಯಲ್ಲಿರುವ ಜನವಸತಿ ಪ್ರದೇಶದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.

ಗಂಗಾವತಿ: ಇಲ್ಲಿನ ಜಯನಗರದ ಸಿದ್ದಿಕೇರಿ ರಸ್ತೆಯಲ್ಲಿರುವ ಜನವಸತಿ ಪ್ರದೇಶದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆಯೊಂದು ಬಿದ್ದಿರುವ ಘಟನೆ ತಡರಾತ್ರಿ ನಡೆದಿದೆ. ಸುಮಾರು ನಾಲ್ಕರಿಂದ ಐದು ವರ್ಷದ ಗಂಡು ಚಿರತೆ ಸೆರೆಯಾಗಿದೆ. ಬೇಟೆ ಅರಸಿಕೊಂಡು ವಸತಿ ಪ್ರದೇಶಕ್ಕೆ ಬಂದಿರುವ ಸಾಧ್ಯತೆ ಇದೆ. ಸೆರೆಯಾದ ಚಿರತೆ ಸಂಪೂರ್ಣ ಆರೋಗ್ಯವಾಗಿದ್ದು, ಈಗಾಗಲೇ ಸುರಕ್ಷಿತ ಪ್ರದೇಶದಲ್ಲಿ ಬಿಟ್ಟು ಬರಲಾಗಿದೆ ಎಂದು ಆರ್​​ಎಫ್​​ಓ ಶಿವರಾಜ ಮೇಟಿ ತಿಳಿಸಿದ್ದಾರೆ.

ಕಳೆದ ಎರಡು ದಿನದ ಹಿಂದೆ ಇಲ್ಲಿನ ಜಯನಗರದ ಜನವಸತಿ ಪ್ರದೇಶದ ಸಮೀಪ ಜೋಡಿ ಚಿರತೆ ಕಂಡು ಬಂದಿದ್ದವು. ಹೀಗಾಗಿ ಅರಣ್ಯ ಇಲಾಖೆ ಚಿರತೆ ಸೆರೆಗೆ ಬೋನು ಇಟ್ಟಿತ್ತು. ಆದರೆ ಸೆರೆಯಾದ ಚಿರತೆ, ಜೋಡಿ ಚಿರತೆಯಲ್ಲಿರುವುದರ ಪೈಕಿಯೇ ಅಥವಾ ಬೇರೆಯದ್ದೆ? ಎಂಬ ಸಂದೇಹ ವ್ಯಕ್ತವಾಗಿದೆ.

ಇದನ್ನೂ ಓದಿ: ಬೆಳಗಾವಿ ಚಿರತೆ ಸೆರೆ ಕಾರ್ಯಾಚರಣೆ.. ಶಿವಮೊಗ್ಗದ ಸಕ್ರೆಬೈಲು ಬಿಡಾರದಿಂದ 2 ಆನೆಗಳ ಆಗಮನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.